ETV Bharat / state

ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಗೃಹಿಣಿ ಸಾವು: ಪರಿಹಾರಕ್ಕೆ ಮೊರೆ

author img

By

Published : Jun 12, 2020, 10:21 AM IST

ಬಟ್ಟೆ ತೊಳೆದು ಮನೆಯ‌ ಮೇಲೆ ಒಣಗಿಸಲು ಹೋದಾಗ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಗೃಹಿಣಿ ಸಾವನ್ನಪ್ಪಿರುವ ದಾರುಣ ಘಟನೆ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Died
Died

ರಾಮನಗರ: ಬಟ್ಟೆ ತೊಳೆದು ಮನೆಯ‌ ಮೇಲೆ ಒಣಗಿಸಲು ಹೋದಾಗ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಗೃಹಿಣಿಯೋರ್ವರು ಸಾವನ್ನಪ್ಪಿರುವ ಘಟನೆ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಕುಂಟನದೊಡ್ಡಿ ಗ್ರಾಮದ ಗೃಹಿಣಿ ಶಿವಮ್ಮ (45) ವಿದ್ಯುತ್‌ ಅವಘಡದಿಂದ ಮೃತಪಟ್ಟವರು. ಮಾದಯ್ಯ ಎಂಬುವರ ಪತ್ನಿಯಾದ ಇವರು, ತಮ್ಮ ಮನೆಯ ಮೇಲೆ ತೊಳೆದ ಬಟ್ಟೆಗಳನ್ನು ಒಣಗಲು ಹಾಕಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮೇಲ್ಭಾಗ ಹಾದು ಹೋಗಿರುವ ವಿದ್ಯುತ್ ತಂತಿ ಮಳೆ, ಗಾಳಿಯ ಪರಿಣಾಮ ಕಡಿದು ಬಿದ್ದಿತ್ತು. ಅಚಾನಕ್‌ ಆಗಿ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಯನ್ನು ಮಹಿಳೆ ತುಳಿದಿದ್ದಾರೆ.

ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿದ್ದು, ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ರಾಮನಗರ: ಬಟ್ಟೆ ತೊಳೆದು ಮನೆಯ‌ ಮೇಲೆ ಒಣಗಿಸಲು ಹೋದಾಗ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಗೃಹಿಣಿಯೋರ್ವರು ಸಾವನ್ನಪ್ಪಿರುವ ಘಟನೆ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಕುಂಟನದೊಡ್ಡಿ ಗ್ರಾಮದ ಗೃಹಿಣಿ ಶಿವಮ್ಮ (45) ವಿದ್ಯುತ್‌ ಅವಘಡದಿಂದ ಮೃತಪಟ್ಟವರು. ಮಾದಯ್ಯ ಎಂಬುವರ ಪತ್ನಿಯಾದ ಇವರು, ತಮ್ಮ ಮನೆಯ ಮೇಲೆ ತೊಳೆದ ಬಟ್ಟೆಗಳನ್ನು ಒಣಗಲು ಹಾಕಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮೇಲ್ಭಾಗ ಹಾದು ಹೋಗಿರುವ ವಿದ್ಯುತ್ ತಂತಿ ಮಳೆ, ಗಾಳಿಯ ಪರಿಣಾಮ ಕಡಿದು ಬಿದ್ದಿತ್ತು. ಅಚಾನಕ್‌ ಆಗಿ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಯನ್ನು ಮಹಿಳೆ ತುಳಿದಿದ್ದಾರೆ.

ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿದ್ದು, ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.