ETV Bharat / state

ನಮಗೆ ಸಿಕ್ಕಿರುವ ಮಾಣಿಕ್ಯ ಅಂದ್ರೆ ಅದು ನರೇಂದ್ರ ಮೋದಿ: ನಿರ್ಮಲಾ ಸೀತಾರಾಮನ್

ಶಿವಮೊಗ್ಗದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ಸಚಿವೆ ನಿರ್ಮಲಾ ಸೀತಾರಾಮನ್​​ ಮೈತ್ರಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

author img

By

Published : Apr 15, 2019, 8:20 PM IST

ಸಚಿವೆ ನಿರ್ಮಲಾ ಸೀತರಾಮನ್

ಶಿವಮೊಗ್ಗ: ಪ್ರಧಾನಿ ಮೋದಿ ರೈತರಿಗಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು‌ ರಾಜ್ಯದ ರೈತರಿಗೆ ತಲುಪಿಸಲು ಮೈತ್ರಿ‌ ಸರ್ಕಾರ ಸಹಕರಿಸುತ್ತಿಲ್ಲ ಎಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಎನ್ಇಎಸ್ ಮೈದಾನದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿ ಅವರು ದೇಶದ ಗಡಿ ಕಾಯುವ ಸೈನಿಕರಿಗೆ ಹಾಗೂ ದೇಶದ ರೈತರಿಗೆ ಸಾಕಷ್ಟು ಗೌರವ ನೀಡುತ್ತಾರೆ. ಅದಕ್ಕಾಗಿ ದೇಶದ ರೈತರಿಗೆ ಗೌರವ ನೀಡುವ ಸಲುವಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ 6 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತರಲಾಗಿದೆ.

ಸಚಿವೆ ನಿರ್ಮಲಾ ಸೀತಾರಾಮನ್

ಯಾವುದೇ ದೇಶಕ್ಕಾಗಲಿ ಮಾಣಿಕ್ಯ ಮತ್ತೆ ಮತ್ತೆ ಸಿಗೋದಿಲ್ಲ. ನಮಗೆ ಸಿಕ್ಕಿರುವ ಮಾಣಿಕ್ಯ ಅಂದ್ರೆ ಅದು ನರೇಂದ್ರ ಮೋದಿ. ಅವರನ್ನು ಉಳಿಸಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು.‌ 1971 ರಲ್ಲಿ ಕಾಂಗ್ರೆಸ್​​ ಇಂದಿರಾ ಗಾಂಧಿ ಅವರು ಗರೀಬಿ‌ ಹಟಾವೋ ಎಂದರು. ನಂತ್ರ ರಾಜೀವ್ ಗಾಂಧಿ ಅವರು ಸಹ ಅದನ್ನೆ ಹೇಳಿದ್ರು, ಇನ್ನು ಮನಮೋಹನ್ ಸಿಂಗ್, ಬಜೆಟ್ ಮೊದಲಿಗೆ ಈ ದೇಶದ ಅಲ್ಪ ಸಂಖ್ಯಾಂತರಿಗೆ ಮೀಸಲು ಎಂದರು.‌ ಈಗ ಗರೀಬಿ ಹಟಾವೋ ಘೋಷಣೆಯನ್ನೇ ’ನ್ಯಾಯ್​’ ಎಂದು ಮರು ನಾಮಕರಣ ಮಾಡಿ ಜನರ ಮುಂದೆ ಬರುತ್ತಿದ್ದಾರೆ. ದೇಶದ ಅಭಿವೃದ್ದಿ ಕುರಿತು ದೂರದೃಷ್ಟಿ ಹೊಂದಿರುವ ಮೋದಿಯವರನ್ನೇ ಗೆಲ್ಲಿಸಿ. ಇದಕ್ಕಾಗಿ‌ ಶಿವಮೊಗ್ಗದಲ್ಲಿ ರಾಘಣ್ಣನಿಗೆ ಆಶೀರ್ವದಿಸಿ ಎಂದು ವಿನಂತಿ ಮಾಡಿಕೊಂಡರು.

