ETV Bharat / state

ಇದು ರಾಜಕಾರಣ ಮಾಡೋ ಟೈಮ್ ಅಲ್ಲ.. ಮಾಜಿ ಸಿಎಂಗಳಾದ ಸಿದ್ದು, ಹೆಚ್‌ಡಿಕೆ ವಿರುದ್ಧ ಈಶ್ವರಪ್ಪ ಕಿಡಿ..

author img

By

Published : Aug 12, 2019, 12:19 PM IST

ಸಿದ್ದರಾಮಯ್ಯ ಮೊದ್ಲು ವಿಪಕ್ಷ ನಾಯಕರಾಗಲಿ. ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿದ್ರಾ? ಬಾದಾಮಿ ಕ್ಷೇತ್ರದ ಶಾಸಕರಾಗಿರೋ ಅವ್ರು ತಮ್ಮ ಕ್ಷೇತ್ರಕ್ಕೆ ಹೋಗಿದ್ರಾ? ಎಂದು ಈಶ್ವರಪ್ಪ ಸಿದ್ದು ವಿರುದ್ದ ಮಾತಿನ ಚಾಟಿ ಬೀಸಿದ್ದಾರೆ.

ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಕೆ ಎಸ್​ ಈಶ್ವರಪ್ಪ..

ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ಸಿದ್ದರಾಮಯ್ಯ ಮೊದ್ಲು ವಿರೋಧ ಪಕ್ಷದ ನಾಯಕರಾಗಲಿ. ಸಿಎಂ ಆಗಿದ್ದ ಸಂದರ್ಭದಲ್ಲಿ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿದ್ರಾ? ಬಾದಾಮಿ ಕ್ಷೇತ್ರದ ಶಾಸಕರಾಗಿರೋ ಅವ್ರು ತಮ್ಮ ಕ್ಷೇತ್ರಕ್ಕೆ ಹೋಗಿದ್ರಾ? ಅನಾರೋಗ್ಯ ಕಾರಣ ಹೇಳಿಕೊಂಡು ಎಐಸಿಸಿ ಮೀಟಿಂಗ್​ ಹೋಗೋಕಾಗುತ್ತೆ ಪ್ರವಾಹ ಪ್ರದೇಶಕ್ಕೆ ಹೋಗೋಕಾಗೋಲ್ವಾ? ಎಂದು ಸಿದ್ದು ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.

ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಅವ್ರು ಯಡಿಯೂಪ್ಪ ಅವ್ರಿಗೆ ವಯಸ್ಸಾಗಿದೆ ಅಂತಾರೆ, ಹಾಗಿದ್ರೆ ಇವ್ರಿಗೆ ವಯಸ್ಸು ಆಗಿಲ್ವಾ? ಅವರ ಅಪ್ಪನಿಗೆ ವಯಸ್ಸು ಆಗಿಲ್ವಾ? ಕುಮಾರಸ್ವಾಮಿ ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ, ಅದನ್ನ ಸ್ವಾಗತಿಸುತ್ತೇನೆ. ಜೊತೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೇ ಅದನ್ನು ಕೂಡ ಸ್ವೀಕಾರ ಮಾಡ್ತೇವೆ ಎಂದಿದ್ದಾರೆ.

ಹಾಗೆ ಸಿದ್ದರಾಮಯ್ಯ ಮೊದ್ಲು ಬಾದಾಮಿಗೆ ಹೋಗಲಿ, ಹಾಗೇ ರಾಜ್ಯ ಪ್ರವಾಸ ಮಾಡ್ಲಿ. ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದಾರೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಕಾಂಗ್ರೆಸ್​ ಪಕ್ಷದ ಹೆಚ್‌ ಕೆ ಪಾಟೀಲ್‌ರೂ ಸ್ವಲ್ಪ ಓಡಾಡ್ತಿದ್ದಾರೆ ಅಷ್ಟೇ.. ಇನ್ನುಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ. ರಾಜ್ಯದ ಜನ ಪ್ರವಾಹದಿಂದ ಒದ್ದಾಡ್ತಾ ಇದ್ದಾರೆ. ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡೋದಲ್ಲಾ.. ನಮಗೂ ರಾಜಕಾರಣ ಮಾಡೋಕೆ ಬರುತ್ತೆ. ಯಾವಾಗ ಮಾಡಬೇಕೋ ಆಗ ಮಾಡ್ತೇವೆ. ಆದರೆ, ಈಗ ಎಲ್ಲಾ ಪಕ್ಷದವರು ಒಟ್ಟಿಗೆ ಸೇರಿ ಪರಿಹಾರ ಹುಡುಕೋಣ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಕೆ ಎಸ್​ ಈಶ್ವರಪ್ಪ..

ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ಸಿದ್ದರಾಮಯ್ಯ ಮೊದ್ಲು ವಿರೋಧ ಪಕ್ಷದ ನಾಯಕರಾಗಲಿ. ಸಿಎಂ ಆಗಿದ್ದ ಸಂದರ್ಭದಲ್ಲಿ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿದ್ರಾ? ಬಾದಾಮಿ ಕ್ಷೇತ್ರದ ಶಾಸಕರಾಗಿರೋ ಅವ್ರು ತಮ್ಮ ಕ್ಷೇತ್ರಕ್ಕೆ ಹೋಗಿದ್ರಾ? ಅನಾರೋಗ್ಯ ಕಾರಣ ಹೇಳಿಕೊಂಡು ಎಐಸಿಸಿ ಮೀಟಿಂಗ್​ ಹೋಗೋಕಾಗುತ್ತೆ ಪ್ರವಾಹ ಪ್ರದೇಶಕ್ಕೆ ಹೋಗೋಕಾಗೋಲ್ವಾ? ಎಂದು ಸಿದ್ದು ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.

ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಅವ್ರು ಯಡಿಯೂಪ್ಪ ಅವ್ರಿಗೆ ವಯಸ್ಸಾಗಿದೆ ಅಂತಾರೆ, ಹಾಗಿದ್ರೆ ಇವ್ರಿಗೆ ವಯಸ್ಸು ಆಗಿಲ್ವಾ? ಅವರ ಅಪ್ಪನಿಗೆ ವಯಸ್ಸು ಆಗಿಲ್ವಾ? ಕುಮಾರಸ್ವಾಮಿ ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ, ಅದನ್ನ ಸ್ವಾಗತಿಸುತ್ತೇನೆ. ಜೊತೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೇ ಅದನ್ನು ಕೂಡ ಸ್ವೀಕಾರ ಮಾಡ್ತೇವೆ ಎಂದಿದ್ದಾರೆ.

ಹಾಗೆ ಸಿದ್ದರಾಮಯ್ಯ ಮೊದ್ಲು ಬಾದಾಮಿಗೆ ಹೋಗಲಿ, ಹಾಗೇ ರಾಜ್ಯ ಪ್ರವಾಸ ಮಾಡ್ಲಿ. ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದಾರೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಕಾಂಗ್ರೆಸ್​ ಪಕ್ಷದ ಹೆಚ್‌ ಕೆ ಪಾಟೀಲ್‌ರೂ ಸ್ವಲ್ಪ ಓಡಾಡ್ತಿದ್ದಾರೆ ಅಷ್ಟೇ.. ಇನ್ನುಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ. ರಾಜ್ಯದ ಜನ ಪ್ರವಾಹದಿಂದ ಒದ್ದಾಡ್ತಾ ಇದ್ದಾರೆ. ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡೋದಲ್ಲಾ.. ನಮಗೂ ರಾಜಕಾರಣ ಮಾಡೋಕೆ ಬರುತ್ತೆ. ಯಾವಾಗ ಮಾಡಬೇಕೋ ಆಗ ಮಾಡ್ತೇವೆ. ಆದರೆ, ಈಗ ಎಲ್ಲಾ ಪಕ್ಷದವರು ಒಟ್ಟಿಗೆ ಸೇರಿ ಪರಿಹಾರ ಹುಡುಕೋಣ ಎಂದು ಈಶ್ವರಪ್ಪ ಹೇಳಿದ್ದಾರೆ.

