ಶಿವಮೊಗ್ಗ: ಕೋವಿಡ್-19 ಸಿಎಂ ಪರಿಹಾರ ನಿಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಯಾಳುಗಳು 5ರಿಂದ 10 ಸಾವಿರದವರೆಗೂ ದೇಣಿಗೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯ ವತಿಯಿಂದ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆಗೆ ಹೋದಾಗ ಕೂಲಿಯಾಳುಗಳು ಚೆಕ್ ನೀಡಿದರು.
ನಮಗೂ ಕಷ್ಟವಿದೆ. ಆದರೆ ಕೊರೊನಾ ಸೂಂಕಿತರು ನಮಗಿಂತಲೂ ಕಷ್ಟದಲ್ಲಿ ಇದ್ದಾರೆ. ಅವರಿಗ ಸರ್ಕಾರ ಸಹಾಯ ಮಾಡುತ್ತಿದೆ. ನಮ್ಮ ಕೈಯಲ್ಲಿ ಆದಷ್ಟು ಅಲ್ಪ ಪ್ರಮಾಣದ ಸಹಾಯ ಮಾಡುತ್ತಿದ್ದೆವೆ ಎಂದು ಗ್ರಾಮದ ಮಹಿಳೆ ಸವಿತಾ ತಿಳಿಸಿದರು.