ETV Bharat / state

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

ರಾಮನಗರದ ಹೊರವಲಯದಲ್ಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಆಹಾರ ಮೇಳಕ್ಕೆ ಸಚಿವ ಸಿ.ಟಿ. ರವಿ ಭೇಟಿ ನೀಡಿದರು.

author img

By

Published : Oct 8, 2019, 5:11 AM IST

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

ರಾಮನಗರ: ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್‌ನಿಂದ 4138 ಕೋಟಿ ನೆರೆ ಪರಿಹಾರ ಸಿಕ್ಕಿದೆ, ಎನ್‌ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7200 ಕೋಟಿ ಸಿಕ್ಕಿದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

ರಾಮನಗರದಲ್ಲಿ ಮಾತನಾಡಿದ ಅವರು, ಅಂಕಿ ಅಂಶ ಬೇಕಾದ್ರೆ ವಿಧಾನಸೌಧದಲ್ಲೂ ಮುಂದಿಡ್ತೇವೆ, ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದರು. ಇದೇ ವೇಳೆ ಜಾಸ್ತಿ ಹಾನಿಯಾದವರಿಗೆ 1 ಲಕ್ಷ ಕಡಿಮೆ ಹಾನಿಯಾದವರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಕೆಲವರಿಗೆ ತಲುಪಿಲ್ಲ ಅಂದ್ರೇ ದಾಖಲೆಗಳ ತಪ್ಪಿನಿಂದ ಆಗಿರಬಹುದು, 100 ಕೋಟಿ ಬೆಲೆ ಬಾಳಿದ್ರು, 95000 ರೂಪಾಯಿ ಅಷ್ಟೇ ಕೇಂದ್ರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ಕೊಡಲು ಮುಂದಾಗಿದ್ದೇವೆ ಎಂದು ಸರ್ಕಾರದ ನೆರೆ ನಿರ್ವಹಣೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚುನಾವಣೆಯ ಪೂರ್ವದಲ್ಲಿಯೇ ಬಿಎಸ್​ವೈ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು. ಅದರಂತೆ ಬಿಎಸ್​ವೈ ಸಿಎಂ ಆಗಿದ್ದಾರೆ. ಯಡಿಯೂರಪ್ಪನವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೆ ಆದರೆ ಎಚ್ಚರಿಕೆ ಇರಬೇಕು, ನಾವು ಸ್ಲಿಪ್ ಆಗಬಾರದು ಎಂದರು.

ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್​ ಒಡೆದ ಮನೆಯಾಗಿದ್ದು, ಒಡೆದ ಮನಸ್ಸುಗಳ ಗುಂಪಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ, ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಗುತ್ತಾರೆ ಅಷ್ಟೇ ಎಂದರು.

ಯತ್ನಾಳ್​ಗೆ ನೋಟೀಸ್ ನೀಡಿದ್ದಕ್ಕೆ ಸಮರ್ಥನೆ

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್‌ಗೆ ಕೇಂದ್ರದಿಂದ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ. ರವಿ, ಪರಿಹಾರದ ಬಗ್ಗೆ ಮಾತನಾಡಿದ್ರೆ ಶೋಕಾಸ್ ನೋಟೀಸ್ ನೀಡಲ್ಲ, ಜನರ ಧ್ವನಿಯಾಗೋದಕ್ಕೆ ನಮ್ಮನ್ನ ಆರಿಸಿ ಕಳುಹಿಸಿರುವುದು. ಕೇವಲ ಪರಿಹಾರಕ್ಕೆ ಅಂತಾ ತಿಳಿದುಕೊಳ್ಳಬೇಡಿ ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನ ಉಲ್ಲೇಖಿಸಿಯೇ ಶೋಕಾಸ್ ನೋಟೀಸ್ ಕೊಟ್ಟಿದ್ಧಾರೆ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ನಾನು ಕೂಡಾ ಪ್ರತಿಭಟನೆ ಮಾಡುವ ಮೊದಲನೆಯವ ಅಂತೇಳಿದ್ದೇ ನನಗೇನು ನೋಟಿಸ್ ಕೊಟ್ಟಿಲ್ಲ, ಕರ್ನಾಟಕದ ಹಿತಾಶಕ್ತಿಯನ್ನ ಬಿಟ್ಟು ನಾವು ರಾಜಕಾರಣ ಮಾಡಲ್ಲ , ದೇಶದ ಹಿತಾಶಕ್ತಿ ಇಟ್ಕೊಂಡು ರಾಜ್ಯದ ಹಿತಾಶಕ್ತಿ ಗಮನದಲ್ಲಿರಿಸಿಕೊಂಡೇ ರಾಜಕಾರಣ ಮಾಡ್ತೇವೆ ಅದನ್ನ ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ ಅಷ್ಟೇ ಎಂದರು.

