ETV Bharat / state

ವನ್ಯಜೀವಿಗಳ ಬೇಟೆಗೆ ಯತ್ನ: ಆರು ಖದೀಮರ ಬಂಧನ

ತಾಲೂಕಿನ ಕಸಬಾ ಹೋಬಳಿ, ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿ ಬೇಟೆಗೆ ಹೊಂಚು ಹಾಕಿದ್ದ ಆರು ಬೇಟೆಗಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ.

author img

By

Published : Oct 5, 2019, 4:07 AM IST

ವನ್ಯಜೀವಿಗಳ ಬೇಟೆಗೆ ಯತ್ನ: ಆರು ಖದೀಮರ ಬಂಧನ

ರಾಮನಗರ: ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಂದೂಕು ಹಿಡಿದು ಆರು ಜನ ಬೈಕ್​ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ 6 ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.

ಬಂಧಿತರಿಂದ ಆರು ದ್ವಿಚಕ್ರ ವಾಹನ, ಎರಡು ಒಂಟಿ ನಾಳ ಬಂದೂಕು ವಶಕ್ಕೆ ಪಡೆಯಲಾಗಿದೆ. ಚಿಕ್ಕೇಗೌಡನದೊಡ್ಡಿ ಗ್ರಾಮದ ಪುಟ್ಟಮಾದ, ಶೇಖರ್, ಈರ, ಕೆಂಚ, ತಮ್ಮಯ್ಯ, ರಾಮಗಿರಿ ಕಾಲೋನಿಯ ಕಬ್ಬಾಳ ಬಂಧಿತ ಆರೋಪಿಗಳು. ಇವರು ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕು ಹಿಡಿದು ಬೈಕ್​ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಸಿಎಫ್ ದೇವರಾಜು, ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಧಾಳೇಶ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ರಾಮನಗರ: ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಂದೂಕು ಹಿಡಿದು ಆರು ಜನ ಬೈಕ್​ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ 6 ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.

ಬಂಧಿತರಿಂದ ಆರು ದ್ವಿಚಕ್ರ ವಾಹನ, ಎರಡು ಒಂಟಿ ನಾಳ ಬಂದೂಕು ವಶಕ್ಕೆ ಪಡೆಯಲಾಗಿದೆ. ಚಿಕ್ಕೇಗೌಡನದೊಡ್ಡಿ ಗ್ರಾಮದ ಪುಟ್ಟಮಾದ, ಶೇಖರ್, ಈರ, ಕೆಂಚ, ತಮ್ಮಯ್ಯ, ರಾಮಗಿರಿ ಕಾಲೋನಿಯ ಕಬ್ಬಾಳ ಬಂಧಿತ ಆರೋಪಿಗಳು. ಇವರು ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕು ಹಿಡಿದು ಬೈಕ್​ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಸಿಎಫ್ ದೇವರಾಜು, ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಧಾಳೇಶ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

Intro:Body:ರಾಮನಗರ : ತಾಲೂಕಿನ ಕಸಬಾ ಹೋಬಳಿ, ಅರೇಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿ  ಬೇಟೆಗೆ ಹೊಂಚು ಹಾಕಿದ್ದ ಆರು ಬೇಟೆಗಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿ ಜೈಲಿಗಟ್ಟಿದ್ದಾರೆ.                                                       ಬಂದಿತರಿಂದ ಆರು ದ್ವಿಚಕ್ರ ವಾಹನ, ಎರಡು ಒಂಟಿ ನಾಳ ಬಂದೂಕು ವಶಕ್ಕೆ ಪಡೆದಿದ್ದಾರೆ ಈ ವೇಳೆ ಆರೋಪಿಗಳಾದ ಚಿಕ್ಕೇಗೌಡನದೊಡ್ಡಿ ಗ್ರಾಮದ ಪುಟ್ಟಮಾದ, ಶೇಖರ್, ಈರ, ಕೆಂಚ, ತಮ್ಮಯ್ಯ, ರಾಮಗಿರಿ ಕಾಲೋನಿಯ ಕಬ್ಬಾಳ ಬಂದಿಸಿದ್ದಾರೆ.  ಆರೋಪಿಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕು ಹಿಡಿದು ಆರು ಬೈಕ್ ಗಳಲ್ಲಿ ಅರಣ್ಯ ಪ್ರವೇಶಿಸಿದ್ದು ಬೇಟೆಯಾಡಲು ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿದ್ದಾರೆ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ದೇವರಾಜು, ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಧಾಳೇಶ್ ಮತ್ತು ಸಿಬ್ಬಂದಿಗಳಿದ್ದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.