ETV Bharat / state

ಶುಂಠಿ ಬೆಳೆ ನಷ್ಟ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ - ರೈತ ಆತ್ಮಹತ್ಯೆ

ಶುಂಠಿ ಬೆಳೆ ನಷ್ಟದಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಶೋಕಪ್ಪ (41) ಆತ್ಮಹತ್ಯೆ ಮಾಡಿಕೊಂಡ ರೈತ.

Farmer commits suicide
ರೈತ ಅಶೋಕಪ್ಪ
author img

By

Published : Jan 13, 2021, 10:08 AM IST

ಶಿವಮೊಗ್ಗ: ಶುಂಠಿ ಬೆಳೆ ನಷ್ಟದಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶುಂಠಿ ಬೆಳೆ ನಷ್ಟ: ನೇಣಿ ಬಿಗಿದುಕೊಂಡು ರೈತ ಆತ್ಮಹತ್ಯೆ

ಅಶೋಕಪ್ಪ (41) ಆತ್ಮಹತ್ಯೆ ಮಾಡಿಕೊಂಡ ರೈತ. ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ರೈತ ಅಶೋಕಪ್ಪ ತನ್ನ ಒಂದೂವರೆ ಎಕರೆ ಜಮೀನು ಹಾಗೂ ಗುತ್ತಿಗೆ ಪಡೆದ ಒಂದೂವರೆ ಎಕರೆ ಜಮೀನಲ್ಲಿ ಶುಂಠಿ ಬೆಳೆದಿದ್ದ. ಬೆಳೆಗೆ ರೋಗ ಹಾಗೂ ದರ ಕುಸಿತದಿಂದ ಕಂಗೆಟ್ಟಿದ್ದ ರೈತ ಅಶೋಕಪ್ಪ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣಿಗೆ‌ ಶರಣಾಗಿದ್ದಾನೆ. ಮೃತ ರೈತ ಶಿವ ಬ್ಯಾಂಕ್ ಹಾಗೂ ಅರ್ಬನ್ ಬ್ಯಾಂಕ್​​ನಲ್ಲಿ 12 ಲಕ್ಷ ರೂ. ಸಾಲ‌ ಮಾಡಿದ್ದ. ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಶುಂಠಿ ಬೆಳೆ ನಷ್ಟದಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶುಂಠಿ ಬೆಳೆ ನಷ್ಟ: ನೇಣಿ ಬಿಗಿದುಕೊಂಡು ರೈತ ಆತ್ಮಹತ್ಯೆ

ಅಶೋಕಪ್ಪ (41) ಆತ್ಮಹತ್ಯೆ ಮಾಡಿಕೊಂಡ ರೈತ. ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ರೈತ ಅಶೋಕಪ್ಪ ತನ್ನ ಒಂದೂವರೆ ಎಕರೆ ಜಮೀನು ಹಾಗೂ ಗುತ್ತಿಗೆ ಪಡೆದ ಒಂದೂವರೆ ಎಕರೆ ಜಮೀನಲ್ಲಿ ಶುಂಠಿ ಬೆಳೆದಿದ್ದ. ಬೆಳೆಗೆ ರೋಗ ಹಾಗೂ ದರ ಕುಸಿತದಿಂದ ಕಂಗೆಟ್ಟಿದ್ದ ರೈತ ಅಶೋಕಪ್ಪ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣಿಗೆ‌ ಶರಣಾಗಿದ್ದಾನೆ. ಮೃತ ರೈತ ಶಿವ ಬ್ಯಾಂಕ್ ಹಾಗೂ ಅರ್ಬನ್ ಬ್ಯಾಂಕ್​​ನಲ್ಲಿ 12 ಲಕ್ಷ ರೂ. ಸಾಲ‌ ಮಾಡಿದ್ದ. ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.