ETV Bharat / state

ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ : ಕೆ ಎಸ್‌ ಈಶ್ವರಪ್ಪ

author img

By

Published : May 11, 2019, 3:28 PM IST

ಲೋಕಸಭಾ ಚುನಾವಣಾ ಫಲಿತಾಂಶದ ನಂತ್ರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ವೇಳೆ ಯಡಿಯೂರಪ್ಪ ಅಧ್ಯಕ್ಷರಾಗಿ ಮುಂದುವರೆಯುತ್ತಾರೋ, ವಿರೋಧ ಪಕ್ಷದ ನಾಯಕರಾಗಿ ಉಳಿಯುತ್ತಾರೋ ನೋಡಬೇಕು ಎಂದ ಕೆ ಎಸ್‌ ಈಶ್ವರಪ್ಪ.

ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ

ಇವತ್ತು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ವೇಳೆ ಯಡಿಯೂರಪ್ಪ ಅಧ್ಯಕ್ಷರಾಗಿ ಮುಂದುವರೆಯುತ್ತಾರೋ, ವಿರೋಧ ಪಕ್ಷದ ನಾಯಕರಾಗಿ ಉಳಿಯುತ್ತಾರೋ ನೋಡಬೇಕು ಎಂದರು. ಮೈತ್ರಿ ಸರ್ಕಾರದಲ್ಲಿ ಪರ್ಯಾಯ ಸಿಎಂ ಮಾಡಲು ಹೊರಟಿದ್ದಾರೆ. ಸಿಎಂ ಕುಮಾರಸ್ವಾಮಿರವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹಾಗೂ ಮಗನ ಗೆಲುವಿಗಾಗಿ ದೇವಾಲಯಗಳ ಭೇಟಿ ಹಾಗೂ ಹೋಮ-ಹವನ ನಡೆಸುತ್ತಿದ್ದಾರೆ. ಉಳಿದಂತೆ ರೆಸಾರ್ಟ್​ನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ರೆಸಾರ್ಟ್​ನಲ್ಲಿಯೇ ರಾಜ್ಯದ ಬರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿಗೂ ಸಹ ಹಾಹಾಕಾರವಿದೆ. ಬರ ಕಾಮಗಾರಿಗೆ ಸಾಕಷ್ಟು‌ ಹಣ ಇದೆ. ಹಣ ಖರ್ಚು ಮಾಡಿ ಜನರಿಗೆ ನೀರು ಕೊಡಿ ಎಂದು ಆಗ್ರಹಿಸಿದ ಅವರು ಬಿಜೆಪಿ‌ ಎರಡುೂ ಉಪ ಚುನಾವಣೆಯಲ್ಲಿ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಬಿಜೆಪಿ‌ ಗೆಲ್ಲಲಿದೆ. ಟ್ರಬಲ್ ಶೂಟರ್ ಕೆಲಸ ನಡೆಯೋದಿಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ವಿರುದ್ದ ಗುಡುಗಿದರು.

ಶಿವಮೊಗ್ಗ: ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ

ಇವತ್ತು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ವೇಳೆ ಯಡಿಯೂರಪ್ಪ ಅಧ್ಯಕ್ಷರಾಗಿ ಮುಂದುವರೆಯುತ್ತಾರೋ, ವಿರೋಧ ಪಕ್ಷದ ನಾಯಕರಾಗಿ ಉಳಿಯುತ್ತಾರೋ ನೋಡಬೇಕು ಎಂದರು. ಮೈತ್ರಿ ಸರ್ಕಾರದಲ್ಲಿ ಪರ್ಯಾಯ ಸಿಎಂ ಮಾಡಲು ಹೊರಟಿದ್ದಾರೆ. ಸಿಎಂ ಕುಮಾರಸ್ವಾಮಿರವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹಾಗೂ ಮಗನ ಗೆಲುವಿಗಾಗಿ ದೇವಾಲಯಗಳ ಭೇಟಿ ಹಾಗೂ ಹೋಮ-ಹವನ ನಡೆಸುತ್ತಿದ್ದಾರೆ. ಉಳಿದಂತೆ ರೆಸಾರ್ಟ್​ನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ರೆಸಾರ್ಟ್​ನಲ್ಲಿಯೇ ರಾಜ್ಯದ ಬರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿಗೂ ಸಹ ಹಾಹಾಕಾರವಿದೆ. ಬರ ಕಾಮಗಾರಿಗೆ ಸಾಕಷ್ಟು‌ ಹಣ ಇದೆ. ಹಣ ಖರ್ಚು ಮಾಡಿ ಜನರಿಗೆ ನೀರು ಕೊಡಿ ಎಂದು ಆಗ್ರಹಿಸಿದ ಅವರು ಬಿಜೆಪಿ‌ ಎರಡುೂ ಉಪ ಚುನಾವಣೆಯಲ್ಲಿ ಗೆಲ್ಲಲಿದೆ. ಶಿವಮೊಗ್ಗದಲ್ಲಿ ಬಿಜೆಪಿ‌ ಗೆಲ್ಲಲಿದೆ. ಟ್ರಬಲ್ ಶೂಟರ್ ಕೆಲಸ ನಡೆಯೋದಿಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ವಿರುದ್ದ ಗುಡುಗಿದರು.