ರಾಮನಗರ: ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್‌ನಿಂದ 4138 ಕೋಟಿ ನೆರೆ ಪರಿಹಾರ ಸಿಕ್ಕಿದೆ, ಎನ್‌ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7200 ಕೋಟಿ ಸಿಕ್ಕಿದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

ರಾಮನಗರದಲ್ಲಿ ಮಾತನಾಡಿದ ಅವರು, ಅಂಕಿ ಅಂಶ ಬೇಕಾದ್ರೆ ವಿಧಾನಸೌಧದಲ್ಲೂ ಮುಂದಿಡ್ತೇವೆ, ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದರು. ಇದೇ ವೇಳೆ ಜಾಸ್ತಿ ಹಾನಿಯಾದವರಿಗೆ 1 ಲಕ್ಷ ಕಡಿಮೆ ಹಾನಿಯಾದವರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಕೆಲವರಿಗೆ ತಲುಪಿಲ್ಲ ಅಂದ್ರೇ ದಾಖಲೆಗಳ ತಪ್ಪಿನಿಂದ ಆಗಿರಬಹುದು, 100 ಕೋಟಿ ಬೆಲೆ ಬಾಳಿದ್ರು, 95000 ರೂಪಾಯಿ ಅಷ್ಟೇ ಕೇಂದ್ರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ಕೊಡಲು ಮುಂದಾಗಿದ್ದೇವೆ ಎಂದು ಸರ್ಕಾರದ ನೆರೆ ನಿರ್ವಹಣೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚುನಾವಣೆಯ ಪೂರ್ವದಲ್ಲಿಯೇ ಬಿಎಸ್​ವೈ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು. ಅದರಂತೆ ಬಿಎಸ್​ವೈ ಸಿಎಂ ಆಗಿದ್ದಾರೆ. ಯಡಿಯೂರಪ್ಪನವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೆ ಆದರೆ ಎಚ್ಚರಿಕೆ ಇರಬೇಕು, ನಾವು ಸ್ಲಿಪ್ ಆಗಬಾರದು ಎಂದರು.

ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್​ ಒಡೆದ ಮನೆಯಾಗಿದ್ದು, ಒಡೆದ ಮನಸ್ಸುಗಳ ಗುಂಪಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ, ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಗುತ್ತಾರೆ ಅಷ್ಟೇ ಎಂದರು.

ಯತ್ನಾಳ್​ಗೆ ನೋಟೀಸ್ ನೀಡಿದ್ದಕ್ಕೆ ಸಮರ್ಥನೆ

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್‌ಗೆ ಕೇಂದ್ರದಿಂದ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ. ರವಿ, ಪರಿಹಾರದ ಬಗ್ಗೆ ಮಾತನಾಡಿದ್ರೆ ಶೋಕಾಸ್ ನೋಟೀಸ್ ನೀಡಲ್ಲ, ಜನರ ಧ್ವನಿಯಾಗೋದಕ್ಕೆ ನಮ್ಮನ್ನ ಆರಿಸಿ ಕಳುಹಿಸಿರುವುದು. ಕೇವಲ ಪರಿಹಾರಕ್ಕೆ ಅಂತಾ ತಿಳಿದುಕೊಳ್ಳಬೇಡಿ ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನ ಉಲ್ಲೇಖಿಸಿಯೇ ಶೋಕಾಸ್ ನೋಟೀಸ್ ಕೊಟ್ಟಿದ್ಧಾರೆ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ನಾನು ಕೂಡಾ ಪ್ರತಿಭಟನೆ ಮಾಡುವ ಮೊದಲನೆಯವ ಅಂತೇಳಿದ್ದೇ ನನಗೇನು ನೋಟಿಸ್ ಕೊಟ್ಟಿಲ್ಲ, ಕರ್ನಾಟಕದ ಹಿತಾಶಕ್ತಿಯನ್ನ ಬಿಟ್ಟು ನಾವು ರಾಜಕಾರಣ ಮಾಡಲ್ಲ , ದೇಶದ ಹಿತಾಶಕ್ತಿ ಇಟ್ಕೊಂಡು ರಾಜ್ಯದ ಹಿತಾಶಕ್ತಿ ಗಮನದಲ್ಲಿರಿಸಿಕೊಂಡೇ ರಾಜಕಾರಣ ಮಾಡ್ತೇವೆ ಅದನ್ನ ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ ಅಷ್ಟೇ ಎಂದರು.

