ETV Bharat / state

ಒಳ್ಳೆಯ ಸಮಯವೇಕೆ?, ಸಿಡಿ ಇದ್ರೆ ನಾಳೆಯೇ ಬಿಡುಗಡೆ ಮಾಡ್ಲಿ: ಯೋಗೇಶ್ವರ್​ಗೆ ಹೆಚ್​​ಡಿಕೆ ಸವಾಲ್​​​​ - ಸಿಡಿ ವಿಚಾರವಾಗಿ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಸಿ.ಪಿ.ಯೋಗೇಶ್ವರ್​ ಲೆವೆಲ್​ಗೆ ನಾನು ಇಳಿಯಲ್ಲ. ಸಿಡಿ ಇದೆ, ಸಮಯ ನೋಡಿ ಬಿಡುಗಡೆ ಮಾಡ್ತೀನಿ ಅಂತಿದಾರೆ. ಹಾಗೊಂದು ವೇಳೆ ಸಿಡಿ ಇದ್ರೆ ನಾಳೆಯೇ ಬಿಡುಗಡೆ ಮಾಡಲಿ ಎಂದು ಹೆಚ್​. ಡಿ. ಕುಮಾರಸ್ವಾಮಿ ಸವಾಲೆಸೆದರು.

ಕುಮಾರಸ್ವಾಮಿ
ಕುಮಾರಸ್ವಾಮಿ
author img

By

Published : Mar 2, 2021, 4:09 PM IST

ರಾಮನಗರ : ಒಳ್ಳೆಯ ಸಮಯವೇಕೆ?, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ ಎಂದು ಸಚಿವ ಸಿ.ಪಿ. ಯೋಗೇಶ್ವರ್​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಮನಗರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ

ಚನ್ನಪಟ್ಟಣ ಇಲ್ಲಾಂದ್ರೆ ಎಲ್ಲಾದರೂ ಬರಲಿ, ರಾಜಕಾರಣ ಮಾಡೋದು ನನಗೂ ಗೊತ್ತಿದೆ. ಅವರ ಸವಾಲನ್ನು ನಮ್ಮ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ. ನಾನು ಕಳೆದ ಬಾರಿ ಚನ್ನಪಟ್ಟಣಕ್ಕೆ ಚುನಾವಣೆ ನಡೆಸಲು ಬಂದಿರಲಿಲ್ಲ, ಅರ್ಜಿ ಹಾಕಲು ಬಂದಿದ್ದೆ. ಆದ್ರೂ ನಾನು ಗೆಲ್ಲಲಿಲ್ಲವೇ?, ಹಾಗಾಗಿ ಈ ರೀತಿಯ ಬಾಯಿ ಚಪಲದ ಹೇಳಿಕೆ ನೀಡುವುದನ್ನು ಅವರು ಬಿಡಬೇಕು ಎಂದು ಹರಿಹಾಯ್ದರು.

ಕೃಷಿ ಸಚಿವ ಬಿ.ಸಿ.ಪಾಟೀಲ್​​ ವೈದ್ಯರನ್ನು ಮನೆಗೆ ಕರೆಸಿ ವ್ಯಾಕ್ಸಿನ್​ ಹಾಕಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಬನ್ನಿ ಎಂದು ಅವರು ವ್ಯಂಗ್ಯವಾಡಿದರು.

ರಾಮನಗರ : ಒಳ್ಳೆಯ ಸಮಯವೇಕೆ?, ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ ಎಂದು ಸಚಿವ ಸಿ.ಪಿ. ಯೋಗೇಶ್ವರ್​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಮನಗರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ

ಚನ್ನಪಟ್ಟಣ ಇಲ್ಲಾಂದ್ರೆ ಎಲ್ಲಾದರೂ ಬರಲಿ, ರಾಜಕಾರಣ ಮಾಡೋದು ನನಗೂ ಗೊತ್ತಿದೆ. ಅವರ ಸವಾಲನ್ನು ನಮ್ಮ ಕಾರ್ಯಕರ್ತರೇ ಸ್ವೀಕಾರ ಮಾಡ್ತಾರೆ. ನಾನು ಕಳೆದ ಬಾರಿ ಚನ್ನಪಟ್ಟಣಕ್ಕೆ ಚುನಾವಣೆ ನಡೆಸಲು ಬಂದಿರಲಿಲ್ಲ, ಅರ್ಜಿ ಹಾಕಲು ಬಂದಿದ್ದೆ. ಆದ್ರೂ ನಾನು ಗೆಲ್ಲಲಿಲ್ಲವೇ?, ಹಾಗಾಗಿ ಈ ರೀತಿಯ ಬಾಯಿ ಚಪಲದ ಹೇಳಿಕೆ ನೀಡುವುದನ್ನು ಅವರು ಬಿಡಬೇಕು ಎಂದು ಹರಿಹಾಯ್ದರು.

ಕೃಷಿ ಸಚಿವ ಬಿ.ಸಿ.ಪಾಟೀಲ್​​ ವೈದ್ಯರನ್ನು ಮನೆಗೆ ಕರೆಸಿ ವ್ಯಾಕ್ಸಿನ್​ ಹಾಕಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಬನ್ನಿ ಎಂದು ಅವರು ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.