ETV Bharat / state

ಸಿಎಂ ಬೆಂಗಾವಲು ಪಡೆ ವಾಹನಕ್ಕೆ ಮೇಯರ್​ ಕಾರು ಡಿಕ್ಕಿ.. ಇನ್ನೋವಾ ಕಾರು ಜಖಂ..

ಸಿಎಂ ಯಡಿಯೂರಪ್ಪ ಶಿವಮೊಗ್ಗ ಭೇಟಿಗೆ ಆಗಮಿಸಿದ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಇದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್ ಅವರ ಇನ್ನೋವಾ ವಾಹನ ಚಾಲಕನ ಅಜಾಗರೂಕತೆಯಿಂದ ಜಖಂ ಗೊಂಡಿದೆ.

author img

By

Published : Aug 13, 2019, 3:23 PM IST

shimoga-police-mayor-vehicle-damaged

ಶಿವಮೊಗ್ಗ: ಇಂದು ಸಿಎಂ ಯಡಿಯೂರಪ್ಪ ಶಿವಮೊಗ್ಗ ಭೇಟಿಗೆ ಆಗಮಿಸಿದ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಇದ್ದ ಪಾಲಿಕೆ ಮೇಯರ್ ಅವರ ಇನ್ನೋವಾ ವಾಹನ ಚಾಲಕನ ಅಜಾಗರೂಕತೆಯಿಂದ ಜಖಂ ಗೊಂಡಿದೆ.

ಸಿಎಂ ಬೆಂಗಾವಲು ಪಡೆ ವಾಹನಕ್ಕೆ ಮೇಯರ್​ ಕಾರು ಡಿಕ್ಕಿ..

ಸಿಎಂ ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಪೊಲೀಸರ ಬೆಂಗಾವಲು ಪಡೆ ವಾಹನಗಳು ಹಿಂದೆ-ಮುಂದೆ ಇರುತ್ತವೆ. ಅದೇ ರೀತಿ ಇಂದು ಸಿಎಂ ಅವರು ಬೆಳಗ್ಗೆ ಮಂಡಗದ್ದೆಯ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಶಿವಮೊಗ್ಗಕ್ಕೆ ವಾಪಸ್ ಆಗಿ, ನೆರೆಯಿಂದ ಹಾನಿಗೊಳಗಾಗಿರುವ ರಾಜೀವ್ ಗಾಂಧಿ ಬಡಾವಣೆಗೆ ಬರುವ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಬರುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್​ರವರ ಇನ್ನೋವಾ ವಾಹನದ ಡ್ರೈವರ್​ ಅಚಾನಕ್ಕಾಗಿ ಬ್ರೇಕ್​ ಹಾಕಿದ ಪರಿಣಾಮ ತಮ್ಮ ವಾಹನದ ಮುಂದಿದ್ದ ಪೊಲೀಸರ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಕಾರಿನ ಒಳಗಿದ್ದ ಮೇಯರ್​ಗೆ ಯಾವುದೇ ಹಾನಿ ಆಗಿಲ್ಲವಾದರೂ ಕಾರಿನ ಮುಂಭಾಗದ ಬಂಪರ್, ಬಾನೆಟ್ , ಹೆಡ್ ಲೈಟ್ ಜಖಂಗೊಂಡಿವೆ. ಇದರಿಂದ ಕಾರಿನ ಬಾನೆಟ್ ಮೇಲಕ್ಕೆ ಎದ್ದಿದ್ದು, ಮೇಯರ್ ಬೋರ್ಡ್ ಸಹ ಬಾಗಿರಿವುದರಿಂದ ಕಾರಿನ ಅಂದವೇ ಹೋಗಿದೆ. ನಂತರ ಜಖಂಗೊಂಡ ಕಾರನ್ನು ಏರಲು ನಿರಾಕರಿಸಿದ ಮೇಯರ್​ ಉಪ ಮೇಯರ್ ಚನ್ನಬಸಪ್ಪನವರು ತಮ್ಮ ಕಾರನ್ನು ಮೇಯರ್‌ ಅವರಿಗೆ ನೀಡಿದರು.

ಶಿವಮೊಗ್ಗ: ಇಂದು ಸಿಎಂ ಯಡಿಯೂರಪ್ಪ ಶಿವಮೊಗ್ಗ ಭೇಟಿಗೆ ಆಗಮಿಸಿದ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಇದ್ದ ಪಾಲಿಕೆ ಮೇಯರ್ ಅವರ ಇನ್ನೋವಾ ವಾಹನ ಚಾಲಕನ ಅಜಾಗರೂಕತೆಯಿಂದ ಜಖಂ ಗೊಂಡಿದೆ.

ಸಿಎಂ ಬೆಂಗಾವಲು ಪಡೆ ವಾಹನಕ್ಕೆ ಮೇಯರ್​ ಕಾರು ಡಿಕ್ಕಿ..

