ETV Bharat / state

ಶಿವಮೊಗ್ಗ ಜಿಲ್ಲಾಧಿಕಾರಿ ಸುದ್ದಿಗೋಷ್ಠಿ: ಪ್ರವಾಹ ಪರಿಹಾರದ ಕುರಿತು ಮಾಹಿತಿ

author img

By

Published : Nov 8, 2019, 5:47 PM IST

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶಿವಕುಮಾರ್​, ಮಳೆಯಿಂದಾದ ಹಾನಿ, ಪ್ರವಾಹ ಸಂತ್ರಸ್ತರಿಗೆ ಬಿಡುಗಡೆಯಾದ ಹಣದ ಕುರಿತು ಮಾಹಿತಿ ನೀಡಿದ್ರು.

ಶಿವಮೊಗ್ಗ ಡಿಸಿಯಿಂದ ಸುದ್ದಿಗೋಷ್ಠಿ

ಶಿವಮೊಗ್ಗ: ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುರಿದ ಮಳೆಗೆ ಉಂಟಾದ ಜೀವಹಾನಿ, ಜಾನುವಾರು ಸಾವು, ಮನೆ ಕುಸಿತ ಪ್ರಕರಣ ಹಾಗೂ ಬೆಳೆ ಹಾನಿಗೆ ಜಿಲ್ಲಾಡಳಿತ ಸಮರ್ಪಕವಾಗಿ ಪರಿಹಾರ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು‌ ಮಳೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 18 ಜೀವಹಾನಿಯಾಗಿದೆ. ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂದಂತೆ 90 ಲಕ್ಷ ರೂ ಗಳನ್ನು ಬಿಡುಗಡೆ ಮಾಡಲಾಗಿದೆ.

ಮನೆ ಕಳೆದು ಕೊಂಡವರು, ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ಸೇರಿದಂತೆ ಒಟ್ಟು 7,415 ಕುಟುಂಬಗಳಿಂದ ಪರಿಹಾರಕ್ಕಾಗಿ ಅರ್ಜಿ ಬಂದಿದೆ. ಇವರಿಗೆ ತಲಾ 10 ಸಾವಿರ ರೂಗಳಂತೆ ಒಟ್ಟು 7 ಕೋಟಿ 41 ಲಕ್ಷದ 50 ಸಾವಿರ ರೂ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದ್ರು.

ಶಿವಮೊಗ್ಗ ಜಿಲ್ಲಾಧಿಕಾರಿ ಸುದ್ದಿಗೋಷ್ಠಿ

ಪ್ರವಾಹ ಪೀಡಿತ ಮನೆಗಳನ್ನು ಎ,ಬಿ ಹಾಗೂ ಸಿ ಕೆಟಗರಿ ಮಾಡಿ ಪರಿಹಾರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಕೆಲ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ಕಡೆ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತಿದೆ ಎಂದರು. ಮಳೆಯಿಂದ ಒಟ್ಟು 51 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ 34 ಜಾನುವಾರುಗಳಿಗೆ 8.87 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಉಳಿದಂತೆ 17 ಜಾನುವಾರುಗಳಿಗೆ 5.38 ಲಕ್ಷ ರೂ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಳೆಹಾನಿಯಾದ 6.284 ರೈತರಿಗೆ 6 ಕೋಟಿ 28 ಲಕ್ಷದ 30 ಸಾವಿರ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 482 ಕೆರೆಗಳ ದುರಸ್ಥಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದರು.

ಅಲ್ಲದೆ ಜಿಲ್ಲೆಯಲ್ಲಿ ಹಾಳಾದ 828 ಶಾಲೆಗಳ 1,707 ಕೊಠಡಿಗಳ ದುರಸ್ಥಿಗೆ 34 ಕೋಟಿ 48 ಲಕ್ಷದ 54 ಸಾವಿರ ರೂ. ಮಂಜೂರಾತಿ‌ ದೊರಕಿದ್ದು ಕಾಮಗಾರಿ ನಡೆಯುತ್ತಿದೆ ಎಂದರು.

