ETV Bharat / state

ಕೇಂದ್ರ ಸರ್ಕಾರ ಒಂದು ಧರ್ಮದ ವಿರುದ್ಧ ಹಗೆ ಸಾಧಿಸುತ್ತಿದೆ: ಲಿಂಗಪ್ಪ ಆರೋಪ - ಒಂದು ವರ್ಗದ ಜನರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದ ವಿದಾನ ಪರಿಷತ್ ಸದಸ್ಯ ಸಿ ಎಂ.ಲಿಂಗಪ್ಪ

ಕೇಂದ್ರ ಸರ್ಕಾರ ಒಂದು ಧರ್ಮದ ವಿರುದ್ಧ ಹಗೆ ಸಾಧಿಸುವ ಮನೋಭಾವನೆಯಿಂದ  ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪಿಸಿದ್ರು.

citizenship-act-amendment-is-a-violation-of-fundamental-rights-said-by-lingappa
ವಿಧಾನ ಪರಿಷತ್ ಸದಸ್ಯ ಸಿ ಎಂ.ಲಿಂಗಪ್ಪ
author img

By

Published : Dec 22, 2019, 4:27 PM IST

ರಾಮನಗರ : ಕೇಂದ್ರ ಸರ್ಕಾರ ಒಂದು ಧರ್ಮದ ವಿರುದ್ಧ ಹಗೆ ಸಾಧಿಸುವ ಮನೋಭಾವನೆಯಿಂದ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಅಪ್ಪಿತಪ್ಪಿಯೂ ಸಂವಿಧಾನದ 14 ರಿಂದ 32 ನೇ ವಿಧಿಯವರೆಗೆ ಸಂಸತ್ತು ಮತ್ತು ಸುಪ್ರೀಂ‌ಕೋರ್ಟ್ ಕೂಡ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳುವ ಸಂವಿಧಾನದ ನಿಯಮ ಧಿಕ್ಕರಿಸಲಾಗಿದೆ. ಈ ಮೂಲಕ ಬಿಜೆಪಿಯ ಗೌಪ್ಯ ಪ್ರಣಾಳಿಕೆಯಂತೆ ಸರ್ಕಾರ ನಡೆಸಲು ಹೊರಟಿದ್ದಾರೆ ಎಂದು ಪ್ರದಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪ ಮಾಡಿದ್ರು.

ಕಾಂಗ್ರೆಸ್ ನ‌ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಜನಾಂಗವನ್ನ‌ ಹೊರಗಿಡುವ ಪ್ರಯತ್ನ ಏಕೆ‌? ಎಂಬ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ನೀಡಬೇಕಿದೆ. ಹೊರದೇಶ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ನಂಬಿಕೆಗೆ ಧಕ್ಕೆ‌ ತಂದ ಕಾರಣಕ್ಕೆ‌ ಜೈನ‌, ಪಾರ್ಸಿ, ಬುದ್ದ, ಸಿಖ್ಖರು ಎಲ್ಲರಿಗೂ ಅವಕಾಶ ನೀಡುವಾಗ ಮುಸ್ಲೀಮರಿಗೆ ಏಕೆ ತಾರತಮ್ಯ? ಎಂದು ಕಿಡಿ‌ಕಾರಿದ್ರು.

ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಸರ್ಕಾರಗಳು ತಿದ್ದುಪಡಿ ಮಾಡುವಂತಿಲ್ಲ. ಆದರೂ ಈ ಕಾಯ್ದೆ ತಿದ್ದುಪಡಿ ಮೂಲಕ ವಿಧಿ 14 ರ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೆಲವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಕೇಂದ್ರದ ನಡೆ ವಿರೋಧಿಸಿ ಇದೇ 24ರಂದು ಪ್ರತಿಭಟನೆ‌ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು.

