ಶಿವಮೊಗ್ಗ: ಕೊರೊನಾದಿಂದ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದೆ. ರಕ್ತದಾನ ಮಾಡುವ ಮನಸ್ಸಿದ್ದರೂ ಸಹ ರಕ್ತದಾನಿಗಳು ರಕ್ತನಿಧಿಗಳತ್ತ ಬರದ ಕಾರಣ ರಕ್ತದ ಕೊರತೆ ಜಿಲ್ಲೆಯಲ್ಲಿ ಉಂಟಾಗಿತ್ತು.
ಈ ಕುರಿತು ಈಟಿವಿ ಭಾರತ ವರದಿಯನ್ನು ಪ್ರಸಾರ ಮಾಡಿತ್ತು. ರಾಜ್ಯ ಎನ್ಎಸ್ಯುಐ ಸಂಘಟನೆಯು 20 ಕ್ಕೂ ಹೆಚ್ಚು ಕಾರ್ಯಕರ್ತರು ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು. ಈ ವೇಳೆ, ಇನ್ನಷ್ಟು ರಕ್ತವನ್ನು ನೀಡುವ ಭರವಸೆ ನೀಡಿದ್ದಾರೆ.