ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಪೂರ್ವ ಮಾಹಿತಿ ನೀಡದೇ ಕಟ್ಟಡವನ್ನು ಏಕಾಏಕಿ ಕೆಡವಿರುವುದರಿಂದ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾಗೆ 15 ಲಕ್ಷ ರೂ. ನಷ್ಟ ಉಂಟಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿ, ಪೂರ್ವ ಮಾಹಿತಿ ನೀಡದೇ ಆಸ್ಪತ್ರೆಯ ಬಾತ್ ರೂಂ, ಟಾಯ್ಲೆಟ್, ಕಾರ್ ಶೆಡ್ಗಳನ್ನು ಏಕಾಏಕಿ ಕೆಡವಲಾಗಿದೆ. ಕೂಡಲೇ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಅಸೋಸಿಯೇಷನ್ನವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಬಿ.ಆಶೋಕ್ ಕುಮಾರ್, ಪುಷ್ಪ ಎಸ್.ಶೆಟ್ಟಿ, ರಮೇಶ್ ಬಾಬು ಮತ್ತಿತರರು ಇದ್ದರು.