ETV Bharat / state

ರಾಮನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ​, ಚನ್ನಪಟ್ಟಣದಲ್ಲಿ ಜೆಡಿಎಸ್​ ಹವಾ - Congress lead in ramanagara

ಬಿಜೆಪಿ ಪಾರ್ಟಿ ರಾಮನಗರದಲ್ಲಿ ಒಂದೂ ಖಾತೆ ತೆರೆಯದೆ ಭಾರಿ ಮುಖಭಂಗ ಅನುಭವಿಸಿದ್ರೆ, ಚನ್ನಪಟ್ಟಣ ನಗರಸಭೆಯಲ್ಲಿ 7 ಸ್ಥಾನ ಗೆಲ್ಲುವ ಮೂಲಕ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡಿದ್ದಾರೆ.

ramanagara-municipal-election-result
ಡಿಕೆಶಿ, ಹೆಚ್ಡಿಕೆ, ಸಿ ಪಿ ಯೋಗಿಶ್ವರ್
author img

By

Published : Apr 30, 2021, 4:51 PM IST

ರಾಮನಗರ: ಇಲ್ಲಿನ ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್​ ಹಾಗೂ ಚನ್ನಪಟ್ಟಣ ನಗರಸಭೆ ಚುಕ್ಕಾಣಿಯನ್ನ ಜೆಡಿಎಸ್ ಹಿಡಿಯುವ ಮೂಲಕ‌ ಸಮಬಲ ಹೋರಾಟ ನಡೆಸಿವೆ.

ಇತ್ತ ಬಿಜೆಪಿ ಪಾರ್ಟಿ ರಾಮನಗರದಲ್ಲಿ ಒಂದೂ ಖಾತೆ ತೆರೆಯದೆ ಭಾರಿ ಮುಖಭಂಗ ಅನುಭವಿಸಿದ್ರೆ, ಚನ್ನಪಟ್ಟಣ ನಗರಸಭೆಯಲ್ಲಿ 7 ಸ್ಥಾನ ಗೆಲ್ಲುವ ಮೂಲಕ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡಿದ್ದಾರೆ.

ರಾಮನಗರ ನಗರಸಭೆಯಲ್ಲಿ ಸ್ಪಷ್ಟ‌ ಬಹುಮತದೊಂದಿಗೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 31 ವಾರ್ಡ್​ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್​​​ 11 ವಾರ್ಡ್​ನಲ್ಲಿ ಗೆಲುವು ಸಾಧಿಸಿದೆ. ಒಂದು ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಒಂದು ವಾರ್ಡ್​ನಲ್ಲೂ ಖಾತೆ ತೆರೆದಿಲ್ಲ.

ರಾಮನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ​, ಚನ್ನಪಟ್ಟಣದಲ್ಲಿ ಜೆಡಿಎಸ್​ ಹವಾ

ರಾಮನಗರ ನಗರಸಭಾ ಚುನಾವಣಾ ಫಲಿತಾಂಶದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್​ಗೆ ಮುಖಭಂಗವಾಗಿದೆ. ಹಾಲಿ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರೂ ರಾಮನಗರದಲ್ಲಿ 11 ಸ್ಥಾನಗಳಿಗೆ ಜೆಡಿಎಸ್ ತೃಪ್ತಿ ಪಟ್ಟುಕೊಂಡಿದೆ.

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಶ್ವತ್ಥ​​​ ನಾರಾಯಣ ಎಲೆಕ್ಷನ್​​ಗೆ ಅಬ್ಬರದ ಪ್ರಚಾರ ನಡೆಸಿದ್ದರು. 20 ವಾರ್ಡ್​ಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಅಂತಾ ಹೇಳಿದ್ದರು. ಆದರೆ 1 ವಾರ್ಡ್​ನಲ್ಲೂ ಗೆದ್ದಿಲ್ಲ.

ಮತ್ತೊಂದೆಡೆ ಚನ್ನಪಟ್ಟಣ ನಗರಸಭೆ 31 ವಾರ್ಡ್​ಗಳ ಪೈಕಿ 16ರಲ್ಲಿ ಜೆಡಿಎಸ್, 7ರಲ್ಲಿ ಕಾಂಗ್ರೆಸ್ ಹಾಗೂ 7ರಲ್ಲಿ ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ತಮ್ಮ ಸ್ವಕ್ಷೇತ್ರದಲ್ಲಿ‌ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.

