ETV Bharat / state

ಪ್ರಧಾನಿ‌ ಮೋದಿಯವರು ಪುಕ್ಸಟ್ಟೆ ಗ್ಯಾಸ್ ನೀಡಿದ್ರೆ ನಾನು ಬಿಜೆಪಿಯವರಿಗೆ ಹಾರ ಹಾಕ್ತಿನಿ: ಸಚಿವ ಮಧು ಬಂಗಾರಪ್ಪ

author img

By ETV Bharat Karnataka Team

Published : Aug 30, 2023, 4:44 PM IST

ಉಚಿತ ಗ್ಯಾಸ್​ ಕೊಡುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
ಉಚಿತ ಸಿಲಿಂಡರ್​ ಕೊಟ್ಟರೆ ಬಿಜೆಪಿಯವರಿಗೆ ಹಾರ ಹಾಕುತ್ತೇನೆ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾರಿಗೂ ಪುಕ್ಸಟ್ಟೆ ಗ್ಯಾಸ್ ನೀಡಿದ್ರೆ, ನಾನೇ ಬಿಜೆಪಿಯವರಿಗೆ ಹಾರ ಹಾಕುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ಪ್ರಧಾನ ಮೋದಿ ಅವರು ಗ್ಯಾಸ್ ಸಿಲಿಂಡರ್ ಮೇಲೆ 200 ಸಬ್ಸಿಡಿ ನೀಡುವ ಬದಲು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಡುತ್ತೇನೆ ಎಂದಿದ್ದ ಮಾತನ್ನು ಉಳಿಸಿಕೊಳ್ಳಲಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆನೇಕ ಯೋಜನೆಗಳನ್ನು ಕೊಟ್ಟಿದೆ ಎಂದರು.

ಆ ಪಥದಲ್ಲಿ ಇವತ್ತು ಮತ್ತೊಂದು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರ ನೇತೃತ್ವದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಜಾರಿ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಮನೆ ನಿರ್ವಹಣೆ ಮಾಡುವುದಕ್ಕೆ ಉಪಯೋಗವಾಗಲಿ ಎಂದು ಮನೆಯ ಯಜಮಾನಿಯರಿಗೆ 2000 ರೂ. ಗಳನ್ನು ಅವರ ಜೀವನಕ್ಕೆ ಕೊಡುತ್ತಿದ್ದೇವೆ. ವರ್ಷಕ್ಕೆ 24 ಸಾವಿರ ರೂ. ಗಳ ಜೊತೆಗೆ ಸ್ತ್ರೀ ಶಕ್ತಿ, ಅನ್ನಭಾಗ್ಯ, ಗೃಹಜೋತಿ ಯೋಜನೆಗಳನ್ನು ಕೂಡ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುವುದಕ್ಕೆ ಆಗಲಿಲ್ಲವೆಂದರೂ ಮಾತು ಕೊಟ್ಟಂತೆ 174 ರೂ. ನೇರವಾಗಿ ಅವರ ಬ್ಯಾಂಕ್​ ಖಾತೆಗೆ ಬರುವಂತ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ, 36 ಸಾವಿರ ಜನರು ಯೋಜನೆಯ ಪಡೆದಕೊಳ್ಳಬಹುದು. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಎಲ್ಲರೂ ಯೋಜನೆಗಳು ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದ್ರು.

ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಬಗ್ಗೆ ಇಷ್ಟು ದಿನ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು. ಇವತ್ತಿನಿಂದ ನಾವು ಅವರನ್ನು ಒಂದು ಕಡೆ ನಿಲ್ಲಿಸಿಲ್ಲ. ಸ್ವತಃ ಪ್ರಧಾನಿಯವರೇ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಪಕ್ಷದ ನಾಯಕರನ್ನು ಬ್ಯಾರಿಕೇಡ್ ಹಿಂದೆ ನಿಲ್ಲಿಸಿದ್ದಾರೆ. ರಾಜ್ಯದ ಬಿಜೆಪಿಯವರಿಗೆ ಪ್ರಧಾನಿಯವರೇ ಉತ್ತರ ನೀಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರ : ಕಾವೇರಿ ನದಿ ನೀರು ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಮಾಜಿ ಸಿಎಂ ಬಂಗಾರಪ್ಪನವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಕಾನೂನನ್ನು ನಾವು ಗೌರವಿಸಬೇಕಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯದಲ್ಲಿರುವ ರೈತರೆಲ್ಲರೂ ನಮ್ಮ ದೇಶದ ರೈತರೇ, ಇಲ್ಲಿ ಬೆಳೆದ ಬೆಳೆಯನ್ನು ಅಲ್ಲಿ ತಿನ್ನುತ್ತಾರೆ. ಅಲ್ಲಿ ಬೆಳೆದ ಬೆಳೆಯನ್ನು ಇಲ್ಲಿ ತಿನ್ನುತ್ತೇವೆ ಎಂದು ಸಚಿವರು ಹೇಳಿದರು.

