ETV Bharat / state

ಯಾರೇ ಆಗಲಿ ರಾಜಕೀಯವಾಗಿ ಮಾತನಾಡಲಿ, ವೈಯಕ್ತಿಕ ತೇಜೋವಧೆ ಬೇಡ: ಯೋಗೇಶ್ವರ್​​ - ಉಪ ಚುನಾವಣೆ ಬಗ್ಗೆ ಸಿಪಿವೈ ಪ್ರತಿಕ್ರಿಯೆ

ಒಬ್ಬರನ್ನೊಬ್ಬರು ತೇಜೋವಧೆ ಮಾಡೋದು ಸರಿಯಲ್ಲ ಎಂದು ಬಿಜೆಪಿ ನಾಯಕರ ವೈಯಕ್ತಿಕ ಹೇಳಿಕೆಗೆ ಮಾಜಿ ಸಚಿವ ಸಿ ಪಿ ಯೋಗೇಶ್ವರ್​​ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

Cpy
ಮಾಜಿ ಸಚಿವ ಸಿಪಿವೈ
author img

By

Published : Oct 21, 2021, 4:24 PM IST

ರಾಮನಗರ: ಯಾರೇ ಆಗಲಿ ರಾಜಕೀಯವಾಗಿ ಮಾತನಾಡಲಿ ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಸಿಂದಗಿ - ಹಾನಗಲ್​ನಲ್ಲಿ ಬಿಜೆಪಿ ಗೆಲ್ಲುತ್ತದೆ, ನನಗೆ ಈ ಬಗ್ಗೆ ಮಾಹಿತಿ ಇದೆ. ಆದರೆ ಚುನಾವಣಾ ಪ್ರಚಾರ ಭರಾಟೆಯಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಬಾರದು. ಚುನಾವಣಾ ಬಿರುಸಿನಲ್ಲಿ ಆಯ ತಪ್ಪಿ, ಅಳತೆ ತಪ್ಪಿ ಮಾತನಾಡಿದ್ದಾರೆ, ಅದು ತಪ್ಪು ಎಂದರು.

ಇನ್ನು ಆರ್​ಎಸ್​ಎಸ್​ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದ ಅವರು, ನಾನು RSS ವಿಚಾರವಾಗಿ ಮಾತನಾಡಲ್ಲ, ಬೇರೆಯವರು ಮಾತನಾಡ್ತಾರೆ. ಅದರಲ್ಲೂ ಕುಮಾರಸ್ವಾಮಿ ಬಹಳ ಸ್ಪೀಡ್​​ನಲ್ಲಿ ಮಾತನಾಡ್ತಿದ್ದಾರೆ, ಯಾಕೆ ಅಂತಾ ಗೊತ್ತಿಲ್ಲ ಎಂದರು.

ಇನ್ನು ಸರ್ಕಾರಿ ಬಂಗಲೆ ನಮ್ಮ ಸ್ವಂತದಲ್ಲ, ಹಾಗಾಗಿ ಖಾಲಿ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಗುವ ಬಗ್ಗೆ ಗೊತ್ತಿಲ್ಲ ಎಂದು ಇದೇ ವೇಳೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ರಾಮನಗರ: ಯಾರೇ ಆಗಲಿ ರಾಜಕೀಯವಾಗಿ ಮಾತನಾಡಲಿ ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಸಿಂದಗಿ - ಹಾನಗಲ್​ನಲ್ಲಿ ಬಿಜೆಪಿ ಗೆಲ್ಲುತ್ತದೆ, ನನಗೆ ಈ ಬಗ್ಗೆ ಮಾಹಿತಿ ಇದೆ. ಆದರೆ ಚುನಾವಣಾ ಪ್ರಚಾರ ಭರಾಟೆಯಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಬಾರದು. ಚುನಾವಣಾ ಬಿರುಸಿನಲ್ಲಿ ಆಯ ತಪ್ಪಿ, ಅಳತೆ ತಪ್ಪಿ ಮಾತನಾಡಿದ್ದಾರೆ, ಅದು ತಪ್ಪು ಎಂದರು.

ಇನ್ನು ಆರ್​ಎಸ್​ಎಸ್​ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದ ಅವರು, ನಾನು RSS ವಿಚಾರವಾಗಿ ಮಾತನಾಡಲ್ಲ, ಬೇರೆಯವರು ಮಾತನಾಡ್ತಾರೆ. ಅದರಲ್ಲೂ ಕುಮಾರಸ್ವಾಮಿ ಬಹಳ ಸ್ಪೀಡ್​​ನಲ್ಲಿ ಮಾತನಾಡ್ತಿದ್ದಾರೆ, ಯಾಕೆ ಅಂತಾ ಗೊತ್ತಿಲ್ಲ ಎಂದರು.

ಇನ್ನು ಸರ್ಕಾರಿ ಬಂಗಲೆ ನಮ್ಮ ಸ್ವಂತದಲ್ಲ, ಹಾಗಾಗಿ ಖಾಲಿ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಗುವ ಬಗ್ಗೆ ಗೊತ್ತಿಲ್ಲ ಎಂದು ಇದೇ ವೇಳೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.