ಶಿವಮೊಗ್ಗ: ಕುವೈತ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹಾಶಿಮ್ ಅವರ ಶವ ಸಂಸ್ಕಾರವು ಇಂದು ಸ್ವಗ್ರಾಮ ತಾಳಗುಪ್ಪದಲ್ಲಿ ನಡೆಸಲಾಯಿತು. ಅವರ ಪಾರ್ಥಿವ ಶರೀರವು ಮಂಗಳೂರಿನಿಂದ ಸಾಗರಕ್ಕೆ ಆಗಮಿಸಿದ ಬಳಿಕ ಅವರ ಸ್ನೇಹಿತರು ತಾಳಗುಪ್ಪಕ್ಕೆ ತೆಗೆದುಕೊಂಡು ಹೋದರು.
ಹಾಶಿಮ್ ಕುಟುಂಬ ನಿರ್ವಹಣೆಗಾಗಿ ಕಳೆದೆರಡು ವರ್ಷಗಳ ಹಿಂದೆ ಕುವೈತ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ವಾರಕ್ಕೆರಡು ಬಾರಿ ಮನೆಗೆ ಫೋನ್ ಮಾಡಿ ಮಾತನಾಡುತ್ತಿದ್ದ ಹಾಶಿಮ್, ಫೋನ್ ಮಾಡುವುದನ್ನು ಬಿಟ್ಟಾಗ, ಮನೆಯವರು ಕುವೈತ್ಗೆ ಫೋನ್ ಮಾಡಿದಾಗ ಹಾಶಿಮ್ ಸಾವನ್ನಪ್ಪಿದ ವಿಚಾರ ತಿಳಿದಿದೆ.
ಓದಿ: ಶಿವಮೊಗ್ಗದ ಯುವಕ ಕುವೈತ್ನಲ್ಲಿ ಅನುಮಾಸ್ಪದ ಸಾವು: ಕುಟುಂಬಸ್ಥರಿಂದ ತನಿಖೆಗೆ ಆಗ್ರಹ
ನಂತರ ಅವರ ಸಂಬಂಧಿಕರು ಆತನ ರೂಂಗೆ ಹೋಗಿ ನೋಡಿದಾಗ, ಆತನ ಬೆಡ್ನಲ್ಲಿ ರಕ್ತದ ಕಲೆ ನೋಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆಗ್ರಹಿಸಿದ್ದಾರೆ.
ತಾಳಗುಪ್ಪದ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.