ಶಿವಮೊಗ್ಗವನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕಿದೆ : ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಮಳೆ ಕೊರತೆ ಎದುರಾಗಿದೆ. ಇದರಿಂದ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಸಚಿವರು ಹೇಳಿದರು. ಈ ಹಿಂದೆ ಕೂಡ ಎರಡು ಮೂರು ವರ್ಷಗಳ ಕಾಲ ಬರಗಾಲ ಬಂದಿತ್ತು. ರಾಷ್ಟ್ರೀಯ ಕಾನೂನುಗಳನ್ನು ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬರಗಾಲದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ಸೌಲಭ್ಯಗಳನ್ನು ತರಬೇಕಾಗಿದೆ ಎಂದರು.

ವಿಮಾನ ನಿಲ್ದಾಣಕ್ಕೆ ಹೋಗುತ್ತಿಲ್ಲ : ನಾಳೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ವಿಮಾನ ಹಾರಾಟ ಆರಂಭವಾಗಲಿದೆ. ಸಚಿವರಾದ ಎಂ.ಬಿ ಪಾಟೀಲ್ ಅವರು ಆಗಮಿಸಲಿದ್ದಾರೆ. ನಾನು ನಾಳೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿಲ್ಲ. ನಾಳೆ ನಾರಾಯಣ ಗುರು ಜಯಂತಿ ಹಿನ್ನೆಲೆ ಕಾರ್ಯಕ್ರಮಕ್ಕೆ ಗೈರಾಗಲಿದ್ದೇನೆ. ಆದರೆ ಇಂದು ವಿಮಾನ ನಿಲ್ದಾಣದಲ್ಲಿ ಸಿದ್ಧತೆಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿದರು.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಉಚಿತ ಸಿಲಿಂಡರ್​ ಕೊಟ್ಟರೆ ಬಿಜೆಪಿಯವರಿಗೆ ಹಾರ ಹಾಕುತ್ತೇನೆ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾರಿಗೂ ಪುಕ್ಸಟ್ಟೆ ಗ್ಯಾಸ್ ನೀಡಿದ್ರೆ, ನಾನೇ ಬಿಜೆಪಿಯವರಿಗೆ ಹಾರ ಹಾಕುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ಪ್ರಧಾನ ಮೋದಿ ಅವರು ಗ್ಯಾಸ್ ಸಿಲಿಂಡರ್ ಮೇಲೆ 200 ಸಬ್ಸಿಡಿ ನೀಡುವ ಬದಲು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಡುತ್ತೇನೆ ಎಂದಿದ್ದ ಮಾತನ್ನು ಉಳಿಸಿಕೊಳ್ಳಲಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆನೇಕ ಯೋಜನೆಗಳನ್ನು ಕೊಟ್ಟಿದೆ ಎಂದರು.

