ETV Bharat / state

ವಾಲ್ಮೀಕಿ ಬರೆದ 'ರಾಮಾಯಣ' ಒಂದು ಪುಸ್ತಕ ಅಲ್ಲ, ಅದು ಜೀವನಸಾರ: ಸಚಿವ ಕೆ ಎಸ್ ಈಶ್ವರಪ್ಪ

author img

By

Published : Oct 20, 2021, 5:37 PM IST

ವಾಲ್ಮೀಕಿ ಬರೆದ 'ರಾಮಾಯಣ'ವನ್ನು ಭಾರತದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹೇಳಿದರು.

minister ks Eshwarappa talks about maharshi valmiki
ವಾಲ್ಮೀಕಿ ಜಯಂತಿ ಆಚರಣೆ

ಶಿವಮೊಗ್ಗ: ಭಾರತೀಯ ಸಂಸ್ಕೃತಿಯ ಪ್ರತೀಕ ಅಂದರೆ ಅದು ವಾಲ್ಮೀಕಿ ಎಂದು ಸಚಿವ ಈಶ್ವರಪ್ಪ ಪ್ರತಿಪಾದಿಸಿದ್ದಾರೆ. ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಕುರಿತು ಸಚಿವ ಈಶ್ವರಪ್ಪ ಮಾತು

ವಾಲ್ಮೀಕಿ ಬರೆದ ರಾಮಾಯಣವನ್ನು ಭಾರತದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಮ್ಮ ರಾಮಾಯಣದಲ್ಲಿ ತಿಳಿಸಿದ್ದಾರೆ. ಇವರು ಗಂಡ ಹೆಂಡತಿ ಸಂಬಂಧದ ಕುರಿತು ವಿವರವಾಗಿ ತಿಳಿಸಿದ್ದಾರೆ. ಗಂಡನಿಗೆ ಹೇಗೆ ಮರ್ಯಾದೆ ನೀಡಬೇಕು ಎಂದು ವಾಲ್ಮೀಕಿ ತಿಳಿಸಿದ್ದಾರೆ. ರಾಮ ಸೀತೆ, ಲಕ್ಷ್ಮಣ ಸಂಬಂಧ, ತಂದೆ ತಾಯಿ ಸಂಬಂಧವನ್ನು ತಿಳಿಸಿದ್ದಾರೆ. ತಂದೆಗೆ ಕೊಟ್ಟ ಮಾತಿಗೆ 14 ವರ್ಷ ವನವಾಸ ಮಾಡುತ್ತಾರೆ‌.

ರಾಮಾಯಣ ಒಂದು ಪುಸ್ತಕ ಅಲ್ಲ, ಅದು ಜೀವನಸಾರ ಎಂದ್ರು. ಚೀನಾಗೆ ಹೋದಾಗ ಅಲ್ಲಿನ ಹೋಟೆಲ್​ನಲ್ಲಿ ಬೆಳಗ್ಗೆ ಎದ್ದ ತಕ್ಷಣ ರಾಮಾಯಣ ಪುಸ್ತಕ ಕಾಣುವಂತೆ ಇಟ್ಟಿದ್ದಾರೆ ಎಂದರು.