Intro:Body:ರಾಮನಗರ : ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್‌ನಿಂದ ೪೧೩೮ ಕೋಟಿ ನೆರೆ ಪರಿಹಾರ ಸಿಕ್ಕಿದೆ ಎಂದು ಸಚಿವ ಸಿಟಿ ರವಿ ತಿಳಿಸಿದರು.
ರಾಮನಗರದ ಹೊರವಲಯದಲ್ಲಿ ಪ್ರವಾಸೋಧ್ಯಮ ಇಲಾಖೆ ಆಯೋಜಿಸಿದ್ದ ಆಹಾರ ಮೇಳಕ್ಕೆ ಬೇಟಿ ನೀಡಿ ಮಾತನಾಡಿದರು.
ಎನ್‌ಡಿಎ ಸರ್ಕಾರದಲ್ಲಿ ೫ ವರ್ಷದಲ್ಲಿ ೭೨೦೦ ಕೋಟಿ ಸಿಕ್ಕಿದೆ
ಅಂಕಿ ಅಂಶ ಬೇಕಾದ್ರೆ ವಿಧಾನಸೌಧದಲ್ಲೂ ಮುಂದಿಡ್ತೇವೆ
ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಮ ಮಾಡಲ್ಲ
ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ಎಷ್ಟು ನೀಡಬೇಕೋ ಅಷ್ಟನ್ನ ನೀಡ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಅಂತೇಳಿದ್ದಾರೆ. ಇದೇ ವೇಳೆ ರಾಜಕಾರಣ ಮಾಡೋದಕ್ಕೆ ಬೇರೆ ಬೇರೆ ವೇದಿಕೆಗಳಿವೆ ಅಲ್ಲಿ ರಾಜಕಾರಣ ಮಾಡೋಣ, ಬರದ ವಿಚಾರದಲ್ಲಿ, ಅತೀವೃಷ್ಟಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದ ಅವರು ಸಿದ್ದರಾಮಯ್ಯ, ಎಚ್‌ಡಿಕೆ ಸಿಎಂ ಆಗಿದ್ದಾಗ ಒಂದು ಮನೆಗೆ ೯೬ ಸಾವಿರ ಕೊಡ್ತಿದ್ರು
