ETV Bharat / state

ಪೂರ್ಣಗೊಳ್ಳದ ನಾಲಾ ಕಾಮಗಾರಿ : ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ : ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

author img

By

Published : Aug 1, 2019, 9:02 AM IST

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ: ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಕಲಾ ಕಾಲೇಜು ಕಟ್ಟಡದ ಪಕ್ಕ ಮತ್ತು ಮುಂಭಾಗದಲ್ಲಿ ಸುಮಾರು 20 ಅಡಿ ಆಳದಲ್ಲಿ ನಾಲೆ ನಿರ್ಮಿಸಲಾಗುತ್ತಿದ್ದು. ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಮಳೆಗಾಲದಲ್ಲೂ ಮುಂದುವರಿಸಿರುವುದರಿಂದ ಕಾಲೇಜು ಆವರಣ ಸಂಪೂರ್ಣ ಕೇಸರುಮಯವಾಗಿದೆ.

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಸುರಂಗ ನಾಲೆಗಾಗಿ ಆಳವಾದ ಕಾಲುವೆ ತೆಗೆದಿರುವುದರಿಂದ ಕುಸಿಯುವ ಭೀತಿಯಲ್ಲೇ ವಿದ್ಯಾರ್ಥಿಗಳು ದಿನ ದೂಡುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಭಯದಲ್ಲೇ ಕಾಲೇಜಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಇನ್ನು, ಗಾಜನೂರು ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಪೂರೈಸುವ ತುಂಗಾ ಬಲದಂಡೆ ನಾಲೆ ಸುಮಾರು 52 ಕಿ.ಮೀ ಉದ್ದವಿದೆ. ಪ್ರಸ್ತುತ ಸಹ್ಯಾದ್ರಿ ಕಾಲೇಜಿನ ಆವರಣ ದೊಳಗೆ 27 ನೇ ಕೀ. ಮೀ ಚೈನೇಜ್ ನಲ್ಲಿ ಸುರಂಗ ನಾಲೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದ್ದು, ಈಗಾಗಲೇ ಗುತ್ತಿಗೆದಾರರು ನಾಲೆಯ ಡೆಕ್ ಗೆ ಸ್ಲಾಬ್ ಹಾಕಿದ್ದಾರೆ.

ಶೀಘ್ರದಲ್ಲೇ ಡೆಕ್ ಒಳಗಿನ ಸೆಂಟರಿಂಗ್ ಶೀಟ್ ತೆಗೆದು ಕಾಮಗಾರಿ ಮುಗಿಸಲಿದ್ದಾರೆ. ನಾಲೆಯ ಪಥ ಬದಲಾವಣೆಯೇ ಈ ಸಮಸ್ಯೆಗೆ ಕಾರಣವಾಗಿದೆ. ಮೊದಲು ಯೋಜನೆಯಂತೆ ಕಾಮಗಾರಿ ಆರಂಭಿಸಿದ್ದರೆ ಕಾಲೇಜಿನ ಹಿಂಭಾಗದಲ್ಲಿನ ಕ್ರೀಡಾಂಗಣದ ಮೂಲಕವಾಗಿ ನಾಲೆ ಮೇಲ್ಭಾಗದಲ್ಲಿ ಹಾದು ಹೋಗುತ್ತಿತ್ತು. ಇದರಿಂದಾಗಿ ಬೇರೆಯ ಯೋಜನೆ ರೂಪಿಸಿ, ಸುರಂಗ ಮಾರ್ಗವಾಗಿ ನಾಲೆಯನ್ನು ಮಾಡಲಾಗಿದೆ. ಮಳೆಗಾಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.

ಶಿವಮೊಗ್ಗ: ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಕಲಾ ಕಾಲೇಜು ಕಟ್ಟಡದ ಪಕ್ಕ ಮತ್ತು ಮುಂಭಾಗದಲ್ಲಿ ಸುಮಾರು 20 ಅಡಿ ಆಳದಲ್ಲಿ ನಾಲೆ ನಿರ್ಮಿಸಲಾಗುತ್ತಿದ್ದು. ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಮಳೆಗಾಲದಲ್ಲೂ ಮುಂದುವರಿಸಿರುವುದರಿಂದ ಕಾಲೇಜು ಆವರಣ ಸಂಪೂರ್ಣ ಕೇಸರುಮಯವಾಗಿದೆ.

