ETV Bharat / state

ಲಂಚ ಸ್ವೀಕಾರ ವೇಳೆ ಭದ್ರಾವತಿ ನಗರಸಭೆ ಗುಮಾಸ್ತ ಎಸಿಬಿ ಬಲೆಗೆ

author img

By

Published : Aug 13, 2020, 2:33 PM IST

ಲಂಚ ಪಡೆಯುತ್ತಿದ್ದ ಭದ್ರಾವತಿ ನಗರಸಭೆಯ ಗುಮಾಸ್ತ ಕುಮಾರ್ ಅವರನ್ನು ಶಿವಮೊಗ್ಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Clerk
Clerk

ಶಿವಮೊಗ್ಗ: ಸೈಟ್​​​ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚ ಪಡೆಯುವಾಗ ಭದ್ರಾವತಿ ನಗರಸಭೆಯ ಗುಮಾಸ್ತ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭದ್ರಾವತಿ ನಗರಸಭೆಯ ಗುಮಾಸ್ತ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಇವರು ಭದ್ರಾವತಿ ಹೊರ ವಲಯದ ಬೊಮ್ಮನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲೇಔಟ್​​ನಲ್ಲಿನ ಸೈಟ್ ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು.

ಈ ಕುರಿತು ಸುಲ್ತಾಬ್ ಶರೀಫ್ ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ಇನ್ಸ್​​ಪೆಕ್ಟರ್​​ಗಳಾದ ತಿಪ್ಪೇಸ್ವಾಮಿ, ವಿರೇಂದ್ರ ಹಾಗೂ ಸಿಬ್ಬಂದಿಗಳಾದ ಯೋಗೀಶ್, ರಘು, ನಾಗರಾಜ್ ಸೇರಿ ಇತರರು ಹಾಜರಿದ್ದರು.

ಶಿವಮೊಗ್ಗ: ಸೈಟ್​​​ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚ ಪಡೆಯುವಾಗ ಭದ್ರಾವತಿ ನಗರಸಭೆಯ ಗುಮಾಸ್ತ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭದ್ರಾವತಿ ನಗರಸಭೆಯ ಗುಮಾಸ್ತ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಇವರು ಭದ್ರಾವತಿ ಹೊರ ವಲಯದ ಬೊಮ್ಮನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲೇಔಟ್​​ನಲ್ಲಿನ ಸೈಟ್ ಗೆ ಖಾತೆ ಮಾಡಿ ಕೊಡಲು 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು.

ಈ ಕುರಿತು ಸುಲ್ತಾಬ್ ಶರೀಫ್ ಅವರು ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ಇನ್ಸ್​​ಪೆಕ್ಟರ್​​ಗಳಾದ ತಿಪ್ಪೇಸ್ವಾಮಿ, ವಿರೇಂದ್ರ ಹಾಗೂ ಸಿಬ್ಬಂದಿಗಳಾದ ಯೋಗೀಶ್, ರಘು, ನಾಗರಾಜ್ ಸೇರಿ ಇತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.