ETV Bharat / state

ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ: ಎಸ್.ಎನ್ ಚೆನ್ನಬಸಪ್ಪ - undefined

ಯುವ ಜನರು ಕೇವಲ ಸರ್ಕಾರಿ ಹಾಗೂ ಕಂಪನಿಗಳ ಕೆಲಸಗಳಿಗೆ ಆಸಕ್ತಿ ತೋರದೆ ತಮ್ಮಲ್ಲಿರುವ ವಿಶಿಷ್ಟ ಕೌಶಲ್ಯಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯ ಹಾಗೂ ಸ್ವಯಂ ಉದ್ಯೋಗದ ಪಾತ್ರವನ್ನು ಸಾರಬೇಕು ಎಂದು ಶಿವಮೊಗ್ಗ ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಹೇಳಿದರು.

ಕೌಶಲ್ಯಾಭಿವೃದ್ಧಿ
author img

By

Published : Jul 16, 2019, 3:34 AM IST

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಮಹನಗರ ಪಾಲಿಕೆ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯಾಭಿವೃದ್ಧಿ ದಿನಾಚರಣೆ ಕಾರ್ಯಕ್ರಮವನ್ನು ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೌಶಲ್ಯ ದಿನಾಚರಣೆ ಆಚರಿಸಿ ಮುಗಿಸುವುದಾಗದೆ, ಇಲ್ಲಿಂದಲೇ ನೂತನ ಪ್ರಯೋಗಗಳ ಚಾಲನೆಗೆ ಯುವಕರು ಪ್ರೇರಣೆಯಾಗುವಂತಹ ಕಾರ್ಯಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳು ಪೂರಕ ಆಸಕ್ತಿ ವಹಿಸಬೇಕು. ಇಂದಿನ ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗೂ ವಿಶ್ವವೇ ನಮ್ಮ ದೇಶದ ಯುವಕರ ಕೌಶಲ್ಯದ ಮೇಲೆ ಕುತೂಹಲವನ್ನಿರಿಸಿದೆ. ಇದನ್ನು ಸಾಧಿಸಿ ತೋರಿಸುವತ್ತ ನಮ್ಮ ಯುವಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಮಹನಗರ ಪಾಲಿಕೆ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯಾಭಿವೃದ್ಧಿ ದಿನಾಚರಣೆ ಕಾರ್ಯಕ್ರಮವನ್ನು ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೌಶಲ್ಯ ದಿನಾಚರಣೆ ಆಚರಿಸಿ ಮುಗಿಸುವುದಾಗದೆ, ಇಲ್ಲಿಂದಲೇ ನೂತನ ಪ್ರಯೋಗಗಳ ಚಾಲನೆಗೆ ಯುವಕರು ಪ್ರೇರಣೆಯಾಗುವಂತಹ ಕಾರ್ಯಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳು ಪೂರಕ ಆಸಕ್ತಿ ವಹಿಸಬೇಕು. ಇಂದಿನ ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗೂ ವಿಶ್ವವೇ ನಮ್ಮ ದೇಶದ ಯುವಕರ ಕೌಶಲ್ಯದ ಮೇಲೆ ಕುತೂಹಲವನ್ನಿರಿಸಿದೆ. ಇದನ್ನು ಸಾಧಿಸಿ ತೋರಿಸುವತ್ತ ನಮ್ಮ ಯುವಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.

Intro:ಶಿವಮೊಗ್ಗ,
ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯ ಪಾತ್ರವನ್ನು ಯುವಜನತೆ ಸಾರಬೇಕು; ಎಸ್.ಎನ್ ಚೆನ್ನಬಸಪ್ಪ

ಎಲ್ಲರೂ ಸರ್ಕಾರಿ ಉದ್ಯೋಗವನ್ನೇ ಪಡೆಯಲು ಸಾಧ್ಯವಿಲ್ಲ. ಯುವ ಜನರು ಕೇವಲ ಸರ್ಕಾರಿ ಹಾಗೂ ಕಂಪನಿಗಳ ಕೆಲಸಗಳಿಗೆ ಆಸಕ್ತಿ ತೋರದೆ ತಮ್ಮಲ್ಲಿರುವ ವಿಶಿಷ್ಟ ಕೌಶಲ್ಯಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯ ಹಾಗೂ ಸ್ವಯಂ ಉದ್ಯೋಗದ ಪಾತ್ರವನ್ನು ಸಾರಬೇಕು ಎಂದು ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಮಹನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯಾಭಿವೃದ್ಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯ ದಿನಾಚರಣೆ ಆಚರಿಸಿ ಮುಗಿಸುವುದಾಗದೆ, ಇಲ್ಲಿಂದಲೇ ನೂತನ ಪ್ರಯೋಗಗಳ ಚಾಲನೆಗೆ ಯುವಕರಿಗೆ ಪ್ರೇರಣೆಯಾಗುವಂತಹ ಕಾರ್ಯಕ್ರಮವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳು ಪೂರಕ ಆಸಕ್ತಿ ಹಾಗೂ ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಇಂದಿನ ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗೂ ವಿಶ್ವವೇ ನಮ್ಮ ದೇಶದ ಯುವಕರ ಕೌಶಲ್ಯದ ಮೇಲೆ ಕುತೂಹಲವನ್ನಿರಿಸಿದೆ. ಇದನ್ನು ಸಾಧಿಸಿ ತೋರಿಸುವತ್ತ ನಮ್ಮ ಯುವಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಬಳಸಿಕೊಂಡು ಬೆಳೆಯುವುದು ವ್ಯಕ್ತಿಯ ಬೌದ್ಧಿಕ ಶಕ್ತಿಯ ಮೇಲೆ ನಿಂತಿರುತ್ತದೆ. ಸ್ವಲ್ಪ ವಿಭಿನ್ನವಾಗಿ ಆಲೋಚಿಸಿದರೆ ಅಸಾಧ್ಯ ಏನಿಸಿದ್ದು ಸಹ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶಿವರಾಮೇಗೌಡ, ಜಿಟಿಟಿಸಿಯ ಪ್ರಾಂಶುಪಾಲ ಸುರೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷ್ಯ ವಾಸುದೇವ್ ಹಾಗೂ ಮುಂತಾದ ಗಣ್ಯರು ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.