ಪಾಕಿಸ್ತಾನದವರಿಗೆ ನಿರ್ಮಲಾ ಸೀತಾರಾಮನ್​​ ದುರ್ಗಾಮಾತೆ:

ದುಷ್ಟರನ್ನು ಕೊಲ್ಲಲು ದುರ್ಗಾಮಾತೆ ಬರುತ್ತಾಳೆ. ಪಾಕಿಸ್ತಾನದವರ ಪಾಲಿಗೆ ನಿರ್ಮಲಾ ಸೀತಾರಾಮನ್, ನಿಜವಾಗ್ಲೂ ದುರ್ಗಾ ಮಾತೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆಭಿಪ್ರಾಯಪಟ್ಟರು. ಮಹಿಳಾ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ರಾಘವೇಂದ್ರ ಅವರಿಗೆ ತಾಯಿ ಇಲ್ಲ.‌ ಇದರಿಂದ ಜಿಲ್ಲೆಯ ಮಾತೆಯರೇ ರಾಘವೇಂದ್ರಗೆ ತಾಯಂದಿರಾಗಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಶಿವಮೊಗ್ಗ: ಪ್ರಧಾನಿ ಮೋದಿ ರೈತರಿಗಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು‌ ರಾಜ್ಯದ ರೈತರಿಗೆ ತಲುಪಿಸಲು ಮೈತ್ರಿ‌ ಸರ್ಕಾರ ಸಹಕರಿಸುತ್ತಿಲ್ಲ ಎಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಎನ್ಇಎಸ್ ಮೈದಾನದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿ ಅವರು ದೇಶದ ಗಡಿ ಕಾಯುವ ಸೈನಿಕರಿಗೆ ಹಾಗೂ ದೇಶದ ರೈತರಿಗೆ ಸಾಕಷ್ಟು ಗೌರವ ನೀಡುತ್ತಾರೆ. ಅದಕ್ಕಾಗಿ ದೇಶದ ರೈತರಿಗೆ ಗೌರವ ನೀಡುವ ಸಲುವಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ 6 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತರಲಾಗಿದೆ.

ಸಚಿವೆ ನಿರ್ಮಲಾ ಸೀತಾರಾಮನ್

ಯಾವುದೇ ದೇಶಕ್ಕಾಗಲಿ ಮಾಣಿಕ್ಯ ಮತ್ತೆ ಮತ್ತೆ ಸಿಗೋದಿಲ್ಲ. ನಮಗೆ ಸಿಕ್ಕಿರುವ ಮಾಣಿಕ್ಯ ಅಂದ್ರೆ ಅದು ನರೇಂದ್ರ ಮೋದಿ. ಅವರನ್ನು ಉಳಿಸಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು.‌ 1971 ರಲ್ಲಿ ಕಾಂಗ್ರೆಸ್​​ ಇಂದಿರಾ ಗಾಂಧಿ ಅವರು ಗರೀಬಿ‌ ಹಟಾವೋ ಎಂದರು. ನಂತ್ರ ರಾಜೀವ್ ಗಾಂಧಿ ಅವರು ಸಹ ಅದನ್ನೆ ಹೇಳಿದ್ರು, ಇನ್ನು ಮನಮೋಹನ್ ಸಿಂಗ್, ಬಜೆಟ್ ಮೊದಲಿಗೆ ಈ ದೇಶದ ಅಲ್ಪ ಸಂಖ್ಯಾಂತರಿಗೆ ಮೀಸಲು ಎಂದರು.‌ ಈಗ ಗರೀಬಿ ಹಟಾವೋ ಘೋಷಣೆಯನ್ನೇ ’ನ್ಯಾಯ್​’ ಎಂದು ಮರು ನಾಮಕರಣ ಮಾಡಿ ಜನರ ಮುಂದೆ ಬರುತ್ತಿದ್ದಾರೆ. ದೇಶದ ಅಭಿವೃದ್ದಿ ಕುರಿತು ದೂರದೃಷ್ಟಿ ಹೊಂದಿರುವ ಮೋದಿಯವರನ್ನೇ ಗೆಲ್ಲಿಸಿ. ಇದಕ್ಕಾಗಿ‌ ಶಿವಮೊಗ್ಗದಲ್ಲಿ ರಾಘಣ್ಣನಿಗೆ ಆಶೀರ್ವದಿಸಿ ಎಂದು ವಿನಂತಿ ಮಾಡಿಕೊಂಡರು.

