ETV Bharat / state

ಶಿವಮೊಗ್ಗ: ಮುಸುಕು ಧರಿಸಿ ಬಂದು ಯುವಕನ ಮೇಲೆ ದಾಳಿ - ಈಟಿವಿ ಭಾರತ​ ಕರ್ನಾಟಕ

ಶಿನಮೊಗ್ಗದಲ್ಲಿ ಮತ್ತೊಬ್ಬ ಯುವಕನ ಮೇಲೆ ಹಲ್ಲೆ. ನಿನ್ನೆ ರಾತ್ರಿ ಮೂವರು ದುಷ್ಕರ್ಮಿಗಳು ಮುಸುಕು ಧರಿಸಿ ಬಂದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.

Etv Bharat
ಮುಸುಕು ಧರಿಸಿ ಬಂದು ಹಿಂದೂ ಯುವಕನ ಮೇಲೆ ದಾಳಿ
author img

By

Published : Oct 25, 2022, 9:16 AM IST

Updated : Oct 25, 2022, 10:50 AM IST

ಶಿವಮೊಗ್ಗ: ಮನೆಗೆ ಹೊರಟಿದ್ದ ವ್ಯಕ್ತಿಯ ಮೇಲೆ ಬೈಕ್​ನಲ್ಲಿ ಬಂದಿದ್ದ ಮೂವರು ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಭರ್ಮಪ್ಪ ನಗರದಲ್ಲಿ ನಡೆದಿದೆ. ಭರ್ಮಪ್ಪ ನಗರದ ನಿವಾಸಿ ಪ್ರಕಾಶ್(30) ಎಂಬಾತನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕಾಶ್ ಭರ್ಮಪ್ಪ ನಗರದ ನಿವಾಸಿಯಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಸ್ ಸ್ಟಾಂಡ್ ಹೋಗಿ ವಾಪಸ್ ಆಟೋದಲ್ಲಿ ಬಂದಿದ್ದಾರೆ. ಸ್ನೇಹಿತರು ಪ್ರಕಾಶ್​ನನ್ನು ಬಿಟ್ಟು ವಾಪಸ್ ಹೋಗುತ್ತಿದ್ದಂತಯೇ ಬೈಕ್​ನಲ್ಲಿ ಬಂದ ಮೂವರು ಏಕಾಏಕಿ ಪ್ರಕಾಶ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇದರಿಂದ ಪ್ರಕಾಶ್​ರವರ ತಲೆ, ಮುಖ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದೆ. ಇದೇ ವೇಳೆ, ತಕ್ಷಣ ಕೆಳಗೆ ಬಿದ್ದ ಪ್ರಕಾಶ್​ನನ್ನು ಮೂವರು ಕಾಲಿನಲ್ಲಿ ತುಳಿದು ಹಾಕಿದ್ದಾರೆ. ಅವರಿಂದ ತಪ್ಪಿಸಿಕೊಂಡ ಪ್ರಕಾಶ್ ಮನೆಗೆ ಓಡಿದ್ದಾನೆ. ಮನೆಯವರು ಪ್ರಕಾಶನ ಕೂಗಾಟ ಕೇಳಿ ಬಾಗಿಲು ತೆಗೆದು ನೋಡಿ ತಕ್ಷಣ ಒಳಗೆ ಕರೆದು ಕೊಂಡಿದ್ದಾರೆ. ಅಷ್ಟರಲ್ಲಿ ಬೈಕ್​ನಲ್ಲಿ ಬಂದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಸುಕು ಧರಿಸಿ ಬಂದು ಯುವಕನ ಮೇಲೆ ದಾಳಿ

ನನಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ: ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ, ಪಥ ಸಂಚಲನವನ್ನು ನೋಡಲು ಹೋಗಿದ್ದು ಬಿಟ್ಟರೆ, ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮನೆಯ ಬಳಿಯೇ ಕುಲುಮೆ ಕೆಲಸ ಮಾಡಿಕೊಂಡು ಇದ್ದವನು. ನನಗೆ ಅವರು ಯಾಕೆ ಹಲ್ಲೆ ನಡೆಸಿದರು ಅಂತ ಗೊತ್ತಿಲ್ಲ ಎಂದು ಹಲ್ಲೆಗೆ ಒಳಗಾದ ಪ್ರಕಾಶ್ ಹಾಗೂ ಆತನ ತಾಯಿ ರಾಧಾ ಈ ಟಿವಿ ಭಾರತ್​ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ: ನಿನ್ನೆ ರಾತ್ರಿ ಹಲ್ಲೆ ನಡೆಸಿದವರು ಭರ್ಮಪ್ಪ‌ನಗರ, ಸಿಗೇಹಟ್ಟಿ ಭಾಗದಲ್ಲಿ ಕೂಗಾಡಿ ಓಡಾಡಿದ್ದಾರೆ. ಇದರಿಂದ ಈ ಭಾಗದ ಯುವಕರು ಇವರನ್ನು ಹುಡುಕುವ ಪ್ರಯತ್ನ ಮಾಡಿದರೂ ಸಹ ಅದು ಸಾಧ್ಯವಾಗಿಲ್ಲ. ಸ್ಥಳಕ್ಕೆ ಎಸ್​ಪಿ ಮಿಥುನ್ ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಇಲಾಖೆಯವರು ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ : ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್​ ದಾಖಲು