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಸುರಂಗ ನಾಲೆಗಾಗಿ ಆಳವಾದ ಕಾಲುವೆ ತೆಗೆದಿರುವುದರಿಂದ ಕುಸಿಯುವ ಭೀತಿಯಲ್ಲೇ ವಿದ್ಯಾರ್ಥಿಗಳು ದಿನ ದೂಡುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಭಯದಲ್ಲೇ ಕಾಲೇಜಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಇನ್ನು, ಗಾಜನೂರು ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಪೂರೈಸುವ ತುಂಗಾ ಬಲದಂಡೆ ನಾಲೆ ಸುಮಾರು 52 ಕಿ.ಮೀ ಉದ್ದವಿದೆ. ಪ್ರಸ್ತುತ ಸಹ್ಯಾದ್ರಿ ಕಾಲೇಜಿನ ಆವರಣ ದೊಳಗೆ 27 ನೇ ಕೀ. ಮೀ ಚೈನೇಜ್ ನಲ್ಲಿ ಸುರಂಗ ನಾಲೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದ್ದು, ಈಗಾಗಲೇ ಗುತ್ತಿಗೆದಾರರು ನಾಲೆಯ ಡೆಕ್ ಗೆ ಸ್ಲಾಬ್ ಹಾಕಿದ್ದಾರೆ.

ಶೀಘ್ರದಲ್ಲೇ ಡೆಕ್ ಒಳಗಿನ ಸೆಂಟರಿಂಗ್ ಶೀಟ್ ತೆಗೆದು ಕಾಮಗಾರಿ ಮುಗಿಸಲಿದ್ದಾರೆ. ನಾಲೆಯ ಪಥ ಬದಲಾವಣೆಯೇ ಈ ಸಮಸ್ಯೆಗೆ ಕಾರಣವಾಗಿದೆ. ಮೊದಲು ಯೋಜನೆಯಂತೆ ಕಾಮಗಾರಿ ಆರಂಭಿಸಿದ್ದರೆ ಕಾಲೇಜಿನ ಹಿಂಭಾಗದಲ್ಲಿನ ಕ್ರೀಡಾಂಗಣದ ಮೂಲಕವಾಗಿ ನಾಲೆ ಮೇಲ್ಭಾಗದಲ್ಲಿ ಹಾದು ಹೋಗುತ್ತಿತ್ತು. ಇದರಿಂದಾಗಿ ಬೇರೆಯ ಯೋಜನೆ ರೂಪಿಸಿ, ಸುರಂಗ ಮಾರ್ಗವಾಗಿ ನಾಲೆಯನ್ನು ಮಾಡಲಾಗಿದೆ. ಮಳೆಗಾಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.

Intro:ಶಿವಮೊಗ್ಗ,
ಫಾರ್ಮೆಟ್: ಪ್ಯಾಕೇಜ್
ಸ್ಲಗ್: ಪೂರ್ಣಗೊಳ್ಳದ ನಾಲಾ ಕಾಮಗಾರಿ- ವಿದ್ಯಾರ್ಥಿಗಳ ಪರದಾಟ.

ಆ್ಯಂಕರ್.............
ಅದು ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು. ಆದರೆ, ಆ ಕಾಲೇಜಿನ ಆವರಣದಲ್ಲಿ ನಡೆದಾಡಲು ಸಹ ವಿದ್ಯಾರ್ಥಿಗಳು ಯೋಚಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅರೇ.... ತರಗತಿ, ಲ್ಯಾಬ್, ಕ್ರೀಡೆ, ತಲಹರಟೆ ಮುಂತಾದವುಗಳೇ ತುಂಬಿರಬೇಕಾದ ಕಾಲೇಜಿನ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಸಂಚರಿಸಲು ಉಂಟಾಗಿರುವ ತೊಡಕಾದರೂ ಏನು...? ಪ್ರತಿಷ್ಟಿತ ಕಾಲೇಜಿನ ಕ್ಯಾಂಪಸ್ ನೊಳಗೆ ಯಾರಿಂದಾಗಿ, ಯಾವ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂಬುವ ಪ್ರಶ್ನೆ ನಿಮ್ಮನ್ನ ಕಾಡ್ತಾ ಇದೀಯಾ...? ಹಾಗಾದ್ರೇ ಈ ಸ್ಟೋರಿ ನ ಒಮ್ಮೆ  ನೀವೆ ನೋಡಿ ಬಿಡಿ............