ಓದಿ: ಕೋವಿಡ್​ ಕಾಲದಲ್ಲಿ ಆ್ಯಂಬುಲೆನ್ಸ್ ಡ್ರೈವರ್ ಆದ ಯುವ ನಟ ಅರ್ಜುನ್ ಗೌಡ

ರಾಮನಗರ: ಇಲ್ಲಿನ ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್​ ಹಾಗೂ ಚನ್ನಪಟ್ಟಣ ನಗರಸಭೆ ಚುಕ್ಕಾಣಿಯನ್ನ ಜೆಡಿಎಸ್ ಹಿಡಿಯುವ ಮೂಲಕ‌ ಸಮಬಲ ಹೋರಾಟ ನಡೆಸಿವೆ.

ಇತ್ತ ಬಿಜೆಪಿ ಪಾರ್ಟಿ ರಾಮನಗರದಲ್ಲಿ ಒಂದೂ ಖಾತೆ ತೆರೆಯದೆ ಭಾರಿ ಮುಖಭಂಗ ಅನುಭವಿಸಿದ್ರೆ, ಚನ್ನಪಟ್ಟಣ ನಗರಸಭೆಯಲ್ಲಿ 7 ಸ್ಥಾನ ಗೆಲ್ಲುವ ಮೂಲಕ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಂಡಿದ್ದಾರೆ.

ರಾಮನಗರ ನಗರಸಭೆಯಲ್ಲಿ ಸ್ಪಷ್ಟ‌ ಬಹುಮತದೊಂದಿಗೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 31 ವಾರ್ಡ್​ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್​​​ 11 ವಾರ್ಡ್​ನಲ್ಲಿ ಗೆಲುವು ಸಾಧಿಸಿದೆ. ಒಂದು ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಒಂದು ವಾರ್ಡ್​ನಲ್ಲೂ ಖಾತೆ ತೆರೆದಿಲ್ಲ.

ರಾಮನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ​, ಚನ್ನಪಟ್ಟಣದಲ್ಲಿ ಜೆಡಿಎಸ್​ ಹವಾ

ರಾಮನಗರ ನಗರಸಭಾ ಚುನಾವಣಾ ಫಲಿತಾಂಶದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್​ಗೆ ಮುಖಭಂಗವಾಗಿದೆ. ಹಾಲಿ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರೂ ರಾಮನಗರದಲ್ಲಿ 11 ಸ್ಥಾನಗಳಿಗೆ ಜೆಡಿಎಸ್ ತೃಪ್ತಿ ಪಟ್ಟುಕೊಂಡಿದೆ.

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಶ್ವತ್ಥ​​​ ನಾರಾಯಣ ಎಲೆಕ್ಷನ್​​ಗೆ ಅಬ್ಬರದ ಪ್ರಚಾರ ನಡೆಸಿದ್ದರು. 20 ವಾರ್ಡ್​ಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಅಂತಾ ಹೇಳಿದ್ದರು. ಆದರೆ 1 ವಾರ್ಡ್​ನಲ್ಲೂ ಗೆದ್ದಿಲ್ಲ.

ಮತ್ತೊಂದೆಡೆ ಚನ್ನಪಟ್ಟಣ ನಗರಸಭೆ 31 ವಾರ್ಡ್​ಗಳ ಪೈಕಿ 16ರಲ್ಲಿ ಜೆಡಿಎಸ್, 7ರಲ್ಲಿ ಕಾಂಗ್ರೆಸ್ ಹಾಗೂ 7ರಲ್ಲಿ ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ತಮ್ಮ ಸ್ವಕ್ಷೇತ್ರದಲ್ಲಿ‌ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.

ಓದಿ: ಕೋವಿಡ್​ ಕಾಲದಲ್ಲಿ ಆ್ಯಂಬುಲೆನ್ಸ್ ಡ್ರೈವರ್ ಆದ ಯುವ ನಟ ಅರ್ಜುನ್ ಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.