ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿಗೆ ಚಾಲನೆ ನೀಡಿದ ಖಾದರ್​: ಭಾಷಣದಲ್ಲೇ ನಗಿಸಿದ ಈಶ್ವರಪ್ಪ

ನಗರದ ಗೋಪಿ ವೃತ್ತದಲ್ಲಿ ಕಾಮಗಾರಿಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಲಿ- ಮಾಜಿ ಸಚಿವರು ಪರಸ್ಪರ ಅಭಿವೃದ್ಧಿ ವಿಷಯದಲ್ಲಿ ಟಾಂಗ್​ ನೀಡಿದ್ದು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.

author img

By

Published : Feb 24, 2019, 11:59 PM IST

ಯು.ಟಿ.ಖಾದರ್

ಶಿವಮೊಗ್ಗ: ಸ್ಮಾರ್ಟ್ ಸಿಟಿಯ 400 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ನಗರಾಭಿವೃದ್ದಿ ಖಾತೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.

ನಗರದ ಗೋಪಿ ವೃತ್ತದಲ್ಲಿ ಕಾಮಗಾರಿಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಲಿ- ಮಾಜಿ ಸಚಿವರು ಪರಸ್ಪರ ಅಭಿವೃದ್ಧಿ ವಿಷಯದಲ್ಲಿ ಟಾಂಗ್​ ನೀಡಿದ್ದು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.

ಯು.ಟಿ.ಖಾದರ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಿಮ್ಮ ಸರ್ಕಾರ ಏನಾದರೂ ಐದು ವರ್ಷದವರೆಗೆ ಇದ್ದರೆ ಶಿವಮೊಗ್ಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು, ಸ್ಮಾರ್ಟ್ ಸಿಟಿ ಅನುದಾನದ ಜೊತೆ ನಿಮ್ಮ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೇ ಶಿವಮೊಗ್ಗ ಕ್ಷೇತ್ರಕ್ಕೆ ಕನಿಷ್ಟ 25 ಕೋಟಿ ಅನುದಾನವಾದರೂ ನೀಡಿ ಎಂದು ಖಾದರ್​ ಉದ್ದೇಶಿಸಿ ಮಾತನಾಡಿದರು.

ಶಾಸಕರುಗಳ ಕ್ಷೇತ್ರಕ್ಕೆ ಎರಡು ಕೋಟಿ ನೀಡುವುದಾಗಿ ಸಿಎಂ ಹೇಳಿದ್ರು. ಈಗ ಒಂದು ಕೋಟಿ ಮಾತ್ರ ಬಂದಿದೆ. ಉಳಿದ ಒಂದು ಕೋಟಿಯನ್ನು ಬೇಗ ಬಿಡುಗಡೆ ಮಾಡಿಸಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯಿಂದಲೂ‌ ಸ್ಥಳೀಯ ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡಿಸಿ. ಜಿಲ್ಲೆಯ ರಾಜಕಾರಣಿಗಳು ಚುನಾವಣೆಯಲ್ಲಿ ಅಷ್ಟೆ ರಾಜಕೀಯ ಮಾಡುತ್ತೇವೆ, ಅಭಿವೃದ್ಧಿಯನ್ನು ನಾವು ಒಟ್ಟಿಗೇ ಮಾಡುತ್ತೇವೆ ಎಂದರು.

ಸಚಿವ ಯು.ಟಿ.ಖಾದರ್ ರವರು ತಮ್ಮ ಭಾಷಣದಲ್ಲಿ ಈಶ್ವರಪ್ಪನವರನ್ನು ಹೂಗಳುತ್ತಲೆ ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಸುಭದ್ರವಾಗಿ ಐದು ವರ್ಷ ನಡೆಯಲು ಬಿಟ್ಟರೆ ನಿಮಗೆ ಅನುದಾನ ನೀಡುತ್ತೇವೆ. ನಮ್ಮವರು ನಿಮ್ಮ ಬಳಿ ಬಂದ್ರೆ ಪುನಃ ನಮ್ಮ ಬಳಿಯೆ ಕಳುಹಿಸಿ ಎಂದು ಆಪರೇಷನ್ ಕಮಲಕ್ಕೆ ಟಾಂಗ್ ನೀಡಿದರು.

