ETV Bharat / state

ನನ್ನ ಯಡಿಯೂರಪ್ಪ ಅವರನ್ನ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

author img

By

Published : Oct 1, 2019, 10:24 AM IST

ಯಾವುದೇ ರೀತಿ ನೋವನ್ನು ಮಾಡಿಕೊಂಡು ತಂತಿ ಮೇಲೆ ನಡೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿಯಬೇಡಿ. ನಿಮ್ಮ ಜೊತೆ ಭಾರತೀಯ ಜನತಾ ಪಕ್ಷ ಇದೆ. ನನ್ನ ನಿಮ್ಮ ನಡುವೆ ಜಗಳ ತಂದಿಡುವ ಪ್ರಯತ್ನ ನಡೀತಿದೆ. ಆದ್ರೆ ನಮ್ಮಿಬ್ಬರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಸಚಿವ ಈಶ್ವರಪ್ಪ

ಶಿವಮೊಗ್ಗ: ಅದೆಷ್ಟೇ ಗೊಂದಲವನ್ನು ನೀವು ಹುಟ್ಟಿಸಿದರು ನನ್ನ ಹಾಗೂ ಯಡಿಯೂರಪ್ಪರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಗುಡುಗಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೆ ಈ ರೀತಿಯ ಗೊಂದಲ ಸೃಷ್ಟಿಸುವ ಜನರ ಮಾತನ್ನ ನಂಬಬೇಡಿ, ಯಾವುದೇ ರೀತಿ ನೋವನ್ನು ಮಾಡಿಕೊಂಡು ತಂತಿ ಮೇಲೆ ನಡೆಯುವ ಪರಿಸ್ಥಿತಿ ಇದೆ ಎಂದು ತಿಳಿಯಬೇಡಿ. ನಿಮ್ಮ ಜೊತೆ ಭಾರತೀಯ ಜನತಾ ಪಾರ್ಟಿ ಇದೆ. ನನ್ನ-ನಿಮ್ಮ ನಡುವೆ ಜಗಳ ತಂದಿಡುವ ಪ್ರಯತ್ನ ನಡೀತಿದೆ. ಆದ್ರೆ ನಮ್ಮಿಬ್ಬರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನನ್ನ- ಯಡಿಯೂರಪ್ಪನವರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

ಚುನಾವಣೆ ನಡೆದರೇ 150 ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಬಿಎಸ್​​ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈಗಿರುವ ಖಾತೆ ಹೆಚ್ಚು ಜವಾಬ್ದಾರಿ ಇರುವಾಗ ಮತ್ತೊಂದು ಖಾತೆ ನಿರ್ವಹಣೆ ಕಷ್ಟಸಾಧ್ಯ. ಹಾಗಿರುವಾಗ ಸಿಎಂ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಇದನ್ನೂ ಸಹ ಮಾಧ್ಯಮಗಳು ತಿರುಚಿವೆ. ಸಿಎಂ ಬಯಸಿದರೆ ಕ್ರೀಡಾ ಖಾತೆಯಲ್ಲಿ ಮುಂದುವರೆಯುತ್ತೇನೆ ಎಂದು ಇದೇ ವೇಳೆ ಈಶ್ವರಪ್ಪ ತಮ್ಮ ಮನದಾಳ ಬಿಚ್ಚಿಟ್ಟರು.

