ETV Bharat / state

ಜಾಗೃತಿ ಧ್ವನಿ ಸುರುಳಿ ವಿಶೇಷ ವಾಹನಕ್ಕೆ ಚಾಲನೆ ನೀಡಿದ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ

author img

By

Published : May 26, 2020, 3:09 PM IST

ಕೊರೊನಾ ತಡೆಗಟ್ಟಲು ಸಹಾಯ ಆಗುವಂತಹ ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಚಾಲನೆ ನೀಡಿದರು.

shimogga
ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನ

ಶಿವಮೊಗ್ಗ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಕೊರೊನಾ ತಡೆಗಟ್ಟಲು ಸಹಾಯ ಆಗುವಂತಹ ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಚಾಲನೆ ನೀಡಿದರು.

ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನಕ್ಕೆ ಚಾಲನೆ

ಅರಿವು ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಈ ವಿಶೇಷ ವಾಹನ ಜಿಲ್ಲೆಯ ಎಲ್ಲಾ ಕಡೆ ಹೋಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ‌ ಹಾಗೂ ಕೊರೊನಾ ವಾರಿಯರ್ಸ್​ಗೆ ಸಹಕರಿಸಿ ಎಂಬ ಸಂದೇಶವನ್ನು ಈ ವಾಹನದ ಮೂಲಕ ಪ್ರತಿ ಹಳ್ಳಿಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.

ಇದರಿಂದಲಾದರೂ ಸ್ವಲ್ಪಮಟ್ಟಿಗೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಶಿವಮೊಗ್ಗ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಕೊರೊನಾ ತಡೆಗಟ್ಟಲು ಸಹಾಯ ಆಗುವಂತಹ ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಚಾಲನೆ ನೀಡಿದರು.

ಜಾಗೃತಿ ಧ್ವನಿ ಸುರುಳಿಯ ವಿಶೇಷ ವಾಹನಕ್ಕೆ ಚಾಲನೆ

ಅರಿವು ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಈ ವಿಶೇಷ ವಾಹನ ಜಿಲ್ಲೆಯ ಎಲ್ಲಾ ಕಡೆ ಹೋಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ‌ ಹಾಗೂ ಕೊರೊನಾ ವಾರಿಯರ್ಸ್​ಗೆ ಸಹಕರಿಸಿ ಎಂಬ ಸಂದೇಶವನ್ನು ಈ ವಾಹನದ ಮೂಲಕ ಪ್ರತಿ ಹಳ್ಳಿಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.

ಇದರಿಂದಲಾದರೂ ಸ್ವಲ್ಪಮಟ್ಟಿಗೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.