ETV Bharat / state

ಅನ್ನ ಹಾಕಿದ ಮಾಲೀಕನ ಪ್ರಾಣ ಉಳಿಸಿದ ಶ್ವಾನ... ಆದ್ರೆ ವಿಧಿ ಹೇಗಿದೆ ನೋಡಿ! - undefined

ಅನ್ನ ಹಾಕಿದ ಮಾಲೀಕನನ್ನು ಸಾವಿನ ದವಡೆಯಿಂದ ಕಾಪಾಡಿದ ಸಾಕು ನಾಯಿಯೊಂದು ತನ್ನ ಪ್ರಾಣ ಬಿಟ್ಟಿದೆ.

ಉಪ್ಪಿಟ್ಟ ಧಣಿಯ ಜೀವ ಉಳಿಸಿ ಪ್ರಾಣಬಿಟ್ಟ ನಾಯಿ
author img

By

Published : Jun 10, 2019, 5:23 PM IST

ಶಿವಮೊಗ್ಗ: ಇನ್ನೇನು ಹಾವೊಂದು ಮಾಲೀಕನಿಗೆ ಕಚ್ಚಿಬಿಡುತ್ತದೆ ಎನ್ನುವಷ್ಟರಲ್ಲಿ ಸಾಕು ನಾಯಿ ಆತನನ್ನ ಕಾಪಾಡಿ ಕೊನೆಗೆ ತಾನೇ ಬಲಿಯಾಗಿದೆ.

SMG
ಮಾಲೀಕನ ಜೀವ ಉಳಿಸಿ ಪ್ರಾಣ ಬಿಟ್ಟ ನಾಯಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಶೇಖಪ್ಪ ಎಂಬ ವ್ಯಕ್ತಿ ಅಂತರಗಂಗೆ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಲು ಯತ್ನಿಸಿದೆ.

ಇದನ್ನ ಗಮನಿಸಿದ ನಾಯಿ ಅರೆ ಕ್ಷಣದಲ್ಲಿ ಹಾವನ್ನು ಕಚ್ಚಿ ಎಳೆದೊಯ್ದು ಮಾಲೀಕನನ್ನ ಸಾವಿನ ದವಡೆಯಿಂದ ರಕ್ಷಣೆ ಮಾಡಿದೆ. ಇನ್ನೇನು ತನ್ನ ಜೀವ ಕಾಪಾಡಿದ ನಾಯಿ ಕಡೆ ಮಾಲೀಕ ಧನ್ಯತೆಯ ಕುಡಿನೋಟ ಬೀರುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಾಲೀಕನಿಗೆ ಕಚ್ಚಬೇಕಿದ್ದ ಹಾವು ತನ್ನ ವಿಷದ ಹಲ್ಲನ್ನು ನಾಯಿಯ ದೇಹಕ್ಕೆ ನಾಟಿಸಿತ್ತು.

ಕೆಲ ಕಾಲ ಅಲ್ಲೇ ಒದ್ದಾಡಿದ ನಾಯಿ ಅಸುನೀಗಿದೆ. ಅನ್ನ ಹಾಕಿದ ಮಾಲೀಕನ ಪ್ರಾಣ ಕಾಪಾಡುವ ಮೂಲಕ ತನ್ನ ಋಣ ತೀರಿಸಿ ಇಹಲೋಕ ತ್ಯಜಿಸಿದೆ.

ಶಿವಮೊಗ್ಗ: ಇನ್ನೇನು ಹಾವೊಂದು ಮಾಲೀಕನಿಗೆ ಕಚ್ಚಿಬಿಡುತ್ತದೆ ಎನ್ನುವಷ್ಟರಲ್ಲಿ ಸಾಕು ನಾಯಿ ಆತನನ್ನ ಕಾಪಾಡಿ ಕೊನೆಗೆ ತಾನೇ ಬಲಿಯಾಗಿದೆ.

SMG
ಮಾಲೀಕನ ಜೀವ ಉಳಿಸಿ ಪ್ರಾಣ ಬಿಟ್ಟ ನಾಯಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಶೇಖಪ್ಪ ಎಂಬ ವ್ಯಕ್ತಿ ಅಂತರಗಂಗೆ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಲು ಯತ್ನಿಸಿದೆ.