ಶಿವಮೊಗ್ಗ: ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುರಿದ ಮಳೆಗೆ ಉಂಟಾದ ಜೀವಹಾನಿ, ಜಾನುವಾರು ಸಾವು, ಮನೆ ಕುಸಿತ ಪ್ರಕರಣ ಹಾಗೂ ಬೆಳೆ ಹಾನಿಗೆ ಜಿಲ್ಲಾಡಳಿತ ಸಮರ್ಪಕವಾಗಿ ಪರಿಹಾರ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು‌ ಮಳೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 18 ಜೀವಹಾನಿಯಾಗಿದೆ. ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂದಂತೆ 90 ಲಕ್ಷ ರೂ ಗಳನ್ನು ಬಿಡುಗಡೆ ಮಾಡಲಾಗಿದೆ.

ಮನೆ ಕಳೆದು ಕೊಂಡವರು, ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ಸೇರಿದಂತೆ ಒಟ್ಟು 7,415 ಕುಟುಂಬಗಳಿಂದ ಪರಿಹಾರಕ್ಕಾಗಿ ಅರ್ಜಿ ಬಂದಿದೆ. ಇವರಿಗೆ ತಲಾ 10 ಸಾವಿರ ರೂಗಳಂತೆ ಒಟ್ಟು 7 ಕೋಟಿ 41 ಲಕ್ಷದ 50 ಸಾವಿರ ರೂ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದ್ರು.

ಶಿವಮೊಗ್ಗ ಜಿಲ್ಲಾಧಿಕಾರಿ ಸುದ್ದಿಗೋಷ್ಠಿ

ಪ್ರವಾಹ ಪೀಡಿತ ಮನೆಗಳನ್ನು ಎ,ಬಿ ಹಾಗೂ ಸಿ ಕೆಟಗರಿ ಮಾಡಿ ಪರಿಹಾರ ನೀಡಲಾಗುತ್ತಿದೆ. ಈ ರೀತಿಯಲ್ಲಿ ಕೆಲ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ಕಡೆ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತಿದೆ ಎಂದರು. ಮಳೆಯಿಂದ ಒಟ್ಟು 51 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ 34 ಜಾನುವಾರುಗಳಿಗೆ 8.87 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಉಳಿದಂತೆ 17 ಜಾನುವಾರುಗಳಿಗೆ 5.38 ಲಕ್ಷ ರೂ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಳೆಹಾನಿಯಾದ 6.284 ರೈತರಿಗೆ 6 ಕೋಟಿ 28 ಲಕ್ಷದ 30 ಸಾವಿರ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 482 ಕೆರೆಗಳ ದುರಸ್ಥಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದರು.

ಅಲ್ಲದೆ ಜಿಲ್ಲೆಯಲ್ಲಿ ಹಾಳಾದ 828 ಶಾಲೆಗಳ 1,707 ಕೊಠಡಿಗಳ ದುರಸ್ಥಿಗೆ 34 ಕೋಟಿ 48 ಲಕ್ಷದ 54 ಸಾವಿರ ರೂ. ಮಂಜೂರಾತಿ‌ ದೊರಕಿದ್ದು ಕಾಮಗಾರಿ ನಡೆಯುತ್ತಿದೆ ಎಂದರು.