ರಾಮನಗರ : ಕೇಂದ್ರ ಸರ್ಕಾರ ಒಂದು ಧರ್ಮದ ವಿರುದ್ಧ ಹಗೆ ಸಾಧಿಸುವ ಮನೋಭಾವನೆಯಿಂದ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಅಪ್ಪಿತಪ್ಪಿಯೂ ಸಂವಿಧಾನದ 14 ರಿಂದ 32 ನೇ ವಿಧಿಯವರೆಗೆ ಸಂಸತ್ತು ಮತ್ತು ಸುಪ್ರೀಂ‌ಕೋರ್ಟ್ ಕೂಡ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳುವ ಸಂವಿಧಾನದ ನಿಯಮ ಧಿಕ್ಕರಿಸಲಾಗಿದೆ. ಈ ಮೂಲಕ ಬಿಜೆಪಿಯ ಗೌಪ್ಯ ಪ್ರಣಾಳಿಕೆಯಂತೆ ಸರ್ಕಾರ ನಡೆಸಲು ಹೊರಟಿದ್ದಾರೆ ಎಂದು ಪ್ರದಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪ ಮಾಡಿದ್ರು.

ಕಾಂಗ್ರೆಸ್ ನ‌ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಜನಾಂಗವನ್ನ‌ ಹೊರಗಿಡುವ ಪ್ರಯತ್ನ ಏಕೆ‌? ಎಂಬ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ನೀಡಬೇಕಿದೆ. ಹೊರದೇಶ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ನಂಬಿಕೆಗೆ ಧಕ್ಕೆ‌ ತಂದ ಕಾರಣಕ್ಕೆ‌ ಜೈನ‌, ಪಾರ್ಸಿ, ಬುದ್ದ, ಸಿಖ್ಖರು ಎಲ್ಲರಿಗೂ ಅವಕಾಶ ನೀಡುವಾಗ ಮುಸ್ಲೀಮರಿಗೆ ಏಕೆ ತಾರತಮ್ಯ? ಎಂದು ಕಿಡಿ‌ಕಾರಿದ್ರು.

ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಸರ್ಕಾರಗಳು ತಿದ್ದುಪಡಿ ಮಾಡುವಂತಿಲ್ಲ. ಆದರೂ ಈ ಕಾಯ್ದೆ ತಿದ್ದುಪಡಿ ಮೂಲಕ ವಿಧಿ 14 ರ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೆಲವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಕೇಂದ್ರದ ನಡೆ ವಿರೋಧಿಸಿ ಇದೇ 24ರಂದು ಪ್ರತಿಭಟನೆ‌ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು.

