ETV Bharat / state

ಹಾಲು ಹೆಚ್ಚು ಕರೆದವನೇ ಹೀರೊ.. ಶಿವಮೊಗ್ಗ ರೈತ ದಸರಾದಲ್ಲಿ ಮನರಂಜಿಸಿದ ಸ್ಪರ್ಧೆ..

author img

By

Published : Oct 4, 2019, 10:23 AM IST

ಜಿಲ್ಲೆಯಾದ್ಯಂತ ದಸರಾವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ರೈತ ದಸರಾವನ್ನು ನಡೆಸಲಾಯಿತು.

Farmer dasara celebration

ಶಿವಮೊಗ್ಗ: ಜಿಲ್ಲೆಯಾದ್ಯಂತ ದಸರಾವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ರೈತ ದಸರಾವನ್ನು ನಡೆಸಲಾಯಿತು.

ರೈತ ದಸರಾ ಹಿನ್ನಲೆ.. ಹಾಲು ಕರೆಯುವ ಸ್ಪರ್ಧೆ

ರೈತ ದಸರಾದ ಹಿನ್ನೆಲೆಯಲ್ಲಿ ರೈತರಿಗಾಗಿ ಹಾಲು ಕರೆಯುವ ಸ್ಪರ್ಧೆಯನ್ನು ನಗರದ ಎನ್​ಡಿವಿ ಹಾಸ್ಟೆಲ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗೆ ರೈತರು ತಮ್ಮ ಹಸುಗಳ ಸಮೇತ ಆಗಮಿಸಿದ್ದು, ಯಾವ ಹಸುವಿನಿಂದ ನಿಗದಿತ ಅವಧಿಯಲ್ಲಿ ಹೆಚ್ಚು ಹಾಲು ಕರೆಯುತ್ತಾರೆ ಅವರಿಗೆ ಬಹುಮಾನವನ್ನು ನೀಡಲಾಯಿತು. ಪ್ರಥಮ ಬಹುಮಾನ ಐದು‌ ಸಾವಿರ ರೂ., ದ್ವಿತೀಯ ಬಹುಮಾನ ಮೂರು ಸಾವಿರ ಹಾಗೂ ತೃತೀಯ ಬಹುಮಾನ ಎರಡು ಸಾವಿರ ರೂ. ನಿಗದಿ ನೀಡಲಾಯ್ತು.

ಶಿವಮೊಗ್ಗ: ಜಿಲ್ಲೆಯಾದ್ಯಂತ ದಸರಾವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ರೈತ ದಸರಾವನ್ನು ನಡೆಸಲಾಯಿತು.

ರೈತ ದಸರಾ ಹಿನ್ನಲೆ.. ಹಾಲು ಕರೆಯುವ ಸ್ಪರ್ಧೆ

ರೈತ ದಸರಾದ ಹಿನ್ನೆಲೆಯಲ್ಲಿ ರೈತರಿಗಾಗಿ ಹಾಲು ಕರೆಯುವ ಸ್ಪರ್ಧೆಯನ್ನು ನಗರದ ಎನ್​ಡಿವಿ ಹಾಸ್ಟೆಲ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗೆ ರೈತರು ತಮ್ಮ ಹಸುಗಳ ಸಮೇತ ಆಗಮಿಸಿದ್ದು, ಯಾವ ಹಸುವಿನಿಂದ ನಿಗದಿತ ಅವಧಿಯಲ್ಲಿ ಹೆಚ್ಚು ಹಾಲು ಕರೆಯುತ್ತಾರೆ ಅವರಿಗೆ ಬಹುಮಾನವನ್ನು ನೀಡಲಾಯಿತು. ಪ್ರಥಮ ಬಹುಮಾನ ಐದು‌ ಸಾವಿರ ರೂ., ದ್ವಿತೀಯ ಬಹುಮಾನ ಮೂರು ಸಾವಿರ ಹಾಗೂ ತೃತೀಯ ಬಹುಮಾನ ಎರಡು ಸಾವಿರ ರೂ. ನಿಗದಿ ನೀಡಲಾಯ್ತು.

Intro:ಶಿವಮೊಗ್ಗದಲ್ಲಿ ದಸರಾವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ದಸರಾ ಹಿನ್ನಲೆಯಲ್ಲಿ ರೈತ ದಸರಾವನ್ನು ನಡೆಸಲಾಗುತ್ತಿದೆ. ರೈತ ದಸರಾದಲ್ಲಿ ರೈತರಿಗೆ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಯಿತು. ನಗರದ ಎನ್ ಡಿ ವಿ ಹಾಸ್ಟೆಲ್ ಮೈದಾನದಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಯಿತು. ಈ‌ ಸ್ಪರ್ಧೆಯಲ್ಲಿ ಜರ್ಸಿ ಹಾಗೂ ಎಚ್ ಎಫ್ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ನಡೆಸಲಾಯಿತು. ಈ‌ ಸ್ಪರ್ಧೆಗೆ ರೈತರು ತಮ್ಮ ಹಸುಗಳ ಸಮೇತ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಯಾವ ಹಸುವಿನಿಂದ ನಿಗದಿ ಮಾಡಿದ ಅವಧಿಯಲ್ಲಿ ಹೆಚ್ಚು ಹಾಲು ಕರೆಯುತ್ತಾರೆ ಅವರಿಗೆ ಬಹುಮಾನವನ್ನು ನೀಡಲಾಯಿತು.


