ಶಿವಮೊಗ್ಗ: ದಾವಣಗೆರೆ, ಚಿಕ್ಕಮಗಳೂರು ಹಾಗೂ ಜಿಲ್ಲೆಯ ಜೀವನಾಡಿ ಭದ್ರೆಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಿದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಬಿ.ಆರ್. ಪ್ರಾಜೆಕ್ಟ್ನಲ್ಲಿನ ಭದ್ರೆಯ ಅಣೆಕಟ್ಟೆಯಲ್ಲಿ ವಿಶೇಷ ಪೊಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದ್ದಾರೆ. ಭದ್ರೆ ತುಂಬಿದ ಮೇಲೆ ಭದ್ರ ನದಿ ಹರಿಯುವ ಎಲ್ಲಾ ತಾಲೂಕು ಹಾಗೂ ಜಿಲ್ಲೆಯವರು ಬಾಗಿನ ಅರ್ಪಿಸುವುದು ಈ ಭಾಗದ ವಾಡಿಕೆಯಾಗಿದೆ.
ಇದರಿಂದ ಎಲ್ಲರೂ ಬಾಗಿನ ಅರ್ಪಿಸುತ್ತಾರೆ. ಶಾಸಕ ಬಿ.ಕೆ. ಸಂಗಮೇಶ್ ಅವರು ಬಾಗಿನ ಅರ್ಪಿಸಿದ ನಂತ್ರ ಸಮಾರೋಪ ಸಮಾರಂಭ ನಡೆಸಲಾಯಿತು. ಈ ವೇಳೆ ಭದ್ರಾವತಿ ಕ್ಷೇತ್ರದ ಮತದಾರರು ಆಗಮಿಸಿದ್ದರು.