ಇನ್ನೂ 25 ಕೋಟಿ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಖಾದರ್​, ನಮ್ಮ ಇಲಾಖೆಯಿಂದ 10 ಕೋಟಿ ನೀಡುತ್ತೆನೆ. ರಾಜ್ಯ ಸರ್ಕಾರ ನಗರೋತ್ಥಾನ, ಮಲೆನಾಡು ಅಭಿವೃದ್ಧಿ ಮಂಡಳಿ, ಸ್ಮಾರ್ಟ್ ಸಿಟಿ ಹಣ ಹೀಗೆ ಸಾಕಷ್ಟು‌ ಹಣ ನಗರಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ: ಸ್ಮಾರ್ಟ್ ಸಿಟಿಯ 400 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ನಗರಾಭಿವೃದ್ದಿ ಖಾತೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.

ನಗರದ ಗೋಪಿ ವೃತ್ತದಲ್ಲಿ ಕಾಮಗಾರಿಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಲಿ- ಮಾಜಿ ಸಚಿವರು ಪರಸ್ಪರ ಅಭಿವೃದ್ಧಿ ವಿಷಯದಲ್ಲಿ ಟಾಂಗ್​ ನೀಡಿದ್ದು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.

ಯು.ಟಿ.ಖಾದರ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಿಮ್ಮ ಸರ್ಕಾರ ಏನಾದರೂ ಐದು ವರ್ಷದವರೆಗೆ ಇದ್ದರೆ ಶಿವಮೊಗ್ಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು, ಸ್ಮಾರ್ಟ್ ಸಿಟಿ ಅನುದಾನದ ಜೊತೆ ನಿಮ್ಮ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೇ ಶಿವಮೊಗ್ಗ ಕ್ಷೇತ್ರಕ್ಕೆ ಕನಿಷ್ಟ 25 ಕೋಟಿ ಅನುದಾನವಾದರೂ ನೀಡಿ ಎಂದು ಖಾದರ್​ ಉದ್ದೇಶಿಸಿ ಮಾತನಾಡಿದರು.

ಶಾಸಕರುಗಳ ಕ್ಷೇತ್ರಕ್ಕೆ ಎರಡು ಕೋಟಿ ನೀಡುವುದಾಗಿ ಸಿಎಂ ಹೇಳಿದ್ರು. ಈಗ ಒಂದು ಕೋಟಿ ಮಾತ್ರ ಬಂದಿದೆ. ಉಳಿದ ಒಂದು ಕೋಟಿಯನ್ನು ಬೇಗ ಬಿಡುಗಡೆ ಮಾಡಿಸಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯಿಂದಲೂ‌ ಸ್ಥಳೀಯ ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡಿಸಿ. ಜಿಲ್ಲೆಯ ರಾಜಕಾರಣಿಗಳು ಚುನಾವಣೆಯಲ್ಲಿ ಅಷ್ಟೆ ರಾಜಕೀಯ ಮಾಡುತ್ತೇವೆ, ಅಭಿವೃದ್ಧಿಯನ್ನು ನಾವು ಒಟ್ಟಿಗೇ ಮಾಡುತ್ತೇವೆ ಎಂದರು.

ಸಚಿವ ಯು.ಟಿ.ಖಾದರ್ ರವರು ತಮ್ಮ ಭಾಷಣದಲ್ಲಿ ಈಶ್ವರಪ್ಪನವರನ್ನು ಹೂಗಳುತ್ತಲೆ ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಸುಭದ್ರವಾಗಿ ಐದು ವರ್ಷ ನಡೆಯಲು ಬಿಟ್ಟರೆ ನಿಮಗೆ ಅನುದಾನ ನೀಡುತ್ತೇವೆ. ನಮ್ಮವರು ನಿಮ್ಮ ಬಳಿ ಬಂದ್ರೆ ಪುನಃ ನಮ್ಮ ಬಳಿಯೆ ಕಳುಹಿಸಿ ಎಂದು ಆಪರೇಷನ್ ಕಮಲಕ್ಕೆ ಟಾಂಗ್ ನೀಡಿದರು.

ಇನ್ನೂ 25 ಕೋಟಿ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಖಾದರ್​, ನಮ್ಮ ಇಲಾಖೆಯಿಂದ 10 ಕೋಟಿ ನೀಡುತ್ತೆನೆ. ರಾಜ್ಯ ಸರ್ಕಾರ ನಗರೋತ್ಥಾನ, ಮಲೆನಾಡು ಅಭಿವೃದ್ಧಿ ಮಂಡಳಿ, ಸ್ಮಾರ್ಟ್ ಸಿಟಿ ಹಣ ಹೀಗೆ ಸಾಕಷ್ಟು‌ ಹಣ ನಗರಕ್ಕೆ ಬರುತ್ತಿದೆ ಎಂದು ತಿಳಿಸಿದರು.

