ETV Bharat / state

ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಕಾಲುವೆಗೆ ಬಿದ್ದು ಸಾವು

author img

By

Published : Oct 29, 2020, 7:22 PM IST

ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು‌. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಗೆ ಸ್ನಾನ ಮಾಡುವುದಕ್ಕೆ ತೆರಳಿದ್ದರು. ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ.

rcr
rcr

ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಸ್ನಾನಕ್ಕೆ ತೆರಳಿದಾಗ ‌ನೀರುಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಮಸ್ಕಿ ತಾಲೂಕಿನ ಶಂಕರ್‌ನಗರ ಕ್ಯಾಂಪ್ ಬಳಿ ಈ ಘಟನೆ ಸಂಭವಿಸಿದೆ.

ಹೈದರಾಬಾದ್ ಮೂಲದ ದಯಾ(18), ಶಿವಾ(19) ನೀರುಪಾಲಾಗಿರುವ ಯುವಕರೆಂದು ಗುರುತಿಸಲಾಗಿದೆ. ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು‌. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದರು.

ಕಾಲುವೆಗೆ ಬಿದ್ದು ಸಾವು

ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಅಗ್ನಿಶಾಮಕ ಸಿಬ್ಬಂದಿ ಯುವಕರ ಶೋಧ ಕಾರ್ಯ ನಡೆಸಿದ್ದಾರೆ. ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು: ಮದುವೆಗೆ ಬಂದ ಇಬ್ಬರು ಯುವಕರು ಸ್ನಾನಕ್ಕೆ ತೆರಳಿದಾಗ ‌ನೀರುಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಮಸ್ಕಿ ತಾಲೂಕಿನ ಶಂಕರ್‌ನಗರ ಕ್ಯಾಂಪ್ ಬಳಿ ಈ ಘಟನೆ ಸಂಭವಿಸಿದೆ.

ಹೈದರಾಬಾದ್ ಮೂಲದ ದಯಾ(18), ಶಿವಾ(19) ನೀರುಪಾಲಾಗಿರುವ ಯುವಕರೆಂದು ಗುರುತಿಸಲಾಗಿದೆ. ಮದುವೆ ಹಿನ್ನೆಲೆಯಲ್ಲಿ ಇಬ್ಬರು ಯುವಕರು ದೀಪಾಲಂಕಾರಕ್ಕಾಗಿ ಬಂದಿದ್ದರು‌. ಶಂಕರ್ ಕ್ಯಾಂಪ್‌ನ ಬಳಿಯ 62ನೇ ಉಪಕಾಲುವೆಗೆ ಹರಿಯುವ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದರು.

ಕಾಲುವೆಗೆ ಬಿದ್ದು ಸಾವು

ಈ ವೇಳೆ ಕಾಲುವೆಯಲ್ಲಿ ಜಾರಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಅಗ್ನಿಶಾಮಕ ಸಿಬ್ಬಂದಿ ಯುವಕರ ಶೋಧ ಕಾರ್ಯ ನಡೆಸಿದ್ದಾರೆ. ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.