Intro:ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಕೆ.ಎಸ್.ಈಶ್ವರಪ್ಪ‌ ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ. ಲೋಕಸಭ ಚುನಾವಣಾ ಫಲಿತಾಂಶದ ನಂತ್ರ ಬಿಜೆಪಿಯ ಎಲ್ಲಾ ಹಂತದ ಚುನಾವಣೆ ನಡೆಯಲಿವೆ. ಅದರಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ವೇಳೆ ಯಡಿಯೂರಪ್ಪ ಅಧ್ಯಕ್ಷರಾಗಿ ಮುಂದುವರೆಯುತ್ತಾರೂ, ವಿರೋಧ ಪಕ್ಷದ ನಾಯಕರಾಗಿ ಉಳಿಯುತ್ತಾರೂ ನೋಡಬೇಕು ಎಂದರು. ಮೈತ್ರಿ ಸರ್ಕಾರದಲ್ಲಿ ಅರ್ಟಾನೆಟಿವ್ ಸಿಎಂ ಮಾಡಲು ಹೊರಟಿದ್ದಾರೆ. ಸಿಎಂ ಕುಮಾರಸ್ವಾಮಿರವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹಾಗೂ ಮಗನ ಗೆಲುವಿಗಾಗಿ ದೇವಾಲಯಗಳ ಭೇಟಿ ಹಾಗೂ ಹೋಮಹವನ ನಡೆಸುತ್ತಿದ್ದಾರೆ. ಉಳಿದಂತೆ ರೇಸಾರ್ಟ್ ನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಕುಮಾರಸ್ವಾಮಿರವರು ರೇಸಾರ್ಟ್ ನಲ್ಲಿಯೇ ರಾಜ್ಯದ ಬರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿ ಎಂದರು.


Body:ರಾಜ್ಯದಲ್ಲಿ ಕುಡಿಯುವ ನೀರಿಗೂ ಸಹ ಆಹಹಾಕಾರವಿದೆ. ಬರ ಕಾಮಗಾರಿಗೆ ಸಾಕಷ್ಟು‌ ಹಣ ಇದೆ. ಹಣ ಖರ್ಚು ಮಾಡಿ ಜನರಿಗೆ ನೀರು ಕೊಡಿ ಎಂದು ಆಗ್ರಹಿಸಿದರು. ಬಿಜೆಪಿ‌ ಎರಡು‌ ಉಪ ಚುನಾವಣೆಯಲ್ಲಿ ಗೆಲ್ಲಲಿದೆ ಎಂದರು. ಎರಡು ಕಡೆ ಶಿವಮೊಗ್ಗದಂತೆ ಕಾರ್ಯಕರ್ತರು ಇದ್ದಾರೆ ಎಂದರು.


Conclusion:ಶಿವಮೊಗ್ಗದಲ್ಲಿ ಬಿಜೆಪಿ‌ ಗೆಲ್ಲಲಿದೆ.ಟ್ರಬಲ್ ಶೂಟರ್ ಕೆಲ್ಸ ನಡೆಯೂದಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ಗುಡುಗಿದರು.

ಈಶ್ವರಪ್ಪ ಕೈಗೆ ಬ್ಯಾಂಡೇಜ್-
ಶಾಸಕ ಈಶ್ವರಪ್ಪನವರ ಎಡಗೈಗೆ ಬ್ಯಾಂಡೇಜ್ ಹಾಕಿ ಕೊಂಡಿದ್ದಾರೆ. ಕೈಯಲ್ಲಿ ಸ್ವಲ್ಪ ನೋವು ಕಾಣಿಸಿ ಕೊಂಎ ಕಾರಣ ಹಾಕಿ ಕೊಂಡಿದ್ದಾರೆ. ನಾಲ್ಕು ದಿನದ ನಂತ್ರ ಬ್ಯಾಂಡೇಜ್ ಬಿಚ್ಚಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.. ಆದ್ರೆ ನನ್ನ ಕೈಯ ಬಗ್ಗೆ ನಾನು ಏನೂ ಹೇಳಲ್ಲ‌ ನೀವು (ಮಾಧ್ಯಮ) ಏನೇನೂ ಸುದ್ದಿ ಮಾಡ್ತಿರಾ ಅಂತ ಹೆಚ್ಚಿನ‌ ಮಾಹಿತಿ ಏನೂ ಹೇಳಲಿಲ್ಲ.

ಬೈಟ್: ಕೆ.ಎಸ್.ಈಶ್ವರಪ್ಪ. ಶಾಸಕರು.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.