ETV Bharat / state

ಬರೋಬ್ಬರಿ 235 ಕೆ.ಜಿ ತೂಕ ಗಾಂಜಾ ಬೆಳೆದಿದ್ದ ವೃದ್ಧ... ಆರೋಪಿ ಅಂದರ್​ - undefined

ನಾರಾಯಣ ಎಂಬಾತ ತನ್ನ ಹೊಲದಲ್ಲಿ 235 ಕೆ.ಜಿ.ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆತನಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿದೆ

ಬಂಧನ
author img

By

Published : Jul 17, 2019, 2:50 AM IST

ಶಿವಮೊಗ್ಗ: ತನ್ನ ಸ್ವಂತ ಹೊಲದಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ 67 ವರ್ಷದ ವೃದ್ಧನಿಗೆ‌ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಜಿಲ್ಲೆಯ ರೆಚಿಕೊಪ್ಪ ಗ್ರಾಮದ ನಿವಾಸಿ ನಾರಾಯಣ ಎಂಬ ವೃದ್ಧ ಸೂಡೂರು ಗ್ರಾಮದ ಸರ್ವೆ ನಂಬರ್ 201 ರ ತನ್ನ ಭೂಮಿಯಲ್ಲಿ 235 ಕೆ.ಜಿ.ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿದ್ದನು. ಈ ಗಾಂಜಾ ಗಿಡದ ದಂಧೆಯನ್ನು 2015 ರಿಂದಲೇ ಆರಂಭ ಮಾಡಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕುಂಸಿ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು. ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದು ತೀರ್ಪು ನೀಡಲಾಗಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಹೀರೆಮಠ್ ರವರು ಆರೋಪಿ ನಾರಾಯಣರವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

ಶಿವಮೊಗ್ಗ: ತನ್ನ ಸ್ವಂತ ಹೊಲದಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ 67 ವರ್ಷದ ವೃದ್ಧನಿಗೆ‌ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಜಿಲ್ಲೆಯ ರೆಚಿಕೊಪ್ಪ ಗ್ರಾಮದ ನಿವಾಸಿ ನಾರಾಯಣ ಎಂಬ ವೃದ್ಧ ಸೂಡೂರು ಗ್ರಾಮದ ಸರ್ವೆ ನಂಬರ್ 201 ರ ತನ್ನ ಭೂಮಿಯಲ್ಲಿ 235 ಕೆ.ಜಿ.ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿದ್ದನು. ಈ ಗಾಂಜಾ ಗಿಡದ ದಂಧೆಯನ್ನು 2015 ರಿಂದಲೇ ಆರಂಭ ಮಾಡಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕುಂಸಿ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು. ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದು ತೀರ್ಪು ನೀಡಲಾಗಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಹೀರೆಮಠ್ ರವರು ಆರೋಪಿ ನಾರಾಯಣರವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

Intro:ಗಾಂಜಾ ಬೆಳೆದ 67 ವರ್ಷದ ವೃದ್ದನಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ.

ಶಿವಮೊಗ್ಗ: ತನ್ನ ಹೊಲದಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ 67 ವರ್ಷದ ವೃದ್ದನಿಗೆ‌ ಜಿಲ್ಲಾ ಹಾಗೂ‌‌ ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜಿಲ್ಲೆಯ ರೆಚಿಕೊಪ್ಪ ಗ್ರಾಮದ ವಾಸಿ ನಾರಾಯಣ ಎಂಬ ವೃದ್ದ ಸೂಡೂರು ಗ್ರಾಮದ ಸರ್ವೆ ನಂಬರ್ 201 ರ ತನ್ನ ಭೂಮಿಯಲ್ಲಿ 2015 ರಲ್ಲಿ 235 ಕೆ.ಜಿ.ತೂಕದ 75 ಗಾಂಜಾ ಗಿಡಗಳನ್ನು ಬೆಳೆದಿದ್ದರು.Body: ನಾರಾಯಣ ಗಾಂಜಾ ಗಿಡ ಬೆಳೆದ ಖಚಿತ ಮಾಹಿತಿ ಮೇರೆಗೆ ಕುಂಸಿ ಪೊಲೀಸರು ದಾಳಿ ಮಾಡಿ ಗಾಂಜಾ ಗಿಡ ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಂದು ತೀರ್ಪು ನೀಡಲಾಗಿದೆ. Conclusion: ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಹೀರೆಮಠ್ ರವರು ಆರೋಪಿ ನಾರಾಯಣರವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.