Intro:ಕೇಂದ್ರದ ಹಿತ ಕಾಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಕೇಂದ್ರದ ವಿರುದ್ದ ಶಿವಮೊಗ್ಗದಲ್ಲಿ ಹರಿಹಾಯ್ದಿದ್ದಾರೆ. ನರೇಂದ್ರ ಮೋದಿರವರು ಚುನಾವಣೆಯ ಮುಂಚೆ ಹೇಳಿದ ಒಂದು ಮಾತನ್ನು ಈಡೇರಿಸಿಲ್ಲ. ದೇಶದ ಭವಿಷ್ಯಕ್ಕೆ ಬೇಕಾದ ಒಂದು ದೊಡ್ಡ ಯೋಜನೆಯನ್ನು ಕಳೆದ ನಾಲ್ಕುವರೆ ವರ್ಷದಲ್ಲಿ ಜಾರಿಗೆ ತರಲಿಲ್ಲ. ಹಾಗೇನಾದ್ರೂ ತಂದಿದ್ದರೆ ಆದನ್ನು ತೋರಿಸಲಿ ಎಂದರು ಈ ವೇಳೆ ಖಾದರ್ ರವರು ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿ ಗೊಂಡ ಸಚಿವ ಖಾದರ್ ಬರುತ್ತೆನೆ ಎಂದು ಹೇಳಿದರು. ನಂತ್ರ ಪಕ್ಕದ ರೂಂನಲ್ಲಿ ಈಶ್ವರಪ್ಪ ಕುಳಿತು ಕೊಂಡರು. ಹಾಲಿ ಮಾಜಿ ಸಚಿವರ ಮಾತುಕಥೆ ನೆರೆದಿದ್ದರಿಗೆ ನಗು ತರಿಸುವಂತೆ ಆಯಿತು.


Body:ಇವರ ಅವಧಿಯಲ್ಲಿ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಆದ್ರೆ, ಇವರ ನೀತಿಗಳಿಂದ ನೀತಿ ಆಯೋಗದ ಅಧ್ಯಕ್ಷರು ಅದರಂತೆ ರಿಸರ್ವ ಬ್ಯಾಂಕ್ ಅಧ್ಯಕ್ಷರು ಸಹ ರಾಜೀನಾಮೆ ಕೊಟ್ಟು ಹೋಗುವಂತೆ ಮಾಡಿದ್ದರು. ಪಾಕಿಸ್ತಾನದ ವಿಚಾರದಲ್ಲಿ ನರೇಂದ್ರ ಮೋದಿ ಸ್ವಲ್ಪವಾದರೂ ಸಹ ಇಂದಿರಗಾಂಧಿಯಂತೆ ನಡೆದು ಕೊಳ್ಳಲಿ ಎಂದರು. ಚುನಾವಣೆಗೂ ಮುನ್ನಾ ಓರ್ವ ಯೋಧನ ತಲೆ ಹೋದ್ರೆ ನಾಲ್ಕು ತಲೆ ತರುವುದಾಗಿ ಹೇಳಿದ್ದ ಮೋದಿ ಪುಲ್ವಾಮ ದಾಳಿಯ ನಂತ್ರ ಸುಮ್ಮನೆ ಇರುವುದು ಏಕೆ ಪ್ರಶ್ನೆ ಮಾಡಿದರು.


Conclusion:ಪಂಜಾಬ್ ನ ಪಠಾಣ್ ಕೋಟ್ ದಾಳಿಯ ನಂತ್ರ ಪಾಕಿಸ್ತಾನದ ಐಎಸ್ಐ ತಂಡವನ್ನು ಭಾರತಕ್ಕೆ ಬಿಟ್ಟು ತನಿಖೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದು ಎಷ್ಟು‌ ಸರಿ. ಈ ವಿಚಾರಗಳ ಚರ್ಚೆ ಆಗಬೇಕಿದೆ ಎಂದರು. ಮುಂಬರುವ ಲೋಕಸಭ ಚುನಾವಣೆಯಲ್ಲಿ ಎರಡು ಪಕ್ಷದ ಹೈಕಮಾಂಡ್ ರವರು ಕುಳಿತು ಟಿಕೇಟ್ ಹಂಂಚಿಕೆ ಮಾಡಲಿದ್ದಾರೆ ಎಂದರು. ಅಲ್ಲದೆ ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ‌ ವಿಫಲರಾಗಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿ ಕೊಂಡಿದ್ದಾರೆ. ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದರೆ ನಾವು ಒನ್ ಡೇ ಮ್ಯಾಚ್ ಆಡುತ್ತೆವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ವಿಫಲಕ್ಕೆ ಬಿಜೆಪಿಗೆ ಟಾಂಗ್ ನೀಡಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.