ETV Bharat / state

ಜಮೀರ್ ಮೇಲೆ ಯಾರು ದೂರು ನೀಡಿದ್ದರೋ ಗೊತ್ತಿಲ್ಲ, ಕೊಟ್ಟೋರು ಉತ್ತರ ಕೊಡ್ತಾರೆ: ಹೆಚ್​ಡಿಕೆ

author img

By

Published : Aug 6, 2021, 10:55 PM IST

ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್​ ಖಾನ್ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

HD Kumaraswamy
ಹೆಚ್​ ಡಿ ಕುಮಾರಸ್ವಾಮಿ

ರಾಮನಗರ: ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಬಗ್ಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಂತೂ ಯಾರ ಬಗ್ಗೆಯೂ ದೂರು ನೀಡಿಲ್ಲ. ಯಾರು ದೂರು ಕೊಟ್ಟಿದ್ದಾರೊ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಜಿಲ್ಲೆಯ ಬಿಡದಿಯ ತೋಟದ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಸರ್ಕಾರದಲ್ಲಿರುವ ಕೆಲವು ಸಂಸ್ಥೆಗಳು ಅರ್ಜಿಗಳು ಬಂದಾಗ ತನಿಖೆ ನಡೆಸಿಕೊಂಡು ಬಂದಿರುವುದು ಸಾಮಾನ್ಯ. ನಮ್ಮ ಮೇಲೆ ಅನೇಕ ಬಾರಿ ತನಿಖೆಗಳು ನಡೆದಿಲ್ಲವೇ, 25ರಿಂದ 30 ವರ್ಷದ ವರೆಗೆ ತನಿಖೆ ನಡೆದಿದೆ ಎಂದರು.

ಓದಿ: ಜಮೀರ್ ಅಹಮದ್ ಮನೆ ಮೇಲೆ ನಡೆದಿರುವುದು ಐಟಿ ಅಲ್ಲ, ಇಡಿ ದಾಳಿ

ರಾಜಕಾರಣದಲ್ಲಿ ಇದ್ದಾಗ ಹಲವು ಬಗೆಯ ತೊಂದರೆಗಳನನ್ನು ಅನುಭವಿಸಬೇಕು. ನಾವು ಸರಿಯಾಗಿದ್ದರೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲ. ತಪ್ಪು ಮಾಡಿದರೆ ಹೆದರಬೇಕು. ಇಲ್ಲ ಅಂದ್ರೆ ಏಕೆ‌ ಹೆದರಬೇಕು ಎಂದು ಪ್ರಶ್ನಿಸಿದರು.

ರಾಮನಗರ: ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಬಗ್ಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಂತೂ ಯಾರ ಬಗ್ಗೆಯೂ ದೂರು ನೀಡಿಲ್ಲ. ಯಾರು ದೂರು ಕೊಟ್ಟಿದ್ದಾರೊ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಜಿಲ್ಲೆಯ ಬಿಡದಿಯ ತೋಟದ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಸರ್ಕಾರದಲ್ಲಿರುವ ಕೆಲವು ಸಂಸ್ಥೆಗಳು ಅರ್ಜಿಗಳು ಬಂದಾಗ ತನಿಖೆ ನಡೆಸಿಕೊಂಡು ಬಂದಿರುವುದು ಸಾಮಾನ್ಯ. ನಮ್ಮ ಮೇಲೆ ಅನೇಕ ಬಾರಿ ತನಿಖೆಗಳು ನಡೆದಿಲ್ಲವೇ, 25ರಿಂದ 30 ವರ್ಷದ ವರೆಗೆ ತನಿಖೆ ನಡೆದಿದೆ ಎಂದರು.

ಓದಿ: ಜಮೀರ್ ಅಹಮದ್ ಮನೆ ಮೇಲೆ ನಡೆದಿರುವುದು ಐಟಿ ಅಲ್ಲ, ಇಡಿ ದಾಳಿ

ರಾಜಕಾರಣದಲ್ಲಿ ಇದ್ದಾಗ ಹಲವು ಬಗೆಯ ತೊಂದರೆಗಳನನ್ನು ಅನುಭವಿಸಬೇಕು. ನಾವು ಸರಿಯಾಗಿದ್ದರೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲ. ತಪ್ಪು ಮಾಡಿದರೆ ಹೆದರಬೇಕು. ಇಲ್ಲ ಅಂದ್ರೆ ಏಕೆ‌ ಹೆದರಬೇಕು ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.