ವಾಯ್ಸ್ ಓವರ್ .....1
ಹೌದು,  ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿವೆ. ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಆದರಿಂದ ಕಲಾ ಕಾಲೇಜು  ಕಟ್ಟಡದ ಪಕ್ಕ ಮತ್ತು ಮುಂಭಾಗದಲ್ಲಿ ಸುಮಾರು 20 ಅಡಿ ಆಳದಲ್ಲಿ ನಾಲೆ ನಿರ್ಮಿಸಲಾಗುತ್ತಿದ್ದು. ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಮಳೆಗಾಲದಲ್ಲೂ ಮುಂದುವರಿಸಿರುವುದರಿಂದ ಕಾಲೇಜು ಆವರಣ ಸಂಪೂರ್ಣ ಕೇಸರುಮಯವಾಗಿದೆ. ಸುರಂಗ ನಾಲೆಗಾಗಿ ಆಳವಾದ ಕಾಲುವೆ ತೆಗೆದಿರುವುದರಿಂದ ಕುಸಿಯುವ ಭೀತಿಯಲ್ಲೆ ದಿನ ದೂಡುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಭಯದಲ್ಲೆ ಕಾಲೇಜಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಬೈಟ್...1
ಸುಮುಖ ವಿದ್ಯಾರ್ಥಿ

ವಾಯ್ಸ್ ಓವರ್ ....2
ಇನ್ನು, ಗಾಜನೂರು ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಪೂರೈಸುವ ತುಂಗಾ ಬಲದಂಡೆ ನಾಲೆ ಸುಮಾರು 52 ಕಿ.ಮೀ ಉದ್ದವಿದೆ. ಪ್ರಸ್ತುತ ಸಹ್ಯಾದ್ರೀ ಕಾಲೇಜಿನ ಆವರಣ ದೊಳಗೆ 27 ನೇ ಕೀ. ಮೀ ಚೈನೇಜ್ ನಲ್ಲಿ ಸುರಂಗ ನಾಲೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದ್ದು, ಈಗಾಗಲೇ ಗುತ್ತಿಗೆದಾರರು ನಾಲೆಯ ಡೆಕ್ ಗೆ  ಸ್ಲಾಬ್ ಹಾಕಿದ್ದಾರೆ. ಶೀಘ್ರದಲ್ಲೇ ಡೆಕ್ ಒಳಗಿನನ ಸೆಂಟರಿಂಗ್ ಶೀಟ್ ತೆಗೆದು ಕಾಮಗಾರಿ ಮುಗಿಸಲಿದ್ದಾರೆ. ನಾಲೆಯ ಪಥ ಬದಲಾವಣೆಯೇ ಈ ಸಮಸ್ಯೆಗೆ ಕಾರಣವಾಗಿದೆ. ಮೊದಲು ಯೋಜನೆಯಂತೆ ಕಾಮಗಾರಿ ಆರಂಭಿಸಿದ್ದರೆ ಕಾಲೇಜಿನ ಹಿಂಭಾಗದಲ್ಲಿನ ಕ್ರೀಡಾಂಗಣದ ಮೂಲಕವಾಗಿ ನಾಲೆ ಮೇಲ್ಭಾಗದಲ್ಲಿ ಹಾದು ಹೋಗುತ್ತಿತ್ತು. ಇದರಿಂದಾಗಿ ಬೇರೆಯ ಯೋಜನೆ ರೂಪಿಸಿ, ಸುರಂಗ ಮಾರ್ಗವಾಗಿ ನಾಲೆಯನ್ನು ಮಾಡಲಾಗಿದೆ. ಮಳೆಗಾಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.

ಬೈಟ್....2
ಮುಮ್ತಾಜ್ : ವಿದ್ಯಾರ್ಥಿನಿ

ಕನ್ ಕ್ಲೂಷನ್.........
ಒಟ್ಟಾರೆ, ತುಂಗಾ ಬಲದಂಡೆ ನಾಲಾ ಕಾಮಗಾರಿ ವಿಳಂಬದಿಂದಾಗಿ ಸಹ್ಯಾದ್ರೀ ಕಾಲೇಜಿನ ವಿದ್ಯಾರ್ಥಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಮಾತ್ರವಲ್ಲದೇ ಕಾಮಗಾರಿಯಿಂದಾಗಿ ಕಡೇಕಲ್- ಮತ್ತೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕಡಿತಗೊಂಡಿದ್ದು, ಆ ಭಾಗಕ್ಕೆ ತೆರಳುವ ಜನರು ನಾಲ್ಕೈದು ಕಿ.ಮೀ ಸುತ್ತುವರಿದು ಹೋಗಬೇಕಿದೆ. ಹೀಗಾಗಿ ನಾಲಾ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂಬುದು ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.