ಪಾಕಿಸ್ತಾನದವರಿಗೆ ನಿರ್ಮಲಾ ಸೀತಾರಾಮನ್​​ ದುರ್ಗಾಮಾತೆ:

ದುಷ್ಟರನ್ನು ಕೊಲ್ಲಲು ದುರ್ಗಾಮಾತೆ ಬರುತ್ತಾಳೆ. ಪಾಕಿಸ್ತಾನದವರ ಪಾಲಿಗೆ ನಿರ್ಮಲಾ ಸೀತಾರಾಮನ್, ನಿಜವಾಗ್ಲೂ ದುರ್ಗಾ ಮಾತೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆಭಿಪ್ರಾಯಪಟ್ಟರು. ಮಹಿಳಾ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ರಾಘವೇಂದ್ರ ಅವರಿಗೆ ತಾಯಿ ಇಲ್ಲ.‌ ಇದರಿಂದ ಜಿಲ್ಲೆಯ ಮಾತೆಯರೇ ರಾಘವೇಂದ್ರಗೆ ತಾಯಂದಿರಾಗಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

Intro:ಪ್ರದಾನ ಮಂತ್ರಿ ನರೇಂದ್ರ ಮೋದಿರವರು ರೈತರಿಗೆ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು‌ ರಾಜ್ಯದ ರೈತರಿಗೆ ತಲುಪಿಸಲು ರಾಜ್ಯದ ಮೈತ್ರಿ‌ ಸರ್ಕಾರ ಸಹಕಾರಿಸುತ್ತಿಲ್ಲ ಎಂದು ದೇಶದ ರಕ್ಷಣಾ ಸಚಿವೆ ನಿರ್ಮಲ ಸೀತರಾಮನ್ ರಾಜ್ಯ‌ ಸರ್ಕಾರದ ಮೇಲೆ ಗಂಭೀರ ಆರೋಪವನ್ನು‌ ಶಿವಮೊಗ್ಗದಲ್ಲಿ ಮಾಡಿದ್ದಾರೆ. ಶಿವಮೊಗ್ಗ ನಗರದ ಎನ್.ಇ.ಎಸ್ ಮೈದಾನದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರದಾನ ಮಂತ್ರಿ ಮೋದಿರವರು‌ ದೇಶದ ಗಡಿ ಕಾಯುವ ಸೈನಿಕರಿಗೆ ಹಾಗೂ ದೇಶದ ರೈತರಿಗೆ ಸಾಕಷ್ಟು ಗೌರವ ನೀಡುತ್ತಾರೆ. ಅದಕ್ಕಾಗಿ ದೇಶದ ರೈತರಿಗೆ ಗೌರವ ನೀಡುವ ಸಲುವಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ 6 ಸಾವಿರ ರೂ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಆದ್ರೆ ರಾಜ್ಯ‌ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ಸಹಕಾರಿಸುತ್ತಿಲ್ಲ. ಇದರಿಂದ ಕೇಂದ್ರ ಯೋಜನೆ ತಲುಪಲು ಆಗುತ್ತಿಲ್ಲ ಎಂದು ಮೈತ್ರಿ‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.‌