Intro:Body:ರಾಮನಗರ : ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಒಂದು ವರ್ಗದ ಜನರನ್ನ ಟಾರ್ಗೆಟ್ ಮಾಡಲಾಗುತ್ತಿದೆ, ಅಪ್ಪಿತಪ್ಪಿಯೂ ಆರ್ಟಿಕಲ್ ೧೪ ರಿಂದ ೩೨ ನೇ ಕಾಲಂ ವರೆಗೆ ಪಾರ್ಲಿಮೆಂಟ್ ಮತ್ತು ಸುಪ್ರೀಂ‌ಕೋರ್ಟ್ ಕೂಡ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದೇಳುವ ಸಂವಿಧಾನದ ನಿಯಮ ದಿಕ್ಕರಿಸಿ ಅವರ ಗುಪ್ತ ಪ್ರಣಾಳಿಕೆಯಂತೆ ಸರ್ಕಾರ ನಡೆಸಲು ಹೊರಟಿದ್ದಾರೆ ಎಂದು ಪ್ರದಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೇಸ್ ನ‌ ವಿದಾನ ಪರಿಷತ್ ಸದಸ್ಯ ಸಿಎಂ.ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೇಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮುಸ್ಲೀಂ ಜನಾಂಗವನ್ನ‌ ಹೊರಗಿಡುವ ಪ್ರಯತ್ನ ಏಕೆ‌ ಎಂಬ ಪ್ರಶ್ನೆಗೆ ಜಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ನೀಡಬೇಕಿದೆ. ಹೊರದೇಶ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ನಂಬಿಕೆಗೆ ದಕ್ಕೆ‌ತಂದ ಕಾರಣಕ್ಕೆ‌ ಜೈನ‌, ಪಾರ್ಸಿ ಬುದ್ದ ಸಿಕ್ಕರು ಎಲ್ಲರಿಗೂ ಅವಕಾಶ ನೀಡುವಾಗ ಮುಸ್ಲೀಂ ರಿಗೆ ಏಕೆ ತಾರತಮ್ಯ ಎಂದು ಸಿಎಂ ಲಿಂಗಪ್ಪ ಕಿಡಿ‌ಕಾರಿದರು.
ದ್ವೇಷ ಸಾಧನಡಗಾಗಿ ಬಿಲ್ ಗೆ ಅಮೆಂಡ್ಮೆಂಟ್ ಮಾಡುವ ಉದ್ದೇಶ ಸರಿಯಲ್ಲ ಇದು ಪ್ರಜಾಪ್ರಭುತ್ವ ರಾಷ್ಟ್ರ ಮುಂದೆ ನೀವೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ದೇಶದ ಆರ್ಥಿಕ ಸ್ಥಿತಿ ಕುಂದಿದೆ.‌ಸಾಮಾನ್ಯ ಜನ ತೀರ ಸಂಕಷ್ಟದಲ್ಲಿದ್ದಾರೆ, ಕೊಳ್ಳುವ ಶಕ್ತಿ ಇಲ್ಲದಂತಾಗಿದೆ, ಏಕ ಭಾಷೆ ಏಕ ರೇಷನ್ ಕಾರ್ಡ್ ಮಾತ್ರ ದೇಶದ ಉನ್ನತಿಗೆ ಕಾರಣವಾಗುವುದಿಲ್ಲ ಇದು ಹುಚ್ಚು ದರ್ಬಾರ್ ಆಗುವತ್ತ ದೇಶ ಬಂದಿದೆ ಎಂದರು.
ಅನಿವಾರ್ಯತೆಗೆ ಅನುಗುಣವಾಗಿ ತಿದ್ದುಪಡಿಯಾಗಬೇಕಿದೆ, ಪ್ರಿಯಾಂಬಲ್‌ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ತಿದ್ದುಪಡಿ ಮಾಡುವಂತಿಲ್ಲ ಆದರೂ ಆರ್ಟಿಕಲ್‌೧೪ ರ ಸ್ಪಷ್ಟ ಉಲ್ಲಂಘನೆಯಾಗಿದೆ ಈ ಬಗ್ಗೆ ಕೆಲವರು ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದಾರೆ ಇಂದುಬಕೋರ್ಟ್ ನ್ಯಾಯವನ್ನ ಎತ್ತಿ ಹಿಡಿಯಲಿದೆ ಎಂದರು.
ದೇಶದ ಪ್ರಗತಿಗೆ ಧ್ಯಾನಿಸುವ ಬಹುಸಂಖ್ಯಾತ ಜನರ ದಾರ್ಮಿಕತೆಗೆ ದಕ್ಕೆಯಾಗಲಿದೆ ಇದನ್ನ ವಿರೋಧಿಸಿ‌ ೨೪ ರಂದು ಪ್ರತಿಭಟನೆ‌ ಹಮ್ಮಿಕೊಂಡಿದ್ದು‌, ಪತ್ರ ರೂಪದಲ್ಲಿ ಜಿಲ್ಲಾಧಿಕಾರಿ ಮುಖೇನ ಸರ್ಕಾರವನ್ನ ಒತ್ತಾಯಿಸಲಾಗುತ್ತದೆ ಎಂದರು.
ಸಭೆಯಲ್ಲಿ‌ ಎಐಸಿಸಿಯ ಜಿಯಾವುಲ್ಲಾ, ಮುಖಂಡ ಇಕ್ಬಾಲ್ ಹುಸೇನ್ , ಜಿ.ಪಂ ಮಾಜಿ ಸದಸ್ಯ ರಾಜು, ಮುಖಂಡರಾದ ಅಂಜನಪ್ಪ , ಉಮಾಶಂಕರ್ , ಎ.ಬಿ. ಚೇತನ್ ಕುಮಾರ್, ನಗರಸಭಾ ಸದಸ್ಯರುಗಳಾದ ಮುತ್ತುರಾಜ್ , ಚನ್ಮಾನಹಳ್ಳಿ ರಾಜು, ಕೆ. ರಮೇಶ್, ಜಯಮ್ಮ , ಪಾರ್ವತಮ್ಮ ಸೇರಿದಂತೆ ಜಿಲ್ಲಾ ಕಾಂಗ್ರೇಸ್ ನಾಯಕರು ಹಾಜರಿದ್ದರು.
Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.