ETV Bharat / state

ಶಿವಮೊಗ್ಗ: ಹೆತ್ತ ಮಕ್ಕಳನ್ನು ಕೊಂದ ತಾಯಿ ನಿಧನ - women died who killed her children by poison at shimoga

ಗಂಡ ತೀರಿಹೋದ ನಂತರ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಭದ್ರಾವತಿಯ ಸುರಗಿತೋಪಿನ ಮಹಿಳೆ ಇಬ್ಬರು ಮಕ್ಕಳನ್ನು ಶಿವಮೊಗ್ಗದ ಗಾಂಧಿ‌ಪಾರ್ಕ್ ಗೆ ಕರೆದುಕೊಂಡು ಬಂದು ಜ್ಯೂಸ್‌ನಲ್ಲಿ ವಿಷದ ಮಾತ್ರೆ ಬೆರೆಸಿ ಸಾಯಿಸಿದ್ದಳು.

women-died-who-killed-her-children-by-poison-at-shimoga
ಹೆತ್ತ ಮಕ್ಕಳನ್ನು ಕೊಂದ ತಾಯಿ ನಿಧನ
author img

By

Published : Jan 8, 2021, 9:45 PM IST

ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿ ಎಂಬ ಕಾರಣಕ್ಕೆ ಮಕ್ಕಳಿಬ್ಬರನ್ನು ವಿಷನೀಡಿ ಹತ್ಯೆಗೈದ ಮಹಿಳೆ ಇಂದು ಮೃತಪಟ್ಟಿದ್ದಾಳೆ.

ತನ್ನ ಗಂಡ ತೀರಿಹೋದ ನಂತರ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಭದ್ರಾವತಿಯ ಸುರಗಿತೋಪಿನ ಮಹಿಳೆ, ಜನವರಿ‌ 4 ರಂದು ತನ್ನ ಇಬ್ಬರು ಮಕ್ಕಳನ್ನು ಶಿವಮೊಗ್ಗದ ಗಾಂಧಿ‌ಪಾರ್ಕ್‌ಗೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಜ್ಯೂಸ್‌ನಲ್ಲಿ ವಿಷದ ಮಾತ್ರೆ ಹಾಕಿದ್ದಾಳೆ. ನಂತರ ಅಸ್ವಸ್ಥಗೊಂಡ ಮಕ್ಕಳನ್ನು ತಾನೇ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಸಾವನ್ನಪ್ಪಿದ್ದರು.

ಓದಿ: ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ: ನದಿಯಂತಾದ ರಸ್ತೆಗಳು, ತಗ್ಗು ಪ್ರದೇಶ ಜಲಾವೃತ

ನಂತರ ಕೋಟೆ ಪೊಲೀಸರು ಮಹಿಳೆಯ ವಿಚಾರಣೆ ನಡೆಸಿ, ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಆದರೆ, ಇಂದು ಬೆಳಗ್ಗೆ ತೀವ್ರ ‌ಅನಾರೋಗ್ಯದಿಂದ ಬಳಲಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಲೋ ಬಿಪಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ.

ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿ ಎಂಬ ಕಾರಣಕ್ಕೆ ಮಕ್ಕಳಿಬ್ಬರನ್ನು ವಿಷನೀಡಿ ಹತ್ಯೆಗೈದ ಮಹಿಳೆ ಇಂದು ಮೃತಪಟ್ಟಿದ್ದಾಳೆ.

ತನ್ನ ಗಂಡ ತೀರಿಹೋದ ನಂತರ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಭದ್ರಾವತಿಯ ಸುರಗಿತೋಪಿನ ಮಹಿಳೆ, ಜನವರಿ‌ 4 ರಂದು ತನ್ನ ಇಬ್ಬರು ಮಕ್ಕಳನ್ನು ಶಿವಮೊಗ್ಗದ ಗಾಂಧಿ‌ಪಾರ್ಕ್‌ಗೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಜ್ಯೂಸ್‌ನಲ್ಲಿ ವಿಷದ ಮಾತ್ರೆ ಹಾಕಿದ್ದಾಳೆ. ನಂತರ ಅಸ್ವಸ್ಥಗೊಂಡ ಮಕ್ಕಳನ್ನು ತಾನೇ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಸಾವನ್ನಪ್ಪಿದ್ದರು.

ಓದಿ: ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ: ನದಿಯಂತಾದ ರಸ್ತೆಗಳು, ತಗ್ಗು ಪ್ರದೇಶ ಜಲಾವೃತ

ನಂತರ ಕೋಟೆ ಪೊಲೀಸರು ಮಹಿಳೆಯ ವಿಚಾರಣೆ ನಡೆಸಿ, ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಆದರೆ, ಇಂದು ಬೆಳಗ್ಗೆ ತೀವ್ರ ‌ಅನಾರೋಗ್ಯದಿಂದ ಬಳಲಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಲೋ ಬಿಪಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.