Intro:ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಉಂಟಾದ ಜೀವ ಹಾನಿ, ಜಾನುವಾರು ಸಾವು , ಮನೆ ಕುಸಿತ ಪ್ರಕರಣ ಹಾಗೂ ಬೆಳೆ ಹಾನಿಗೆ ಜಿಲ್ಲಾಡಳಿತ ಸಮರ್ಪಕವಾಗಿ ಪರಿಹಾರ ಒದಗಿಸುತ್ತಾ ಬಂದಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಗಾರು‌ ಮಳೆಯಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಒಟ್ಟು 18 ಜೀವ ಹಾನಿಯಾಗಿವೆ.ಇವರ ಕುಟುಂಬದವರಿಗೆ ತಲಾ 5 ಲಕ್ಷ ದಂತೆ 90 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಮಳೆಯಿಂದ ಉಂಟಾದ ಪ್ರವಾಹದಿಂದ ಮನೆ ಕಳೆದು ಕೊಂಡವರು, ಮನೆಗಳಿಗೆ ನೀರು ನುಗ್ಗಿದ್ದು‌ಸೇರಿದಂತೆ ಒಟ್ಟು 7.415 ಕುಟುಂಬಗಳಿಂದ ಅರ್ಜಿ ಬಂದಿದ್ದು, ಇವರಿಗೆ ತಲಾ 10 ಸಾವಿರ ರೂಗಳಂತೆ ಒಟ್ಟು 7 ಕೋಟಿ 41 ಲಕ್ಷದ 50 ಸಾವಿರ ರೂ ಪರಿಹಾರ ವಿತರಿಸಲಾಗಿದೆ.


Body:ಮನೆಗಳಿಗೆ ಎ.ಬಿ ಹಾಗೂ ಸಿ ಕಟಗೇರಿ ಮಾಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದರು. ಕೆಲ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ ಕೆಲವು ಕಡೆ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತಿದೆ ಎಂದರು. ಮಳೆಯಿಂದ ಒಟ್ಟು 51 ಜಾನುವಾರುಗಳು ಮೃತ ಪಟ್ಟಿವೆ. ಇದರಲ್ಲಿ 34 ಜಾನುವಾರುಗಳಿಗೆ 8.87 ಲಕ್ಷ ಪರಿಹಾರ ವಿತರಿಸಲಾಗಿದೆ. ಉಳಿದಂತೆ 17 ಜಾನುವಾರುಗಳಿಗೆ 5.38 ಲಕ್ಷ ಪರಿಹಾರಕ್ಕೆ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಳೆಹಾನಿಯಾದ 6.284 ರೈತರಿಗೆ 6 ಕೋಟಿ 28 ಲಕ್ಷದ 30 ಸಾವಿರ ರೂ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 482 ಕೆರೆಗಳ ದುರಸ್ಥಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಮುಖಂತಾರ ಮನವಿ ಸಲ್ಲಿಸಲಾಗಿದೆ.


Conclusion:ಅಲ್ಲದೆ ಜಿಲ್ಲೆಯಲ್ಲಿ ಹಳಾದ 828 ಶಾಲೆಗಳ 1707 ಶಾಲಾ ಕೊಠಡಿಗಳ ದುರಸ್ಥಿಗೆ 34 ಕೋಟಿ 48 ಲಕ್ಷದ 54 ಸಾವಿರ ರೂ ಮಂಜೂರಾತಿ‌ ದೊರಕಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.ಶಾಲೆಗಳಷ್ಟೆ ಅಲ್ಲದೆ, ಅಂಗನವಾಡಿಗಳು ದುರಸ್ಥಿಗೆ ಬಂದಿವೆ. ಇದರಲ್ಲಿ 225 ಅಂಗನವಾಡಿ ದುರಸ್ಥಿಗೆ 4 ಕೋಟಿ 99 ಲಕ್ಷದ 65 ಸಾವಿರ ರೂ ಬಿಡುಗಡೆಯಾಗಿದೆ.‌ಇದನ್ನು ಜಿಲ್ಲಾ ಪಂಚಾಯತ್ ಸಿಇಓ ಅನುಷ್ಠಾನಾಧಿಕಾರಿಯಾಗಿ ಕೆಲ್ಸ ಮಾಡಿಸುತ್ತಿದ್ದಾರೆ.

ಬೈಟ್: ಶಿವ ಕುಮಾರ್. ಜಿಲ್ಲಾಧಿಕಾರಿ. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.