ನಾವು ೫ ಲಕ್ಷ ಕೊಡ್ತಿದ್ದೇವೆ ಅದೇ ತಪ್ಪಾ ನಮ್ದು..? ಎಂದು ಪ್ರಶ್ನಿಸಿದರು. ಇದೇ ವೇಳೆ ಜಾಸ್ತಿ ಹಾನಿಯಾದವರಿಗೆ ೧ ಲಕ್ಷ ಕಡಿಮೆ ಹಾನಿಯಾದವರಿಗೆ ೨೫ ಸಾವಿರದಿಂದ ೫೦ ಸಾವಿರ ಬಿಡುಗಡೆ ಮಾಡಿದ್ದೆವೆ. ಕೆಲವರಿಗೆ ತಲುಪಿಲ್ಲ ಅಂದ್ರೇ ದಾಖಲೆಗಳ ತಪ್ಪಿನಿಂದ ಆಗಿರಬಹುದು, ೧೦೦ ಕೋಟಿ ಬೆಲೆ ಬಾಳಿದ್ರು, ೯೫,೧೦೦ ರೂಪಾಯಿ ಅಷ್ಟೇ ಕೇಂದ್ರ ಕೊಡುವುದು ನಾವು ಉಳಿದ ಹಣ ಸೇರಿಸಿ ೫ ಲಕ್ಷ ಕೊಡಲು ಮುಂದಾಗಿದ್ದೇವೆ ಎಂದು ಸರ್ಕಾರದ ನೆರೆ ನಿರ್ವಹಣೆ ಸಮರ್ಥಿಸಿಕೊಂಡರು.
ರೈತರ ಆತ್ಮಹತ್ಯೆ ವಿಚಾರ ತಾತ್ಕಾಲಿಕ ಪರಿಹಾರವನ್ನು ಕೊಟ್ಟಿದ್ದೇವೆ
ಒಬ್ಬರದ್ದು ಅರ್ಧ ಎಕರೆ ಲ್ಯಾಂಡ್ ಸ್ಲೈಡ್‌ನಲ್ಲಿ ಹೋಗಿದೆ, ಅದಕ್ಕೆ ಕೇಂದ್ರದಿಂದ ೧ ಹೆಕ್ಟೇರ್‌ಗೆ ೩೮ ಸಾವಿರ ಸ್ಲೈಡಿಂಗ್ ಬರುತ್ತೆ ಅದೇ ರೀತಿ ಕೆಲವು ಜಿಲ್ಲೆಗಳಲ್ಲಿ ಲ್ಯಾಂಡ್ ಸ್ಲೈಡಿಂಗ್ ಕೊಡಬೇಕೆಂದು ಸಿಎಂರಲ್ಲಿ ಮನವಿ ಮಾಡಿದ್ದೇನೆ. ಚನ್ನಪ್ಪಗೌಡ ಹಾಗೂ ಚಂದ್ರಪ್ಪಗೌಡ ತೀರಿಕೊಂಡಿದ್ದಾರೆ ನಾನು ಸಾವಿನ ವಿಚಾರದಲ್ಲಿ ವಿವಾದ ಮಾಡಲು ಬಯಸುವುದಿಲ್ಲ, ಸ್ಪಂದಿಸುವಂತಹ ಕೆಲಸ ನಮ್ಮದು ಎಂದ ಅವರು ಒಬ್ಬರದ್ದು ಅರ್ಧ ಎಕರೆ ಮಾತ್ರ ಲ್ಯಾಂಡ್ ಸ್ಲೈಡಿಂಗ್‌ನಲ್ಲಿ ಹೋಗಿದೆ ಈಗಿರುವುದು ಒಂದುಕಾಲು ಎಕರೆ, ನಾವೇನು ತಾತ್ಕಾಲಿಕ ಪರಿಹಾರ ಕೊಡ್ತೀವಿ ಅಂದಿದ್ವಿ ಕೊಟ್ಟಿದ್ದೀವಿ ಕೊಟ್ಟ ನಂತರವೂ ಹತಾಶರಾಗ್ತಾರಾ ಅಂದ್ರೆ ಕಾರಣದ ಬಗ್ಗೆ ಆಲೋಚಿಸಬೇಕಿದೆ ಎಂದರು.

