ETV Bharat / state

ಎಸಿಬಿ ಕುಂದು-ಕೊರತೆ ಸಭೆಗೆ ಸಾರ್ವಜನಿಕರ ಕೊರತೆ - ರಾಮನಗರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸಭೆ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಸಿಬಿ ಹಮ್ಮಿಕೊಂಡಿದ್ದ ಸಾರ್ವಜನಿರಕ ಕುಂದು-ಕೊರತೆ ಸಭೆಯಲ್ಲಿ ಸಾರ್ವಜನಿಕರ ಕೊರತೆ ಎದ್ದು ಕಾಣುತಿತ್ತು.

lack-of-public-at-acb-meeting-in-ramnagar
http://10.10.50.85:6060///finalout4/karnataka-nle/finalout/20-December-2019/5432335_rmn.mp4
author img

By

Published : Dec 20, 2019, 10:57 AM IST

ರಾಮನಗರ: ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಗೆ ಸಾರ್ವಜನಿಕರ ಕೊರತೆ ಎದ್ದು ಕಾಣುತಿತ್ತು. ಒಟ್ಟಾರೆ ಸಭೆಯಲ್ಲಿ ಮೂವರು ಸಾರ್ವಜನಿಕರ ಅಹವಾಲು ಸಲ್ಲಿಕೆಯಾಗಿವೆ.

ಎಸಿಬಿ ಕುಂದು-ಕೊರತೆ ಸಭೆ

ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಕುರಿತು ಜನರಿಗೆ ಮಾಹಿತಿ ಇಲ್ಲದೇ ಇರುವುದು ಅಥವಾ ಪ್ರಚಾರದ ಕೊರತೆ ಹಿನ್ನೆಲೆ ಸಭೆಗೆ ಸಾರ್ವಜನಿಕರ‌ ಸ್ಪಂದನೆ‌ ಕಡಿಮೆಯಾಗಿತ್ತು.

ಅಧಿಕಾರಿಗಳು ಸೇರಿ 12 ಜನರು ಭಾಗಿಯಾಗಿದ್ದರು. ಎಸಿಬಿ ಇನ್ಸ್​ಪೆಕ್ಟರ್​​ ಸತ್ಯನಾರಾಯಣಸ್ವಾಮಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಲೋಕೇಶ್ ಇದ್ದರು.

ರಾಮನಗರ: ಭ್ರಷ್ಟಾಚಾರ ನಿಗ್ರಹ ದಳ ವತಿಯಿಂದ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಗೆ ಸಾರ್ವಜನಿಕರ ಕೊರತೆ ಎದ್ದು ಕಾಣುತಿತ್ತು. ಒಟ್ಟಾರೆ ಸಭೆಯಲ್ಲಿ ಮೂವರು ಸಾರ್ವಜನಿಕರ ಅಹವಾಲು ಸಲ್ಲಿಕೆಯಾಗಿವೆ.

ಎಸಿಬಿ ಕುಂದು-ಕೊರತೆ ಸಭೆ

ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಕುರಿತು ಜನರಿಗೆ ಮಾಹಿತಿ ಇಲ್ಲದೇ ಇರುವುದು ಅಥವಾ ಪ್ರಚಾರದ ಕೊರತೆ ಹಿನ್ನೆಲೆ ಸಭೆಗೆ ಸಾರ್ವಜನಿಕರ‌ ಸ್ಪಂದನೆ‌ ಕಡಿಮೆಯಾಗಿತ್ತು.

ಅಧಿಕಾರಿಗಳು ಸೇರಿ 12 ಜನರು ಭಾಗಿಯಾಗಿದ್ದರು. ಎಸಿಬಿ ಇನ್ಸ್​ಪೆಕ್ಟರ್​​ ಸತ್ಯನಾರಾಯಣಸ್ವಾಮಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಲೋಕೇಶ್ ಇದ್ದರು.

Intro:Body:ರಾಮನಗರ : ಭ್ರಷ್ಟಾಚಾರ ನಿಗ್ರಹ ದದ ವತಿಯಿಂದ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಾರ್ವಜನಿಕರ ಕುಂದುಕೊರತೆ ಆಲಿಸುವ ಹಾಗೂ ದೂರು ಸ್ವೀಕಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮೂರು ಮನವಿಗಳು‌ಮಾತ್ ಸಲ್ಲಿಕೆಯಾಗಿವೆ. ಇದೊಂದು ರೀತಿಯ ಕಾಟಾಚಾರದ ಸಭೆ‌ ಎನ್ನುವಂತಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ACB ಅಧಿಕಾರಿಗಳಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗಿತ್ತು, ಆದರೆ ಸಭೆಗೆ ಜನರೇ ಇಲ್ಲದೆ ಬಿಕೋ ಎನ್ನುತ್ತಿತ್ತು.
ಸಭೆ ಇರುವ ಬಗ್ಗೆ ಎಸಿಬಿ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಪ್ರಚಾರ ಮತ್ತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಭೆಗೆ ಸಾರ್ವಜನಿಕರ‌ ಸ್ಪಂದನೆ‌ ಕಡಿಮೆಯಾಗಿತ್ತು.
ಒಟ್ಟಾರೆ ಸಭೆಯಲ್ಲಿ ಕೇವಲ 12 ಜನ ಅಷ್ಟೇ ಭಾಗಿಯಾಗಿದ್ದರು
ಅದರಲ್ಲಿ ಮೂರು ಜನ ಮಾತ್ರ ACB ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೇವಲ 1 ಗಂಟೆಯಲ್ಲಿ ಸಭೆ ಮುಗಿಸಿದ ACB ಇನ್ಸ್‌ಪೆಕ್ಟರ್ ಸತ್ಯನಾರಾಯಣಸ್ವಾಮಿ ಅಲ್ಲಿಂದ ತೆರಳಿದರು. ಸರ್ಕಾರ ಸಾರ್ವಜನಿಕರಿಗೆ ಅನುಕೂಲ‌ ಮಾಡಿಕೊಟ್ಟು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ‌ ಕ್ರಮಕ್ಕೆ ಮುಂದಾಗಿದೆ, ಅಲ್ಲದೆ ಹಿರಿಯ ಅಧಿಕಾರಿಗಳು ಇಂತಹ ಸಭೆ ಮೂಲಕ ಸಾರ್ವಜನಿಕರ‌ ದುಖಃ ದುಮ್ಮಾನಗಳನ್ನು ಪರಿಹರಿಸುವ ಸಲುವಾಗಿ‌ ಶ್ರಮಿಸುತ್ತಿದ್ದರೂ ಎಲ್ಲೋ ಒಂದು ಕಡೆ‌‌ ಮಾಹಿತಿ‌ ನೀಡುವ ವೈಫಲ್ಯದಿಂದಾಗಿ ಸಭೆಗಳೇ ಮಹತ್ವ ಕಳೆದುಕೊಳ್ಳುತ್ತಿವೆ. ಇನ್ನು ಮುಂದಾದರೂ ಸಾರ್ವಜನಿಕರಿಗೆ ಮಾಹಿತಿ‌ ನೀಡುವ ನಿಟ್ಟಿನಲ್ಲಿ ಆಡಳಿತ ವರ್ಗ ಕ್ರಮ‌ ಕೈಗೊಳ್ಳಬೇಕಿದೆ.
ಎಸಿಬಿ ಸಭೆಯಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಲೋಕೇಶ್ ಉಪಸ್ಥಿತರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.