ಶಿವಮೊಗ್ಗ: ಮನೆಗೆ ಹೊರಟಿದ್ದ ವ್ಯಕ್ತಿಯ ಮೇಲೆ ಬೈಕ್​ನಲ್ಲಿ ಬಂದಿದ್ದ ಮೂವರು ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಭರ್ಮಪ್ಪ ನಗರದಲ್ಲಿ ನಡೆದಿದೆ. ಭರ್ಮಪ್ಪ ನಗರದ ನಿವಾಸಿ ಪ್ರಕಾಶ್(30) ಎಂಬಾತನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕಾಶ್ ಭರ್ಮಪ್ಪ ನಗರದ ನಿವಾಸಿಯಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಸ್ ಸ್ಟಾಂಡ್ ಹೋಗಿ ವಾಪಸ್ ಆಟೋದಲ್ಲಿ ಬಂದಿದ್ದಾರೆ. ಸ್ನೇಹಿತರು ಪ್ರಕಾಶ್​ನನ್ನು ಬಿಟ್ಟು ವಾಪಸ್ ಹೋಗುತ್ತಿದ್ದಂತಯೇ ಬೈಕ್​ನಲ್ಲಿ ಬಂದ ಮೂವರು ಏಕಾಏಕಿ ಪ್ರಕಾಶ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇದರಿಂದ ಪ್ರಕಾಶ್​ರವರ ತಲೆ, ಮುಖ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದೆ. ಇದೇ ವೇಳೆ, ತಕ್ಷಣ ಕೆಳಗೆ ಬಿದ್ದ ಪ್ರಕಾಶ್​ನನ್ನು ಮೂವರು ಕಾಲಿನಲ್ಲಿ ತುಳಿದು ಹಾಕಿದ್ದಾರೆ. ಅವರಿಂದ ತಪ್ಪಿಸಿಕೊಂಡ ಪ್ರಕಾಶ್ ಮನೆಗೆ ಓಡಿದ್ದಾನೆ. ಮನೆಯವರು ಪ್ರಕಾಶನ ಕೂಗಾಟ ಕೇಳಿ ಬಾಗಿಲು ತೆಗೆದು ನೋಡಿ ತಕ್ಷಣ ಒಳಗೆ ಕರೆದು ಕೊಂಡಿದ್ದಾರೆ. ಅಷ್ಟರಲ್ಲಿ ಬೈಕ್​ನಲ್ಲಿ ಬಂದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಸುಕು ಧರಿಸಿ ಬಂದು ಯುವಕನ ಮೇಲೆ ದಾಳಿ

ನನಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ: ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ, ಪಥ ಸಂಚಲನವನ್ನು ನೋಡಲು ಹೋಗಿದ್ದು ಬಿಟ್ಟರೆ, ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮನೆಯ ಬಳಿಯೇ ಕುಲುಮೆ ಕೆಲಸ ಮಾಡಿಕೊಂಡು ಇದ್ದವನು. ನನಗೆ ಅವರು ಯಾಕೆ ಹಲ್ಲೆ ನಡೆಸಿದರು ಅಂತ ಗೊತ್ತಿಲ್ಲ ಎಂದು ಹಲ್ಲೆಗೆ ಒಳಗಾದ ಪ್ರಕಾಶ್ ಹಾಗೂ ಆತನ ತಾಯಿ ರಾಧಾ ಈ ಟಿವಿ ಭಾರತ್​ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ: ನಿನ್ನೆ ರಾತ್ರಿ ಹಲ್ಲೆ ನಡೆಸಿದವರು ಭರ್ಮಪ್ಪ‌ನಗರ, ಸಿಗೇಹಟ್ಟಿ ಭಾಗದಲ್ಲಿ ಕೂಗಾಡಿ ಓಡಾಡಿದ್ದಾರೆ. ಇದರಿಂದ ಈ ಭಾಗದ ಯುವಕರು ಇವರನ್ನು ಹುಡುಕುವ ಪ್ರಯತ್ನ ಮಾಡಿದರೂ ಸಹ ಅದು ಸಾಧ್ಯವಾಗಿಲ್ಲ. ಸ್ಥಳಕ್ಕೆ ಎಸ್​ಪಿ ಮಿಥುನ್ ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಇಲಾಖೆಯವರು ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ : ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್​ ದಾಖಲು

Last Updated : Oct 25, 2022, 10:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.