ಶಿವಮೊಗ್ಗ: ಅದೆಷ್ಟೇ ಗೊಂದಲವನ್ನು ನೀವು ಹುಟ್ಟಿಸಿದರು ನನ್ನ ಹಾಗೂ ಯಡಿಯೂರಪ್ಪರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಗುಡುಗಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೆ ಈ ರೀತಿಯ ಗೊಂದಲ ಸೃಷ್ಟಿಸುವ ಜನರ ಮಾತನ್ನ ನಂಬಬೇಡಿ, ಯಾವುದೇ ರೀತಿ ನೋವನ್ನು ಮಾಡಿಕೊಂಡು ತಂತಿ ಮೇಲೆ ನಡೆಯುವ ಪರಿಸ್ಥಿತಿ ಇದೆ ಎಂದು ತಿಳಿಯಬೇಡಿ. ನಿಮ್ಮ ಜೊತೆ ಭಾರತೀಯ ಜನತಾ ಪಾರ್ಟಿ ಇದೆ. ನನ್ನ-ನಿಮ್ಮ ನಡುವೆ ಜಗಳ ತಂದಿಡುವ ಪ್ರಯತ್ನ ನಡೀತಿದೆ. ಆದ್ರೆ ನಮ್ಮಿಬ್ಬರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನನ್ನ- ಯಡಿಯೂರಪ್ಪನವರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

ಚುನಾವಣೆ ನಡೆದರೇ 150 ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಬಿಎಸ್​​ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈಗಿರುವ ಖಾತೆ ಹೆಚ್ಚು ಜವಾಬ್ದಾರಿ ಇರುವಾಗ ಮತ್ತೊಂದು ಖಾತೆ ನಿರ್ವಹಣೆ ಕಷ್ಟಸಾಧ್ಯ. ಹಾಗಿರುವಾಗ ಸಿಎಂ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಇದನ್ನೂ ಸಹ ಮಾಧ್ಯಮಗಳು ತಿರುಚಿವೆ. ಸಿಎಂ ಬಯಸಿದರೆ ಕ್ರೀಡಾ ಖಾತೆಯಲ್ಲಿ ಮುಂದುವರೆಯುತ್ತೇನೆ ಎಂದು ಇದೇ ವೇಳೆ ಈಶ್ವರಪ್ಪ ತಮ್ಮ ಮನದಾಳ ಬಿಚ್ಚಿಟ್ಟರು.

Intro:ಶಿವಮೊಗ್ಗ

ಫಾರ್ಮೆಟ್: ಎವಿಬಿ

ಸ್ಲಗ್: ಮಾಧ್ಯಮಗಳ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಗರಂ

ಆ್ಯಂಕರ್.........
ಶಿವಮೊಗ್ಗದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮಾದ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿ ಸುದ್ದಿ ಮಾಡಿವೆ. ಯುಟಿ ಖಾದರ್ ವಿಚಾರದಲ್ಲಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೇ. ಸಂಘಟನೆಗಿಂತ ದೊಡ್ಡದು ಯಾವುದು ಇಲ್ಲ ಎಂದು ಹೇಳುವಾಗ..ಯಡಿಯೂರಪ್ಪ ರ ಹೆಸರನ್ನು ಹೇಳಿದ್ದು ನಿಜ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಹೆಸರು ಬಿಟ್ಟು..ಯಡಿಯೂರಪ್ಪ ರನ್ನು ಮಾತ್ರ ಮಾದ್ಯಮಗಳು ಸುದ್ದಿ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಯಡಿಯೂರಪ್ಪ ರನ್ನು ಬೇರೆ ಮಾಡಲು ಯಾರಿಂದಲೂ ಸಾದ್ಯವಿಲ್ಲ. ಚುನಾವಣೆ ನಡೆದರೇ 150 ಕ್ಕೂ ಅಧಿಕ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಬಿಎಸ್ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ. ಈಗಿರುವ ಖಾತೆ ಹೆಚ್ಚು ಜವಾಬ್ದಾರಿ ಇರುವಾಗ ಮತ್ತೊಂದು ಖಾತೆ ನಿರ್ವಹಣೆ ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಇದನ್ನೂ ಸಹ ಮಾಧ್ಯಮಗಳು ತಿರುಚಿವೆ. ಸಿಎಂ ಬಯಸಿದರೆ ಕ್ರೀಡಾ ಖಾತೆಯಲ್ಲಿ ಮುಂದುವರೆಯುತ್ತೇನೆ ಎಂದು ಈಶ್ವರಪ್ಪ ಸ್ಪಷ್ಟನೆ ನೀಡಿದರು.

ಬೈಟ್: ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.