ETV Bharat / state

ಗೊಡ್ಡು ಬೆದರಿಕೆ, ಹೇಡಿಗಳು ಬರೆದಿರುವ ಪತ್ರಕ್ಕೆ ನಾನೆಂದೂ ಹೆದರುವುದಿಲ್ಲ..ಕೆ ಎಸ್ ಈಶ್ವರಪ್ಪ

author img

By

Published : Aug 25, 2022, 7:40 AM IST

ಅನಾಮಧೇಯ ಬೆದರಿಕೆ ಪತ್ರ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, 'ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ನಾನೆಂದೂ ಇಂತಹ ಪತ್ರಗಳಿಗೆ ಹೆದರಲ್ಲ ಬೆದರಲ್ಲ. ಈ ಕುರಿತು ದೂರು ನೀಡಿದ್ದೇನೆ ಎಂದರು.

k s eshwarappa
ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಗೊಡ್ಡು ಬೆದರಿಕೆ ಹಾಗೂ ಹೇಡಿಗಳು ಬರೆದಿರುವ ಪತ್ರಗಳಿಗೆ ನಾನೆಂದೂ ಹೆದರಲ್ಲ-ಬೆದರಲ್ಲ ಅಂತಾ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಅನಾಮಧೇಯ ವ್ಯಕ್ತಿಯೊಬ್ಬರು ಬರೆದಿರುವ ಬೆದರಿಕೆ ಪತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಮುಸ್ಲಿಂ ಗುಂಡಾಗಳು ಅನಾಮಧೇಯ ಪತ್ರ ಬರೆದಿದ್ದಾರೆ. ಅವರ ಗೊಡ್ಡು ಬೆದರಿಕೆ ಪತ್ರಕ್ಕೆ ನಾನೆಂದು ಹೆದರುವುದಿಲ್ಲ. ಯಾರು ಬೆದರಿಕೆ ಪತ್ರ ಬರೆದಿದ್ದಾನೋ ಅವನ ಮೇಲೆ ತನಿಖೆ ಆಗಬೇಕು ಎಂದು ಒಬ್ಬ ಶಾಸಕನಾಗಿ ದೂರು ಕೊಟ್ಟಿದ್ದೇನೆ, ಪ್ರಕರಣ ಸಹ ದಾಖಲಿಸಿದ್ದೇನೆ ಎಂದರು.

ಬೆದರಿಕೆ ಪತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ, ವಿಶ್ವಾಸ ಇದೆ. ಈ ಪತ್ರ ನಮ್ಮ ರಾಜ್ಯದಿಂದಲೇ ಬಂದಿರೋದು. ಗೂಂಡಾಗಳಿಗೆ ಗೂಂಡಾ ಅಂತಾ ಕರೆಯದೇ ಬೇರೆ ಪದ ಬಳಸಲು ಆಗುತ್ತದಾ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ನಾನು ಗೆದ್ದಾಗ ಶಿವಮೊಗ್ಗದಲ್ಲಿ ಗಲಾಟೆ ನಡೆದಿಲ್ಲ: ಕೆ ಎಸ್​ ಈಶ್ವರಪ್ಪ

ಶಿವಮೊಗ್ಗ: ಗೊಡ್ಡು ಬೆದರಿಕೆ ಹಾಗೂ ಹೇಡಿಗಳು ಬರೆದಿರುವ ಪತ್ರಗಳಿಗೆ ನಾನೆಂದೂ ಹೆದರಲ್ಲ-ಬೆದರಲ್ಲ ಅಂತಾ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಅನಾಮಧೇಯ ವ್ಯಕ್ತಿಯೊಬ್ಬರು ಬರೆದಿರುವ ಬೆದರಿಕೆ ಪತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಮುಸ್ಲಿಂ ಗುಂಡಾಗಳು ಅನಾಮಧೇಯ ಪತ್ರ ಬರೆದಿದ್ದಾರೆ. ಅವರ ಗೊಡ್ಡು ಬೆದರಿಕೆ ಪತ್ರಕ್ಕೆ ನಾನೆಂದು ಹೆದರುವುದಿಲ್ಲ. ಯಾರು ಬೆದರಿಕೆ ಪತ್ರ ಬರೆದಿದ್ದಾನೋ ಅವನ ಮೇಲೆ ತನಿಖೆ ಆಗಬೇಕು ಎಂದು ಒಬ್ಬ ಶಾಸಕನಾಗಿ ದೂರು ಕೊಟ್ಟಿದ್ದೇನೆ, ಪ್ರಕರಣ ಸಹ ದಾಖಲಿಸಿದ್ದೇನೆ ಎಂದರು.

ಬೆದರಿಕೆ ಪತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ, ವಿಶ್ವಾಸ ಇದೆ. ಈ ಪತ್ರ ನಮ್ಮ ರಾಜ್ಯದಿಂದಲೇ ಬಂದಿರೋದು. ಗೂಂಡಾಗಳಿಗೆ ಗೂಂಡಾ ಅಂತಾ ಕರೆಯದೇ ಬೇರೆ ಪದ ಬಳಸಲು ಆಗುತ್ತದಾ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ನಾನು ಗೆದ್ದಾಗ ಶಿವಮೊಗ್ಗದಲ್ಲಿ ಗಲಾಟೆ ನಡೆದಿಲ್ಲ: ಕೆ ಎಸ್​ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.