Intro:*ಶಿವಮೊಗ್ಗ ಬ್ರೇಕಿಂಗ್:*
ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂಗಳ ವಿರುದ್ಧ ವಾಗ್ದಾಳಿ.

ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಸಿದ್ಧರಾಮಯ್ಯ ಹೇಳಿಕೆ ಈಶ್ವರಪ್ಪ ತಿರುಗೇಟು.

ಸಿದ್ದರಾಮಯ್ಯ ಮೊದಲು ವಿರೋಧ ಪಕ್ಷದ ನಾಯಕರಾಗಲಿ. ಬಾದಾಮಿ ಕ್ಷೇತ್ರದ ಶಾಸಕರು ಮೊದಲು ಅವರ ಕ್ಷೇತ್ರಕ್ಕೆ ಹೋಗಲಿ.

ಅವರು ಮುಖ್ಯಮಂತ್ರಿ ಅಗಿದ್ದಾಗ ಬರಗಾಲ ಪೀಡಿತಕ್ಕೆ ಪ್ರದೇಶಕ್ಕೆ ಹೋಗಿದ್ರಾ...??

ಎಐಸಿಸಿ ಸಭೆಗೆ ಹೋಗ್ತಾರೆ ಅದ್ರೇ ಅವರ ಕ್ಷೇತ್ರಕ್ಕೆ ಅವರು ಹೋಗಲ್ಲ.

ಇದು ರಾಜಕಾರಣ ಮಾಡುವ ಸಂದರ್ಭವಲ್ಲ ಎಂದ ಕೆಎಸ್ಈ.

ಸಿದ್ದರಾಮಯ್ಯ ಮೊದ್ಲು ಬಾದಾಮಿಗೆ ಹೋಗಲಿ, ಹಾಗೇ ರಾಜ್ಯ ಪ್ರವಾಸವನ್ನು ಮಾಡಲಿ.

ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದೀರಿ, ನಮ್ಮದ್ದೇನು ಅಭ್ಯಂತರವಿಲ್ಲ..

ನಿಮ್ಮ ಪಕ್ಷದ ಹೆಚ್ಕೆ ಪಾಟೀಲರು ಸ್ವಲ್ಪ ಓಡಾಡಿದ್ದಾರೆ.. ಇನ್ನೂಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ.

ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ನವರಿಗೆ ವಯಸ್ಸಾಗಿದೆ ಎಂದಿದ್ದಾರೆ.

ಹಾಗಾದ್ರೇ ಅವರ ಅಪ್ಪನಿಗೆ, ಕುಮಾರಸ್ವಾಮಿ ಅವರಿಗೆ ವಯಸ್ಸು ಅಗಿಲ್ವಾ...??

ಕುಮಾರಸ್ವಾಮಿ ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ, ಅದನ್ನ ಸ್ವಾಗತಿಸುತ್ತೇನೆ..

ಜೊತೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೇ ಅದನ್ನು ಸ್ವೀಕಾರ ಮಾಡ್ತೇವೆ.

ಅದನ್ನ ಬಿಟ್ಟು ವಯಸ್ಸಾಗಿದೆ ಎಂಬ ಚೀಪ್ ಮಾತನಾಡುವುದು ಮಾಜಿ ಸಿಎಂ ಗೆ ಶೋಭೆ ತರಲ್ಲ....

ರಾಜಕಾರಣ ಅವರು ಮಾಡಿದ್ರೇ ನಮಗೂ ರಾಜಕಾರಣ ಮಾಡೋಕೆ ಬರುತ್ತೇ...

ರಾಜಕಾರಣ ಮಾಡೋ ಸಮಯವಲ್ಲ. ರಾಜ್ಯದ ಜನ ಒದ್ದಾಡ್ತಾ ಇದ್ದಾರೆ.

ಎಲ್ಲಾ ಪಕ್ಷದವರು ಒಟ್ಟಿಗೆ ಇದಕ್ಕೆಲ್ಲಾ ಪರಿಹಾರ ಹುಡುಕೋಣ ಎಂದ ಈಶ್ವರಪ್ಪ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.