ಶಿವಮೊಗ್ಗ: ಉತ್ಪಾದಕನ ಯಾವುದೇ ವಸ್ತು ಗ್ರಾಹಕನಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಜಾಹೀರಾತು ಉದ್ಯಮ, ಲಾಕ್ಡೌನ್ನಿಂದ ಸಾಕಷ್ಟು ತೊಂದರೆಗೆ ಒಳಗಾಗಿತ್ತು. ಅನ್ಲಾಕ್ ನಂತರ ಉದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ.
ಕೋವಿಡ್ ನೀಡಿದ ದೊಡ್ಡ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದ ಉದ್ಯಮಕ್ಕೆ ದಸರಾ, ದೀಪಾವಳಿ ಹಬ್ಬಗಳು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದವು. ಆದರೆ, ಪೂರ್ಣ ಪ್ರಮಾಣಕ್ಕೆ ಮರಳಲು ತುಂಬಾ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಜಾಹೀರಾತು ಉದ್ಯಮಿಗಳು.
ಹಬ್ಬಗಳಿಂದ ಜಾಹೀರಾತು ಪ್ರದರ್ಶಿಸಲು ಕಂಪನಿಗಳು ಮುಂದೆ ಬರುತ್ತಿದ್ದು, ನೆಲಕಚ್ಚಿದ್ದ ಉದ್ಯಮ ಈಗ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ ಎನ್ನುತ್ತಾರೆ ಯುಕೆ ಅಡ್ವಟೈಸ್ ಮತ್ತು ಹೋಲ್ಡರ್ಸ್ ಮಾಲೀಕ ಉದಯ್.