Body:ಯಾವುದೇ ದೇಶಕ್ಕಾಗಲಿ ಮಾಣಿಕ್ಯ ಮತ್ತೆ ಮತ್ತೆ ಸಿಗೂದಿಲ್ಲ. ಈ ನಮಗೆ ಸಿಕ್ಕಿರುವ ಮಾಣಿಕ್ಯ ಅಂದ್ರೆ ಅದು ನರೇಂದ್ರ ಮೋದಿ. ಅವರನ್ನು ಉಳಿಸಿ ಕೊಂಡು ದೇಶದ ಅಭಿವೃದ್ದಿಗೆ ಸಹಕರಿಸಿ ಎಂದರು.‌1971 ರಲ್ಲಿ ಕಾಂಗ್ರೆಸ್ ನ ಇಂದಿರ ಗಾಂಧಿರವರು ಗರಿಬಿ‌ ಹಟಾವೋ ಎಂದರು. ನಂತ್ರ ರಾಜೀವ್ ಗಾಂಧಿ ರವರು ಸಹ ಅದನ್ನೆ ಹೇಳಿದ್ರು, ನಂತ್ರ ಮನಮೋಹನ್ ಸಿಂಗ್ ರವರು ನಮ್ಮ‌ದೇಶದ ಬಜೆಟ್ ಮೊದಲು ದೇಶದ ಅಲ್ಪ ಸಂಖ್ಯಾಂತರಿಗೆ ಎಂದರು.‌ಈಗ ಗರಿಬಿ ಹಟಾವೋವನ್ನೆ ನ್ಯಾಯ್ ಎಂದು ಹೇಳಿ‌ ಜನರ ಮುಂದೆ ಬರುತ್ತಿದ್ದಾರೆ. ದೇಶದ ದೂರದೃಷ್ಟಿ ಅಭಿವೃದ್ದಿಯನ್ನು ಹೊಂದಿರು ಮೋದಿಯನ್ನು ಗೆಲ್ಲಿಸಿ, ಇದಕ್ಕಾಗಿ‌ ಶಿವಮೊಗ್ಗದಲ್ಲಿ ರಾಘಣ್ಣನನ್ನು ಗೆಲ್ಲಿಸಿ ಎಂದು ಮಹಿಳೆಯರಲ್ಲಿ ವಿನಂತಿ ಮಾಡಿ ಕೊಂಡರು.


Conclusion:ದುಷ್ಟರನ್ನು ಕೊಲ್ಲಲು ದುರ್ಗಾಮಾತೆ ಬರುತ್ತಾಳೆ. ಪಾಕಿಸ್ತಾನದವರ ಪಾಲಿಕೆ ನಿರ್ಮಲ ಸೀತರಾಮನ್ ರವರು ನಿಜವಾಗ್ಲೂ ದುರ್ಗಾ ಮಾತೆ ಯಾಗಿದ್ದಾರೆ ಎಂದು ಬಿಜೆಪಿ‌ ನಗರ ಶಾಸಕ ಕೆ.ಎಸ್. ಆಭಿಪ್ರಾಯ ಪಟ್ಟಿದ್ದಾರೆ.ಮಹಿಳಾ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಪಾಕಿಸ್ತಾನದವರ ಪಾಲಿಕೆ ನಿರ್ಮಲ ಸೀತರಾಮನ್ ದುರ್ಗಾ ಮಾತೆಯಾಗಿದ್ದಾರೆ ಎಂದರು.‌ನಮ್ಮ ಅಭ್ಯರ್ಥಿ ರಾಘವೇಂದ್ರ ರವರಿಗೆ ತಾಯಿ ಇಲ್ಲ.‌ಇದರಿಂದ ಜಿಲ್ಲೆಯ ಮಾತೆಯರು ರಾಘುವಿಗೆ ತಾಯಿಯಾಗಿ ಆರ್ಶಿವಾದ ಮಾಡಿ ಗೆಲ್ಲಿಸಿ ಮೋದಿರವರ ಕೈ ಬಲಪಡಿಸಿ ಎಂದರು. ಈ ವೇಳೆ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಭಾರತಿ ಶೆಟ್ಟಿ, ಶಾಸಕರುಗಳಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ ಸೇರಿ ಇತರೆ ಮುಖಂಡರು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.