minister ks Eshwarappa talks about maharshi valmiki
ವಾಲ್ಮೀಕಿ ಜಯಂತಿ ಆಚರಣೆ

ಅಯೋಧ್ಯಾ ರಾಮಮಂದಿರದ ಚರ್ಚೆ ನಡೆಸುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಅಂತ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದ್ದಾರೆ. ನಮ್ಮಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಮನ ಹುಟ್ಟಿನ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಾಮಾಯಣದ ಪುಸ್ತಕವು ಎಲ್ಲ ಧರ್ಮ, ಜಾತಿಯವರು ಓದಿದರೆ ಜೀವನದ ದಾರಿ ದೀಪ ಕಾಣುತ್ತದೆ. ನಮ್ಮೆಲ್ಲರ ದೇಹದಲ್ಲಿ ವಾಲ್ಮೀಕಿಯ ರಕ್ತ ಹರಿಯುತ್ತಿದೆ ಅಂತ ಧೈರ್ಯವಾಗಿ ಹೇಳಬಹುದು. ವಾಲ್ಮೀಕಿ ಬರೆದ ರಾಮಾಯಣದಂತೆ ನಡೆದುಕೊಂಡರೆ ಸಾಕು ಎಂದ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ: ಭಾರತೀಯ ಸಂಸ್ಕೃತಿಯ ಪ್ರತೀಕ ಅಂದರೆ ಅದು ವಾಲ್ಮೀಕಿ ಎಂದು ಸಚಿವ ಈಶ್ವರಪ್ಪ ಪ್ರತಿಪಾದಿಸಿದ್ದಾರೆ. ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಕುರಿತು ಸಚಿವ ಈಶ್ವರಪ್ಪ ಮಾತು

ವಾಲ್ಮೀಕಿ ಬರೆದ ರಾಮಾಯಣವನ್ನು ಭಾರತದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಮ್ಮ ರಾಮಾಯಣದಲ್ಲಿ ತಿಳಿಸಿದ್ದಾರೆ. ಇವರು ಗಂಡ ಹೆಂಡತಿ ಸಂಬಂಧದ ಕುರಿತು ವಿವರವಾಗಿ ತಿಳಿಸಿದ್ದಾರೆ. ಗಂಡನಿಗೆ ಹೇಗೆ ಮರ್ಯಾದೆ ನೀಡಬೇಕು ಎಂದು ವಾಲ್ಮೀಕಿ ತಿಳಿಸಿದ್ದಾರೆ. ರಾಮ ಸೀತೆ, ಲಕ್ಷ್ಮಣ ಸಂಬಂಧ, ತಂದೆ ತಾಯಿ ಸಂಬಂಧವನ್ನು ತಿಳಿಸಿದ್ದಾರೆ. ತಂದೆಗೆ ಕೊಟ್ಟ ಮಾತಿಗೆ 14 ವರ್ಷ ವನವಾಸ ಮಾಡುತ್ತಾರೆ‌.

ರಾಮಾಯಣ ಒಂದು ಪುಸ್ತಕ ಅಲ್ಲ, ಅದು ಜೀವನಸಾರ ಎಂದ್ರು. ಚೀನಾಗೆ ಹೋದಾಗ ಅಲ್ಲಿನ ಹೋಟೆಲ್​ನಲ್ಲಿ ಬೆಳಗ್ಗೆ ಎದ್ದ ತಕ್ಷಣ ರಾಮಾಯಣ ಪುಸ್ತಕ ಕಾಣುವಂತೆ ಇಟ್ಟಿದ್ದಾರೆ ಎಂದರು.

minister ks Eshwarappa talks about maharshi valmiki
ವಾಲ್ಮೀಕಿ ಜಯಂತಿ ಆಚರಣೆ

ಅಯೋಧ್ಯಾ ರಾಮಮಂದಿರದ ಚರ್ಚೆ ನಡೆಸುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಅಂತ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದ್ದಾರೆ. ನಮ್ಮಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಮನ ಹುಟ್ಟಿನ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಾಮಾಯಣದ ಪುಸ್ತಕವು ಎಲ್ಲ ಧರ್ಮ, ಜಾತಿಯವರು ಓದಿದರೆ ಜೀವನದ ದಾರಿ ದೀಪ ಕಾಣುತ್ತದೆ. ನಮ್ಮೆಲ್ಲರ ದೇಹದಲ್ಲಿ ವಾಲ್ಮೀಕಿಯ ರಕ್ತ ಹರಿಯುತ್ತಿದೆ ಅಂತ ಧೈರ್ಯವಾಗಿ ಹೇಳಬಹುದು. ವಾಲ್ಮೀಕಿ ಬರೆದ ರಾಮಾಯಣದಂತೆ ನಡೆದುಕೊಂಡರೆ ಸಾಕು ಎಂದ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.