ಸಿಎಂ ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಪೊಲೀಸರ ಬೆಂಗಾವಲು ಪಡೆ ವಾಹನಗಳು ಹಿಂದೆ-ಮುಂದೆ ಇರುತ್ತವೆ. ಅದೇ ರೀತಿ ಇಂದು ಸಿಎಂ ಅವರು ಬೆಳಗ್ಗೆ ಮಂಡಗದ್ದೆಯ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಶಿವಮೊಗ್ಗಕ್ಕೆ ವಾಪಸ್ ಆಗಿ, ನೆರೆಯಿಂದ ಹಾನಿಗೊಳಗಾಗಿರುವ ರಾಜೀವ್ ಗಾಂಧಿ ಬಡಾವಣೆಗೆ ಬರುವ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಬರುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್​ರವರ ಇನ್ನೋವಾ ವಾಹನದ ಡ್ರೈವರ್​ ಅಚಾನಕ್ಕಾಗಿ ಬ್ರೇಕ್​ ಹಾಕಿದ ಪರಿಣಾಮ ತಮ್ಮ ವಾಹನದ ಮುಂದಿದ್ದ ಪೊಲೀಸರ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಕಾರಿನ ಒಳಗಿದ್ದ ಮೇಯರ್​ಗೆ ಯಾವುದೇ ಹಾನಿ ಆಗಿಲ್ಲವಾದರೂ ಕಾರಿನ ಮುಂಭಾಗದ ಬಂಪರ್, ಬಾನೆಟ್ , ಹೆಡ್ ಲೈಟ್ ಜಖಂಗೊಂಡಿವೆ. ಇದರಿಂದ ಕಾರಿನ ಬಾನೆಟ್ ಮೇಲಕ್ಕೆ ಎದ್ದಿದ್ದು, ಮೇಯರ್ ಬೋರ್ಡ್ ಸಹ ಬಾಗಿರಿವುದರಿಂದ ಕಾರಿನ ಅಂದವೇ ಹೋಗಿದೆ. ನಂತರ ಜಖಂಗೊಂಡ ಕಾರನ್ನು ಏರಲು ನಿರಾಕರಿಸಿದ ಮೇಯರ್​ ಉಪ ಮೇಯರ್ ಚನ್ನಬಸಪ್ಪನವರು ತಮ್ಮ ಕಾರನ್ನು ಮೇಯರ್‌ ಅವರಿಗೆ ನೀಡಿದರು.

Intro:ಸಿಎಂ ಯಾವುದೇ ಜಿಲ್ಲೆಗೆ ಹೋದ್ರು ಸಹ ಅಲ್ಲಿ ಗಡಿಬಿಡಿ ಇದ್ದಿದ್ದೆ. ಅಲ್ಲಿ ಪೊಲೀಸರ ಬೆಂಗಾವಲು ಪಡೆ ವಾಹನಗಳು ಹಿಂದೆ- ಮುಂದೆ ಇರುತ್ತವೆ. ಇಂದು ಸಿಎಂ ಯಡಿಯೂರಪ್ಪ ನವರು ಶಿವಮೊಗ್ಗ ಭೇಟಿಗೆ ಆಗಮಿಸಿದ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಹೋಗುವಾಗ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್ ರವರ ಇನ್ನೂವಾ ವಾಹನ ಜಖಂ ಗೊಂಡಿದೆ. ಸಿಎಂ ರವರು ಬೆಳಗ್ಗೆ ಮಂಡಗದ್ದೆಯ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಶಿವಮೊಗ್ಗಕ್ಕೆ ವಾಪಸ್ ಅದರು. ನಗರದ ಮೀನಾಕ್ಷಿ ಭವನದಲ್ಲಿ ಟಿಫನ್ ಮುಗಿಸಿ, ನೆರೆಯಿಂದ ಹಾನಿಗೊಳಗಾದ ರಾಜೀವ್ ಗಾಂಧಿ ಬಡಾವಣೆಗೆ ಬರುವ ವೇಳೆ ಮೇಯರ್ ವಾಹನ ಸಿಎಂ ಬೆಂಗಾವಲು ಪಡೆ ವಾಹನಗಳ ಜೊತೆ ಹೋಗುವಾಗ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೇಯರ್ ಕಾರಿನ ಮುಂಭಾಗ ಜಖಂ ಆಗಿದೆ.


Body:ಕಾರಿನ ಮುಂಭಾಗದ ಬಂಪರ್, ಬಾನೆಟ್ , ಹೆಡ್ ಲೈಟ್ ಜಖಂ ಗೊಂಡಿವೆ. ಇದರಿಂದ ಕಾರಿನ ಬಾನೆಟ್ ಮೇಲಕ್ಕೆ ಎದ್ದಿವೆ. ಮೇಯರ್ ಬೋರ್ಡ್ ಸಹ ಬಾಗಿದೆ. ಇದರಿಂದ ಕಾರಿನ ಅಂದವೇ ಹೋಗಿದೆ.


Conclusion:ಕಾರು ಜಖಂ ಗೊಳ್ಳುತ್ತಿದ್ದಂತೆಯೇ ಮೇಯರ್ ಲತಾ ಗಣೇಶ್ ರವರು ಕಾರನ್ನು ಹತ್ತಲು ನಿರಾಕರಿಸಿದರು. ಇದರಿಂದ ಉಪ ಮೇಯರ್ ಚನ್ನಬಸಪ್ಪನವರು ತಮ್ಮ ಕಾರನ್ನು ಮೇಯರ್ ರವರಿಗೆ ನೀಡಿದರು. ಇದರಿಂದ ಮೇಯರ್, ಉಪ ಮೇಯರ್ ಕಾರನ್ನು ಏರಿ ಹೋದರು.‌ಉಪ‌ಮೇಯರ್ ಸ್ನೇಹಿತನ ಬೈಕ್ ಏರಿ ಸಿಎಂ ಕಾರ್ಯಕ್ರಮಕ್ಕೆ ಹೋದರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.