ETV Bharat / state

ಪಡಿತರ ಅಕ್ಕಿ ಮಾರಾಟ, ಬೋಗಸ್ ರೇಷನ್‌ ಕಾರ್ಡ್ ರದ್ಧತಿಗೆ ಆಗ್ರಹಿಸಿ ಅರೆಬೆತ್ತಲೆ ಹೋರಾಟ

author img

By

Published : Aug 14, 2022, 11:36 AM IST

Updated : Aug 14, 2022, 11:42 AM IST

ಪಡಿತರ ಅಕ್ಕಿಯ ಮಾರಾಟ ಮತ್ತು ಬೋಗಸ್ ರೇಷನ್‌ ಕಾರ್ಡ್‌ಗಳನ್ನು ರದ್ಧು ಮಾಡುವಂತೆ ಒತ್ತಾಯಿಸಿ ವ್ಯಕ್ತಿಯೋರ್ವರು 20 ಕಿಮೀ ಅರೆ ಬೆತ್ತಲೆ ಪಾದಯಾತ್ರೆ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

20-km-padayathra-for-stop-sale-of-ration-and-bogus-cards
ಪಡಿತರ ಅಕ್ಕಿ ಮಾರಾಟ ಮತ್ತು ಬೋಗಸ್ ಕಾರ್ಡ್ ರದ್ದು ಮಾಡುವಂತೆ 20 ಕಿಮೀ ಅರೆ ಬೆತ್ತಲೆ ಪಾದಯಾತ್ರೆ

ಶಿವಮೊಗ್ಗ: ಪಡಿತರ ಅಕ್ಕಿಯನ್ನು ಕಾಳಸಂತೆಗೆ ಮಾರಾಟ ಮಾಡುವುದನ್ನು ಮತ್ತು ಬೋಗಸ್ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾಗರದ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಎಂಬವರು ಪಾದಯಾತ್ರೆ ಕೈಗೊಂಡರು. ಹೊಸಂತೆ ಗ್ರಾಮದಿಂದ ಸಾಗರ ಪಟ್ಟಣದವರೆಗೆ ಸುಮಾರು 20 ಕಿಮೀ ರಾಷ್ಟ್ರಧ್ವಜ ಹಿಡಿದು ಅರೆಬೆತ್ತಲೆಯಾಗಿ ಸಾಗಿ ಬಂದಿರುವ ಇವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಪಡಿತರ ಅಕ್ಕಿ ಮಾರಾಟ ಮತ್ತು ಬೋಗಸ್ ಕಾರ್ಡ್ ರದ್ದು ಮಾಡುವಂತೆ 20 ಕಿಮೀ ಅರೆ ಬೆತ್ತಲೆ ಪಾದಯಾತ್ರೆ

ನಮ್ಮ ಮನೆಯಲ್ಲಿ ಪಡಿತರ ಚೀಟಿ ಅವಶ್ಯಕತೆ ಇಲ್ಲದೇ ಇದ್ದರೂ ಪಡಿತರ ಚೀಟಿ ಮಾಡಿಸಿಕೊಂಡು ಪಡಿತರ ಅಕ್ಕಿ ಪಡೆದು ಅದನ್ನು ಮಾರಾಟ ಮಾಡಿದ್ದಾರೆ. ಇಂತಹ ಪಡಿತರ ಚೀಟಿ ರದ್ದು ಮಾಡಬೇಕೆಂದು ತಹಶೀಲ್ದಾರ್ ಮಲ್ಲೇಶ್ ಪೂಜಾರ್‌ ಅವರಿಗೆ ಮನವಿ ಮಾಡಿ ತಮ್ಮ ಕುಟುಂಬದ ಪಡಿತರ ಚೀಟಿಯನ್ನು ವಾಪಸ್ ನೀಡಿದರು.

ಅಲ್ಲದೇ, ಅನೇಕ ಕಡೆ ಹೀಗೆಯೇ ಪಡಿತರ ಚೀಟಿಯನ್ನು ಪಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಇಂತಹ ಪಡಿತರ ಚೀಟಿಯನ್ನು ಪತ್ತೆ ಮಾಡಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುತ್ತೇವೆ. ಕಾಳಸಂತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: ಸ್ವಾತಂತ್ರ್ಯ ಸಂಭ್ರಮಕ್ಕೂ ಮುನ್ನ ಶೋಕಗೀತೆ.‌. ವೀರಪ್ಪನ್ ಮಿಣ್ಯಂ ದಾಳಿಗೆ 30 ವರ್ಷ

ಶಿವಮೊಗ್ಗ: ಪಡಿತರ ಅಕ್ಕಿಯನ್ನು ಕಾಳಸಂತೆಗೆ ಮಾರಾಟ ಮಾಡುವುದನ್ನು ಮತ್ತು ಬೋಗಸ್ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾಗರದ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಎಂಬವರು ಪಾದಯಾತ್ರೆ ಕೈಗೊಂಡರು. ಹೊಸಂತೆ ಗ್ರಾಮದಿಂದ ಸಾಗರ ಪಟ್ಟಣದವರೆಗೆ ಸುಮಾರು 20 ಕಿಮೀ ರಾಷ್ಟ್ರಧ್ವಜ ಹಿಡಿದು ಅರೆಬೆತ್ತಲೆಯಾಗಿ ಸಾಗಿ ಬಂದಿರುವ ಇವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಪಡಿತರ ಅಕ್ಕಿ ಮಾರಾಟ ಮತ್ತು ಬೋಗಸ್ ಕಾರ್ಡ್ ರದ್ದು ಮಾಡುವಂತೆ 20 ಕಿಮೀ ಅರೆ ಬೆತ್ತಲೆ ಪಾದಯಾತ್ರೆ

ನಮ್ಮ ಮನೆಯಲ್ಲಿ ಪಡಿತರ ಚೀಟಿ ಅವಶ್ಯಕತೆ ಇಲ್ಲದೇ ಇದ್ದರೂ ಪಡಿತರ ಚೀಟಿ ಮಾಡಿಸಿಕೊಂಡು ಪಡಿತರ ಅಕ್ಕಿ ಪಡೆದು ಅದನ್ನು ಮಾರಾಟ ಮಾಡಿದ್ದಾರೆ. ಇಂತಹ ಪಡಿತರ ಚೀಟಿ ರದ್ದು ಮಾಡಬೇಕೆಂದು ತಹಶೀಲ್ದಾರ್ ಮಲ್ಲೇಶ್ ಪೂಜಾರ್‌ ಅವರಿಗೆ ಮನವಿ ಮಾಡಿ ತಮ್ಮ ಕುಟುಂಬದ ಪಡಿತರ ಚೀಟಿಯನ್ನು ವಾಪಸ್ ನೀಡಿದರು.

ಅಲ್ಲದೇ, ಅನೇಕ ಕಡೆ ಹೀಗೆಯೇ ಪಡಿತರ ಚೀಟಿಯನ್ನು ಪಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಇಂತಹ ಪಡಿತರ ಚೀಟಿಯನ್ನು ಪತ್ತೆ ಮಾಡಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುತ್ತೇವೆ. ಕಾಳಸಂತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.

ಇದನ್ನೂ ಓದಿ: ಸ್ವಾತಂತ್ರ್ಯ ಸಂಭ್ರಮಕ್ಕೂ ಮುನ್ನ ಶೋಕಗೀತೆ.‌. ವೀರಪ್ಪನ್ ಮಿಣ್ಯಂ ದಾಳಿಗೆ 30 ವರ್ಷ

Last Updated : Aug 14, 2022, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.