ಇದನ್ನ ಗಮನಿಸಿದ ನಾಯಿ ಅರೆ ಕ್ಷಣದಲ್ಲಿ ಹಾವನ್ನು ಕಚ್ಚಿ ಎಳೆದೊಯ್ದು ಮಾಲೀಕನನ್ನ ಸಾವಿನ ದವಡೆಯಿಂದ ರಕ್ಷಣೆ ಮಾಡಿದೆ. ಇನ್ನೇನು ತನ್ನ ಜೀವ ಕಾಪಾಡಿದ ನಾಯಿ ಕಡೆ ಮಾಲೀಕ ಧನ್ಯತೆಯ ಕುಡಿನೋಟ ಬೀರುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಾಲೀಕನಿಗೆ ಕಚ್ಚಬೇಕಿದ್ದ ಹಾವು ತನ್ನ ವಿಷದ ಹಲ್ಲನ್ನು ನಾಯಿಯ ದೇಹಕ್ಕೆ ನಾಟಿಸಿತ್ತು.

ಕೆಲ ಕಾಲ ಅಲ್ಲೇ ಒದ್ದಾಡಿದ ನಾಯಿ ಅಸುನೀಗಿದೆ. ಅನ್ನ ಹಾಕಿದ ಮಾಲೀಕನ ಪ್ರಾಣ ಕಾಪಾಡುವ ಮೂಲಕ ತನ್ನ ಋಣ ತೀರಿಸಿ ಇಹಲೋಕ ತ್ಯಜಿಸಿದೆ.

Intro:ಶಿವಮೊಗ್ಗ
ಶಿಕಾರಿಪುರ

ಇನ್ನೇನು ಹೆಡೆಬಿಚ್ಚಿದ ನಾಗರಹಾವು ಮಾಲೀಕನ ಕಾಲಿಗೆ ಕಚ್ಚಬೇಕಿತ್ತು. ಆದರೆ ಸಾವಿನದವಡೆಯಿಂದ ಮಾಲೀಕನನ್ನು ರಕ್ಷಿಸಿತ್ತು ಸಾಕಿದ ನಾಯಿ...


ಹೌದು ಇಂತಹದ್ದೊಂದು ಘಟನೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


ಶೇಖಪ್ಪ ಎಂಬ ವ್ಯಕ್ತಿ ಶನಿವಾರ ಗ್ರಾಮದ ಅಂತರಗಂಗೆ ಕೆರೆಯ ಉದ್ಯೋಗಖಾತ್ರಿ ಕಾಮಗಾರಿಗೆ ಬಂದಿದ್ರು.. ಮಾಲೀಕನ ಜೊತೆ ನಾಯಿಯು ಬಂದಿತ್ತು.  ಕೆಲಸ ಮಾಡುವಾಗ ಕಾಲುಬುಡದಲ್ಲಿದ್ದ ಹಾವನ್ನು ಗಮನಿಸಿರಲಿಲ್ಲ. ಹೆಡೆಬಿಚ್ವಿದ ಹಾವು ಇನ್ನೇನು ಕಚ್ಚುವುದೊಂದೆ ಬಾಕಿ.. ಆದರೆ ಇದನ್ನ ನೋಡಿದ ನಾಯಿ...   ಅರೆಕ್ಷಣದಲ್ಲಿ ಹಾವನ್ನು ಕಚ್ಚಿ ಎಳೆದೊಯ್ಯಿತು. ಇದರಿಂದಾಗಿ ಸಾವಿನದವಡೆಯಿಂದ ಕೂದಲೆಳೆ ಅಂತರದಲ್ಲಿ ಮಾಲೀಕ ಬಚಾವಾದ.

ಇನ್ನೇನು ತನ್ನ ಜೀವ ಕಾಪಾಡಿದ ನಾಯಿ ಕಡೆ ಮಾಲೀಕ ಧನ್ಯತೆಯ ಕುಡಿನೋಟ ಬೀರುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಮಾಲೀಕನಿಗೆ ಕಚ್ಚಬೇಕಿದ್ದ ಬುಸುಗುಡುತ್ತಿದ್ದ ಹಾವು ತನ್ನ ವಿಷದ ಹಲ್ಲನ್ನು ನಾಯಿಯ ದೇಹಕ್ಕೆ ನಾಟಿಸಿತ್ತು. ಕೆಲಕಾಲ ಒದ್ದಾಡಿದ ನಾಯಿ ಅಲ್ಲೇ ಅಸು ನೀಗಿತು.

ಅನ್ನ ಹಾಕಿದ ಮಾಲೀಕನ ಜೀವ ಉಳಿಸಿದ ನಾಯಿ ತನ್ನ ಋಣವ ತೀರಿಸಿ ಇಹಲೋಕ ತ್ಯಜಿಸಿತ್ತು.

ಇತ್ತ ನನ್ನ ಜೀವಕ್ಕಾಗಿ ತನ್ನ ಜೀವತ್ಯಾಗ ಮಾಡಿದ ನಾಯಿಯ ಬಗ್ಗೆ ಮಾಲೀಕನ ಕಣ್ಣಲ್ಲಿ ನೀರು ಜಿನುಗಿತ್ತು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ‌ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.