ETV Bharat / state

ಕೊರೊನಾ ತಡೆಯಲು ಪೊಲೀಸ್ ಇಲಾಖೆಗೆ ಸಂಪೂರ್ಣ ಬೆಂಬಲ: ಸಚಿವ ಕೆ.ಎಸ್.ಈಶ್ವರಪ್ಪ

author img

By

Published : Jul 16, 2020, 3:32 PM IST

ನಗರದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಚಿವ ಈಶ್ವರಪ್ಪ‌ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ ಎಂದರು.

meeting
meeting

ಶಿವಮೊಗ್ಗ: ಕೋವಿಡ್ ತಡೆಯಲು ಪೊಲೀಸ್ ಇಲಾಖೆಯವರು ಹಗಲು ರಾತ್ರಿ ಶ್ರಮ ಹಾಕುತ್ತಿದ್ದಾರೆ. ಅವರಿಗೆ ಇರುವ ಸಮಸ್ಯೆಗಳೇನು? ಸಮಸ್ಯೆಗೆ ಏನು ಪರಿಹಾರ‌‌‌ ನೀಡಬೇಕು ಹಾಗೂ ಭದ್ರತೆ ನೀಡುವ ಕುರಿತಂತೆ ಸಚಿವ ಈಶ್ವರಪ್ಪ‌ ಪೊಲೀಸರ ಜೊತೆ ಸಭೆ ನಡೆಸಿದರು.

ನಗರದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು, ಡಿಸಿ, ಎಸ್​ಪಿ ,‌ ಎಎಸ್​ಪಿ ನೇತೃತ್ವದಲ್ಲಿ ಒಂದು ವಿಶೇಷ ಸಭೆ ನಡೆಸಲಾಗಿದೆ ಎಂದರು. ಈ ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ ಎಂದರು.

ಪೊಲೀಸ್ ಇಲಾಖೆಗೆ ಹೋಂಗಾರ್ಡ್ ಸಹಕಾರ, ಅಧಿಕ ವಾಹನ ವ್ಯವಸ್ಥೆ, ಪೊಲೀಸರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಸಭೆಯ ವಿವರ ನೀಡಿದರು.

ಈ ವೇಳೆ, ಜಿಲ್ಲಾಧಿಕಾರಿ‌ ಕೆ.ಬಿ.ಶಿವಕುಮಾರ್,‌ ಎಸ್​ಪಿ‌‌ ಶಾಂತರಾಜು, ಎಎಸ್​ಪಿ‌ ಡಾ.ಶೇಖರ್, ‌ಡಿವೈಎಸ್​ಪಿ, ಜಿಲ್ಲೆಯ ಸಿಪಿಐಗಳು ಸೇರಿದಂತೆ ಒಟ್ಟು‌ 30 ಜನ ಭಾಗಿಯಾಗಿದ್ದರು.

ಶಿವಮೊಗ್ಗ: ಕೋವಿಡ್ ತಡೆಯಲು ಪೊಲೀಸ್ ಇಲಾಖೆಯವರು ಹಗಲು ರಾತ್ರಿ ಶ್ರಮ ಹಾಕುತ್ತಿದ್ದಾರೆ. ಅವರಿಗೆ ಇರುವ ಸಮಸ್ಯೆಗಳೇನು? ಸಮಸ್ಯೆಗೆ ಏನು ಪರಿಹಾರ‌‌‌ ನೀಡಬೇಕು ಹಾಗೂ ಭದ್ರತೆ ನೀಡುವ ಕುರಿತಂತೆ ಸಚಿವ ಈಶ್ವರಪ್ಪ‌ ಪೊಲೀಸರ ಜೊತೆ ಸಭೆ ನಡೆಸಿದರು.

ನಗರದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು, ಡಿಸಿ, ಎಸ್​ಪಿ ,‌ ಎಎಸ್​ಪಿ ನೇತೃತ್ವದಲ್ಲಿ ಒಂದು ವಿಶೇಷ ಸಭೆ ನಡೆಸಲಾಗಿದೆ ಎಂದರು. ಈ ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ ಎಂದರು.

ಪೊಲೀಸ್ ಇಲಾಖೆಗೆ ಹೋಂಗಾರ್ಡ್ ಸಹಕಾರ, ಅಧಿಕ ವಾಹನ ವ್ಯವಸ್ಥೆ, ಪೊಲೀಸರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಸಭೆಯ ವಿವರ ನೀಡಿದರು.

ಈ ವೇಳೆ, ಜಿಲ್ಲಾಧಿಕಾರಿ‌ ಕೆ.ಬಿ.ಶಿವಕುಮಾರ್,‌ ಎಸ್​ಪಿ‌‌ ಶಾಂತರಾಜು, ಎಎಸ್​ಪಿ‌ ಡಾ.ಶೇಖರ್, ‌ಡಿವೈಎಸ್​ಪಿ, ಜಿಲ್ಲೆಯ ಸಿಪಿಐಗಳು ಸೇರಿದಂತೆ ಒಟ್ಟು‌ 30 ಜನ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.