ETV Bharat / state

ಜೂ.27ರಂದು ಜೀವಜಲ ಹೋರಾಟ ಸಮಿತಿಯ ಪ್ರತಿಭಟನಾ ಮೆರವಣಿಗೆ

ಶಿವಮೊಗ್ಗದ ಲಿಂಗನಮಕ್ಕಿಅಣೆಕಟ್ಟೆಯಿಂದ ಶರವತಿ ನೀರನ್ನು ಬೆಂಗಳೂರಿಗೆ ಸಾಗಿಸುವ ಸರ್ಕಾರದ ಯೋಜನಯನ್ನು ಕೈ ಬಿಡುವಂತೆ ಆಗ್ರಹಿಸಿ ಜೂನ್ 27ರಂದು ಮಲೆನಾಡಿನ ಜೀವ ಜಲ ಹೋರಾಟ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಅಶೋಕ್ ಗಾಂಧಿ ತಿಳಿಸಿದರು.

author img

By

Published : Jun 25, 2019, 8:11 PM IST

ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ

ಶಿವಮೊಗ್ಗ: ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈ ಬಿಡಬೇಕುವಂತೆ ಆಗ್ರಹಿಸಿ ಜೂನ್ 27ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ ಹೇಳಿದರು.

ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ

ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಲೆನಾಡು ಬಯಲು ಸೀಮೆಯಂತೆ ಆಗುತ್ತಿದೆ. ಶರಾವತಿ ನೀರನ್ನು ಸಾಗಿಸುವುದು ಅವೈಜ್ಞಾನಿಕ ಕ್ರಮ. ಇಂಥ ಕೆಲಸಕ್ಕೆ ₹12 ಸಾವಿರ ಕೋಟಿ ವೆಚ್ಚ ಮಾಡುತ್ತಿರುವುದು ದುರಂತವೇ ಸರಿ ಎಂದರು.

ಯೋಜನೆಯನ್ನು ಕೈ ಬಿಟ್ಟು ಮಲೆನಾಡನ್ನು ಉಳಿಸಬೇಕು. 27ರಂದು ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು, ಎಲ್ಲಾ ಸಂಘ, ಸಂಸ್ಥೆಗಳಿಂದ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ವಿನಂತಿ ಪೂರ್ವಕ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಬೇಕು ಎಂದು ವಿನಂತಿಸಿಕೊಂಡರು. ರೈತ ಸಂಘದ ಕೆ.ಟಿ.ಗಂಗಾಧರ್, ವಿಜ್ಞಾನ ಸಂಘದ ಶೇಖರ್ ಗೌಳೇರ್ ಸೇರಿದಂತೆ ಕನ್ನಡ ಪರ ಸಂಘಟನೆಯವರು ಇದ್ದರು.

ಶಿವಮೊಗ್ಗ: ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈ ಬಿಡಬೇಕುವಂತೆ ಆಗ್ರಹಿಸಿ ಜೂನ್ 27ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ ಹೇಳಿದರು.

ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ

ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಲೆನಾಡು ಬಯಲು ಸೀಮೆಯಂತೆ ಆಗುತ್ತಿದೆ. ಶರಾವತಿ ನೀರನ್ನು ಸಾಗಿಸುವುದು ಅವೈಜ್ಞಾನಿಕ ಕ್ರಮ. ಇಂಥ ಕೆಲಸಕ್ಕೆ ₹12 ಸಾವಿರ ಕೋಟಿ ವೆಚ್ಚ ಮಾಡುತ್ತಿರುವುದು ದುರಂತವೇ ಸರಿ ಎಂದರು.

ಯೋಜನೆಯನ್ನು ಕೈ ಬಿಟ್ಟು ಮಲೆನಾಡನ್ನು ಉಳಿಸಬೇಕು. 27ರಂದು ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು, ಎಲ್ಲಾ ಸಂಘ, ಸಂಸ್ಥೆಗಳಿಂದ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ವಿನಂತಿ ಪೂರ್ವಕ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಬೇಕು ಎಂದು ವಿನಂತಿಸಿಕೊಂಡರು. ರೈತ ಸಂಘದ ಕೆ.ಟಿ.ಗಂಗಾಧರ್, ವಿಜ್ಞಾನ ಸಂಘದ ಶೇಖರ್ ಗೌಳೇರ್ ಸೇರಿದಂತೆ ಕನ್ನಡ ಪರ ಸಂಘಟನೆಯವರು ಇದ್ದರು.

Intro:ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದು‌ ಕೊಂಡು ಹೋಗುವ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನ ಮೆರವಣಿಗೆ ಮಲೆನಾಡಿನ ಜೀವ ಜಲ ಹೋರಾಟ ಸಮಿತಿಯು ಜೂನ್ 27 ರಂದು ನಡೆಸಲಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಅಶೋಕ್ ಗಾಂಧಿ ತಿಳಿಸಿದ್ದಾರೆ. ಪ್ರೆಸ್ ಟ್ರಸ್ಟ್ ನಲ್ಲಿ ಮಾತನಾಡಿದ ಅಶೋಕ ರವರು ಈಗಾಗಲೇ ಮಲೆನಾಡು ಬಯಲು ಸೀಮೆಯಂತೆ ಆಗುತ್ತಿದೆ. ಅದರಲ್ಲೂ 1300 ಅಡಿ ಕಳೆಗಿನಿಂದ 400 ಕಿ.ಮೀ‌ ದೂರಕ್ಕೆ ನೀರು ತೆಗೆದು ಕೊಂಡು ಹೋಗುವುದು ಅವೈಜ್ಞಾನಿಕ ಕ್ರಮವಾಗಿದೆ.


Body:ಇದಕ್ಕಾಗಿ‌ 12.000 ಕೋಟಿ ರೂ ವೆಚ್ಚ ಮಾಡುತ್ತಿರುವುದು ನಿಜಕ್ಕೂ ದುರಂತವೇ ಆಗಿದೆ.ಇದರಿಂದ ಈ ಯೋಜನೆಯನ್ನು ಕೈ ಬಿಟ್ಟು ಮಲೆನಾಡನ್ನು ಉಳಿಸಬೇಕಿದೆ ಎಂದು ರಾಜ್ಯ ಸರ್ಕಾರದಲ್ಲಿ ವಿನಂತಿ ಮಾಡಿ ಕೊಳ್ಳಲು 27 ರಂದು ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮರವಣಿಗೆ ನಡೆಸಲಾಗುವುದು. ಅಲ್ಲಿ ನಗರದ ಎಲ್ಲಾ ಸಂಘ ಸಂಸ್ಥೆಗಳಿಂದ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ವಿನಂತಿ ಪೂರ್ವಕ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.


Conclusion:ಈ ಪ್ರತಿಭಟನ ಮೆರವಣಿಗೆಯಲ್ಲಿ ನಗರದ ನಾಗರಿಕರು ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಬೇಕು ಎಂದು ವಿನಂತಿ ಮಾಡಿ ಕೊಂಡಿದ್ದಾರೆ. ಈ ವೇಳೆ ರೈತ ಸಂಘದ ಕೆ.ಟಿ.ಗಂಗಾಧರ್ , ವಿಜ್ಞಾನ ಸಂಘದ ಶೇಖರ್ ಗೌಳೇರ್ ಸೇರಿದಂತೆ ಕನ್ನಡ ಪರ ಸಂಘಟನೆಯವರು ಹಾಜರಿದ್ದರು.

ಬೈಟ್: ಅಶೋಕ್ ಗಾಂಧಿ. ಸಂಚಾಲಕರು.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.