Body:ಹಾಲು ಕರೆಯುವ ಸ್ಪರ್ಧೆಗೆ ಏಳರಿಂದ ಎಂಟು ಹಸುಗಳು ಬಂದಿದ್ದವು. ಹಾಲು ಕರೆಯುವ ಸ್ಪರ್ಧೆಯಲ್ಲಿ ಮೊದಲು‌ ಎರಡು ಹಸುಗಳ ಹಾಲು ಕರೆಯುವ ಸ್ಪರ್ಧೆ ನಡೆಸಲಾಯಿತು. ಹಾಲು ಕರೆಯಲು ಪ್ರತಿಯೊಬ್ಬ ರೈತರಿಗೆ ಐದು ನಿಮಿಷ ಕಾಲಾವಕಾಶ ನೀಡಲಾಗಿತ್ತು. ಐದು ನಿಮಿಷದಲ್ಲಿ ಹೆಚ್ಚು ಹಾಲು ಕರೆದವರಿಗೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನಿಗದಿ ಮಾಡಲಾಗಿತ್ತು. ಪ್ರಥಮ ಬಹುಮಾನ ಐದು‌ ಸಾವಿರ, ದ್ವಿತೀಯ ಬಹುಮಾನ ಮೂರು ಸಾವಿರ ಹಾಗೂ ತೃತೀಯ ಬಹುಮಾನ ಎರಡು ಸಾವಿರ ನಿಗದಿ ಮಾಡಲಾಗಿತ್ತು.


Conclusion:ಎಚ್ ಎಫ್ ತಳಿ ಹಾಗೂ ಜರ್ಸಿ ತಳಿಗಳ ಹಾಲು ಕರೆಯುವ ಸ್ಪರ್ಧೆಯನ್ನು ಪ್ರತ್ಯೇಕವಾಗಿ ನಡೆಸಲಾಯಿತು. ರೈತರು ಹಾಲು ಕರೆಯುವ ವೇಳೆ ಜಡ್ಜ್ ಗಳು ಹಾಜರಿದ್ದರು. ರೈತರು ಹಾಲು ಕರೆಯಲು ತಯಾರು ನಡೆಸಿದ ನಂತ್ರ ಜಡ್ಜ್ ಗಳು ಹಾಲು ಕರೆಯುಲು ಸ್ಟಾರ್ಟ್ ಅಂತ ಹೇಳುತ್ತಲೆ ರೈತರು ಹಾಲು ಕರೆಯಲು ಪ್ರಾರಂಭಿಸಿದರು. ಕೆಲ ಹಸುಗಳು ಹೊಸ ಜಾಗವಾದ ಕಾರಣ ಹೆಚ್ಚಿಗೆ ಹಾಲು ನೀಡಲಿಲ್ಲ. ಇನ್ನೂ ಕೆಲ ಹಸುಗಳು ಮಾಲೀಕ ಹಾಲು ಕರೆಯುತ್ತಿದ್ದರೆ, ಯಾವುದೇ ತಕರಾರು ಮಾಡದೆ ಹಾಲನ್ನು ಚೆನ್ನಾಗಿಯೇ ನೀಡಿದವು. ಜರ್ಸಿ ಹಾಗೂ ಎಚ್ ಎಫ್ ತಳಿ ಎರಡರಲ್ಲೂ ಗುರುಪುರದ ರೈತ ವೀರಭದ್ರಪ್ಪನರು ಹೆಚ್ಚು ಹಾಲು ಕರೆದು ಪ್ರಥಮ ಸ್ಥಾನಗಳಿಸಿದರು. ವೀರಭದ್ರಪ್ಪ ನವರು ಜರ್ಸಿ ಹಸುವಿನಲ್ಲಿ 6.6 ಲೀ ಹಾಲು ಕರೆದರೆ, ಎಚ್ ಎಫ್ ಹಸುವಿನಿಂದ 7.9 ಲೀ ಹಾಲು ಕರೆದು ಮೊದಲ‌ ಸ್ಥಾನಗಳಿಸಿದರು. ಇವರು ಕಳೆದ ವರ್ಷ ಮೂರನೇ ಸ್ಥಾನ ಪಡೆದು ಕೊಂಡಿದ್ದರಂತೆ, ಈ ವರ್ಷ ಪ್ರಥಮ ಸ್ಥಾನ ಪಡೆದು ಸಂತಸ ಪಟ್ಟಿದ್ದಾರೆ. ಇನ್ನೂ ಈ‌ ಸ್ಪರ್ಧೆಗಳನ್ನು ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಆಯೋಜನೆ ಮಾಡಲಾಗುತ್ತಿದೆ ಎನ್ನುತ್ತಾರೆ ಆಯೋಜಕರಾದ ಪಾಲಿಕೆ ಸದಸ್ಯ ಆರ್. ಸಿ. ನಾಯಕ್ ರವರು.

ಬೈಟ್: ವೀರಭದ್ರಪ್ಪ. ವಿಜೇತರು.

ಬೈಟ್: ಆರ್.ಸಿ ನಾಯಕ್. ಆಯೋಜಕರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.