ಸಿಎಂ ತಂತಿ ಮೇಲಿನ ನಡಿಗೆ :
ಬಿಎಸ್ವೈ ಅವರು ಹೇಳಿದ್ದು ಬೇರೆ ಕಾರ್ಯಕ್ಕೆ ಹಣವಿಲ್ಲ ಎಲ್ಲವನ್ನೂ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಬೇಕಿದೆ, ಎನ್ನೋದು ನೇಕಾರರ ಪ್ಯಾಕೇಜ್ ಸಂಬಂಧ ಹೇಳಿದ್ದು, ನಾನು ಚಿಕ್ಕಮಗಳೂರಿಗೆ ಸ್ಪೆಷಲ್ ಪ್ಯಾಕೇಜ್ ೧೦೦ ಕೋಟಿ ಕೊಡುವಂತೆ ಮನವಿ ಮಾಡಿದ್ದೆ, ಅವರು ೧೦ ಕೋಟಿ ಕೊಡ್ತೇನೆ ಅಂದಿದ್ರು ಅದು ಸಾಲಲ್ಲ ಅಂದಿದ್ದಕ್ಕೆ ಮೊದಲು ಪರಿಹಾರದ ಬಗ್ಗೆ ಗಮನ ಕೊಡೋಣ ಅನ್ಯ ಕಾರ್ಯಕ್ಕೆ ವಿನಿಯೋಗಿಸಲು ದುಡ್ಡಿಲ್ಲ ಅಂದಿದ್ದಾರೆ ಅಷ್ಟೇ ಎಂದರು.
ಸಿಎಂ ಚೇಂಜ್ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಚುನಾವಣೆಯ ಪೂರ್ವದಲ್ಲಿಯೇ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು ಅದರಂತೆ ಬಿಎಸ್ವೈ ಸಿಎಂ ಆಗಿದ್ದಾರೆ.
ದೇಶದ ಇತಿಹಾಸದಲ್ಲಿ 75 ವರ್ಷ ಕ್ರಾಸ್ ಆದವರಿಗೆ ಅಧಿಕಾರ ಕೊಟ್ಟಿದ್ದ ಯಡಿಯೂರಪ್ಪನವರನ್ನ ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು ಆದರೆ ಕಾಂಗ್ರೆಸ್ ನಲ್ಲಿ ಸರ್ವಾನುಮತವಿಲ್ಲ ಎಂದು ವ್ಯಂಗ್ಯವಾಡಿದರು.
ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಹೊಡೆದ ಮನೆಯಾಗಿರುವ ಕಾಂಗ್ರೆಸ್ ನಲ್ಲಿ ಹೊಡೆದ ಮನಸ್ಸುಗಳ ಗುಂಪಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ, ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಕ್ತಾರೆ ಅಷ್ಟೇ ಎಂದು ಲೇವಡಿ ಮಾಡಿದ ಸಚಿವ ರವಿ ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೇ ಆದರೆ ಎಚ್ಚರಿಕೆ ಇರಬೇಕು, ನಾವು ಸ್ಲಿಪ್ ಆಗಬಾರದು ಎಂದರು.
ಯತ್ನಾಳ್ ಗೆ ನೋಟೀಸ್ :
ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್‌ಗೆ ಕೇಂದ್ರದಿಂದ ನೋಟೀಸ್ ವಿಚಾರ ದಲ್ಲಿ ಪರಿಹಾರದ ಬಗ್ಗೆ ಮಾತನಾಡಿದ್ರೆ ಶೋಕಾಸ್ ನೋಟೀಸ್ ನೀಡಲ್ಲ, ಜನರ ಧ್ವನಿಯಾಗೋದಕ್ಕೆ ನಮ್ಮನ್ನ ಆರಿಸಿ ಕಳುಹಿಸಿರುವುದು. ಕೇವಲ ಪರಿಹಾರಕ್ಕೆ ಅಂತಾ ತಿಳಿದುಕೊಳ್ಳಬೇಡಿ ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನ ಉಲ್ಲೇಖಿಸಿಯೇ ಶೋಕಾಸ್ ನೋಟೀಸ್ ಕೊಟ್ಟಿದ್ಧಾರೆ ಎಂದು ರವಿ ಸಮರ್ಥಿಸಿಕೊಂಡರು.
ಇದೇ ವೇಳೆ ನಾನು ಕೂಡಾ ಪ್ರತಿಭಟನೆ ಮಾಡುವ ಮೊದಲನೆಯವ ಅಂತೇಳಿದ್ದೇ ನನಗೇನು ನೋಟಿಸ್ ಕೊಟ್ಟಿಲ್ಲ, ಕರ್ನಾಟಕದ ಹಿತಾಶಕ್ತಿಯನ್ನ ಬಿಟ್ಟು ನಾವು ರಾಜಕಾರಣ ಮಾಡಲ್ಲ , ದೇಶದ ಹಿತಾಶಕ್ತಿ ಇಟ್ಕೊಂಡು ರಾಜ್ಯದ ಹಿತಾಶಕ್ತಿ ಗಮನದಲ್ಲಿರಿಸಿಕೊಂಡೇ ರಾಜಕಾರಣ ಮಾಡ್ತೇವೆ ಅದನ್ನ ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ ಅಷ್ಟೇ ಎಂದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.