ETV Bharat / state

ರಾಮನಗರ : ಶ್ರೀರಾಮನವಮಿ ಶೋಭಾಯಾತ್ರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ..

author img

By

Published : Apr 10, 2022, 5:25 PM IST

ಸಿ.ಪಿ. ಯೋಗೇಶ್ವರ್​ ನೇತೃತ್ವದಲ್ಲಿ ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಯತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ಕೊಟ್ಟರು..

C. P. Yogeshwara
ಶ್ರೀರಾಮನವಮಿ ಶೋಭಯಾತ್ರೆಯಲ್ಲಿ ಹಿಂದೂ ಮುಸ್ಲಿಂ ಭಾಗಿ

ರಾಮನಗರ : ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಾಯತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರ ಫೋಟೋವನ್ನು ಇರಿಸಿ ಪೂಜೆ ಸಲ್ಲಿಸಿ, ನಂತರ ಪ್ರಮುಖ ಸ್ಥಳಗಳಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿಯನ್ನು ವಿತರಣೆ ಮಾಡಲಾಯಿತು.

ಸಿಪಿ ಯೋಗೇಶ್ವರ್​ ನೇತೃತ್ವದಲ್ಲಿ ಶೋಭಯಾತ್ರೆ : ಇದಕ್ಕೂ ಮೊದಲು ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ಕೊಟ್ಟರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ದಿನದಂದು ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಮುಂದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಶ್ರೀರಾಮನವಮಿ ಶೋಭಯಾತ್ರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ..

ಶೋಭಯಾತ್ರೆಯಲ್ಲಿ ಕಲಾಮೇಳಗಳ ‌ಮೆರಗು : ಶೋಭಾಯಾತ್ರೆಯಲ್ಲಿ ಕರಾವಳಿ ಭಾಗದ ಚಂಡೆ, ಮಹಿಳಾ ಡೊಳ್ಳು ಕುಣಿತದ ತಂಡ, ರಾಮ, ಸೀತಾ, ಲಕ್ಷ್ಮಣ, ಹನುಮಂತನ ಪ್ರತಿಕೃತಿಯ ಬೃಹತ್ ಬೆದರು ಬೊಂಬೆಗಳು, ಪೂಜೆ ಮತ್ತು ವೀರಗಾಸೆ ಕುಣಿತದ ತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಮಸ್ಲಿಂ ಬಾಂಧರು ಯಾತ್ರೆಯಲ್ಲಿ ಭಾಗಿ : ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಸಹ ಭಾಗಿಯಾಗಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬುದನ್ನು ಸಾಬೀತುಪಡಿಸಿದರು. ಮೆರವಣಿಗೆಯನ್ನು ನೂರಾರು ಮುಸ್ಲಿಂ ಯುವಕರು ವೀಕ್ಷಣೆ ಮಾಡಿದರು. ಈ ವೇಳೆ ಮುಸ್ಲಿಂ ಯುವಕನೋರ್ವ ಮಾತನಾಡಿ, ಮೊದಲು ನಾವು ಭಾರತೀಯರು. ಹಿಂದಿನಿಂದಲೂ ನಮ್ಮ ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಇದ್ದೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ. ಅವರ ಹಬ್ಬಕ್ಕೆ ನಾವು ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೂಡ ಶ್ರೀರಾಮ ನವಮಿಗೆ ನೀರು ಹಂಚುತ್ತಿದ್ದೇವೆ. ನಾವೆಲ್ಲರೂ ಕೂಡ ಬಾಂಧವ್ಯದಿಂದ ಇರುತ್ತೇವೆ ಎಂದರು.

ಇದನ್ನೂ ಓದಿ: ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ.. ಬಿಜೆಪಿಯಲ್ಲಿ ಇನ್ಮುಂದೆ ವಂಶಪಾರಂಪರ್ಯ ನಡೆಯಲ್ಲ.. ಯತ್ನಾಳ್

ರಾಮನಗರ : ಬೊಂಬೆನಗರಿ ಚನ್ನಪಟ್ಟಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಾಯತ್ರೆಯನ್ನು ಅದ್ಧೂರಿಯಗಿ ಆಚರಿಸಲಾಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರ ಫೋಟೋವನ್ನು ಇರಿಸಿ ಪೂಜೆ ಸಲ್ಲಿಸಿ, ನಂತರ ಪ್ರಮುಖ ಸ್ಥಳಗಳಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಕೋಸಂಬರಿಯನ್ನು ವಿತರಣೆ ಮಾಡಲಾಯಿತು.

ಸಿಪಿ ಯೋಗೇಶ್ವರ್​ ನೇತೃತ್ವದಲ್ಲಿ ಶೋಭಯಾತ್ರೆ : ಇದಕ್ಕೂ ಮೊದಲು ಸುಗ್ರೀವ ಆಂಜನೇಯನಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ಕೊಟ್ಟರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ದಿನದಂದು ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಮುಂದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಶ್ರೀರಾಮನವಮಿ ಶೋಭಯಾತ್ರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ..

ಶೋಭಯಾತ್ರೆಯಲ್ಲಿ ಕಲಾಮೇಳಗಳ ‌ಮೆರಗು : ಶೋಭಾಯಾತ್ರೆಯಲ್ಲಿ ಕರಾವಳಿ ಭಾಗದ ಚಂಡೆ, ಮಹಿಳಾ ಡೊಳ್ಳು ಕುಣಿತದ ತಂಡ, ರಾಮ, ಸೀತಾ, ಲಕ್ಷ್ಮಣ, ಹನುಮಂತನ ಪ್ರತಿಕೃತಿಯ ಬೃಹತ್ ಬೆದರು ಬೊಂಬೆಗಳು, ಪೂಜೆ ಮತ್ತು ವೀರಗಾಸೆ ಕುಣಿತದ ತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಮಸ್ಲಿಂ ಬಾಂಧರು ಯಾತ್ರೆಯಲ್ಲಿ ಭಾಗಿ : ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಸಹ ಭಾಗಿಯಾಗಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬುದನ್ನು ಸಾಬೀತುಪಡಿಸಿದರು. ಮೆರವಣಿಗೆಯನ್ನು ನೂರಾರು ಮುಸ್ಲಿಂ ಯುವಕರು ವೀಕ್ಷಣೆ ಮಾಡಿದರು. ಈ ವೇಳೆ ಮುಸ್ಲಿಂ ಯುವಕನೋರ್ವ ಮಾತನಾಡಿ, ಮೊದಲು ನಾವು ಭಾರತೀಯರು. ಹಿಂದಿನಿಂದಲೂ ನಮ್ಮ ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಇದ್ದೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ. ಅವರ ಹಬ್ಬಕ್ಕೆ ನಾವು ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೂಡ ಶ್ರೀರಾಮ ನವಮಿಗೆ ನೀರು ಹಂಚುತ್ತಿದ್ದೇವೆ. ನಾವೆಲ್ಲರೂ ಕೂಡ ಬಾಂಧವ್ಯದಿಂದ ಇರುತ್ತೇವೆ ಎಂದರು.

ಇದನ್ನೂ ಓದಿ: ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ.. ಬಿಜೆಪಿಯಲ್ಲಿ ಇನ್ಮುಂದೆ ವಂಶಪಾರಂಪರ್ಯ ನಡೆಯಲ್ಲ.. ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.