ಆ ಪಥದಲ್ಲಿ ಇವತ್ತು ಮತ್ತೊಂದು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರ ನೇತೃತ್ವದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಜಾರಿ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಮನೆ ನಿರ್ವಹಣೆ ಮಾಡುವುದಕ್ಕೆ ಉಪಯೋಗವಾಗಲಿ ಎಂದು ಮನೆಯ ಯಜಮಾನಿಯರಿಗೆ 2000 ರೂ. ಗಳನ್ನು ಅವರ ಜೀವನಕ್ಕೆ ಕೊಡುತ್ತಿದ್ದೇವೆ. ವರ್ಷಕ್ಕೆ 24 ಸಾವಿರ ರೂ. ಗಳ ಜೊತೆಗೆ ಸ್ತ್ರೀ ಶಕ್ತಿ, ಅನ್ನಭಾಗ್ಯ, ಗೃಹಜೋತಿ ಯೋಜನೆಗಳನ್ನು ಕೂಡ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುವುದಕ್ಕೆ ಆಗಲಿಲ್ಲವೆಂದರೂ ಮಾತು ಕೊಟ್ಟಂತೆ 174 ರೂ. ನೇರವಾಗಿ ಅವರ ಬ್ಯಾಂಕ್​ ಖಾತೆಗೆ ಬರುವಂತ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ, 36 ಸಾವಿರ ಜನರು ಯೋಜನೆಯ ಪಡೆದಕೊಳ್ಳಬಹುದು. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಎಲ್ಲರೂ ಯೋಜನೆಗಳು ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದ್ರು.

ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಬಗ್ಗೆ ಇಷ್ಟು ದಿನ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು. ಇವತ್ತಿನಿಂದ ನಾವು ಅವರನ್ನು ಒಂದು ಕಡೆ ನಿಲ್ಲಿಸಿಲ್ಲ. ಸ್ವತಃ ಪ್ರಧಾನಿಯವರೇ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಪಕ್ಷದ ನಾಯಕರನ್ನು ಬ್ಯಾರಿಕೇಡ್ ಹಿಂದೆ ನಿಲ್ಲಿಸಿದ್ದಾರೆ. ರಾಜ್ಯದ ಬಿಜೆಪಿಯವರಿಗೆ ಪ್ರಧಾನಿಯವರೇ ಉತ್ತರ ನೀಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರ : ಕಾವೇರಿ ನದಿ ನೀರು ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಮಾಜಿ ಸಿಎಂ ಬಂಗಾರಪ್ಪನವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಕಾನೂನನ್ನು ನಾವು ಗೌರವಿಸಬೇಕಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯದಲ್ಲಿರುವ ರೈತರೆಲ್ಲರೂ ನಮ್ಮ ದೇಶದ ರೈತರೇ, ಇಲ್ಲಿ ಬೆಳೆದ ಬೆಳೆಯನ್ನು ಅಲ್ಲಿ ತಿನ್ನುತ್ತಾರೆ. ಅಲ್ಲಿ ಬೆಳೆದ ಬೆಳೆಯನ್ನು ಇಲ್ಲಿ ತಿನ್ನುತ್ತೇವೆ ಎಂದು ಸಚಿವರು ಹೇಳಿದರು.

ಶಿವಮೊಗ್ಗವನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕಿದೆ : ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಮಳೆ ಕೊರತೆ ಎದುರಾಗಿದೆ. ಇದರಿಂದ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಸಚಿವರು ಹೇಳಿದರು. ಈ ಹಿಂದೆ ಕೂಡ ಎರಡು ಮೂರು ವರ್ಷಗಳ ಕಾಲ ಬರಗಾಲ ಬಂದಿತ್ತು. ರಾಷ್ಟ್ರೀಯ ಕಾನೂನುಗಳನ್ನು ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬರಗಾಲದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ಸೌಲಭ್ಯಗಳನ್ನು ತರಬೇಕಾಗಿದೆ ಎಂದರು.

ವಿಮಾನ ನಿಲ್ದಾಣಕ್ಕೆ ಹೋಗುತ್ತಿಲ್ಲ : ನಾಳೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ವಿಮಾನ ಹಾರಾಟ ಆರಂಭವಾಗಲಿದೆ. ಸಚಿವರಾದ ಎಂ.ಬಿ ಪಾಟೀಲ್ ಅವರು ಆಗಮಿಸಲಿದ್ದಾರೆ. ನಾನು ನಾಳೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿಲ್ಲ. ನಾಳೆ ನಾರಾಯಣ ಗುರು ಜಯಂತಿ ಹಿನ್ನೆಲೆ ಕಾರ್ಯಕ್ರಮಕ್ಕೆ ಗೈರಾಗಲಿದ್ದೇನೆ. ಆದರೆ ಇಂದು ವಿಮಾನ ನಿಲ್ದಾಣದಲ್ಲಿ ಸಿದ್ಧತೆಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿದರು.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ.. ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.