ETV Bharat / state

ಸಿಕ್ಕಸಿಕ್ಕವರ ಮೇಲೆರಗಿ ದಾಳಿ ನಡೆಸಿದ ತೋಳ: ನಾಲ್ವರಿಗೆ ಗಂಭೀರ ಗಾಯ

ಮಸ್ಕಿ ತಾಲೂಕಿನ ಗ್ರಾಮವೊಂದರಲ್ಲಿ ತೋಳವೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ತೋಳಕ್ಕೆ ಹುಚ್ಚು ಹಿಡಿದಿತ್ತು ಎನ್ನಲಾಗಿದ್ದು ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ತೋಳವನ್ನ ಹುಡುಕಿ ಕೊಂದುಹಾಕಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಬಾಲಕ ಸಹ ಸೇರಿದ್ದಾನೆ.

author img

By

Published : Oct 28, 2020, 5:47 PM IST

Wolf Attack In Raichur
ಸಿಕ್ಕಸಿಕ್ಕವರ ಮೇಲೆ ಎರಗಿ ದಾಳಿ ನಡೆಸಿದ ತೋಳ

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಇಲಾಲಪುರ ಗ್ರಾಮದಲ್ಲಿ ತೋಳ ದಾಳಿ ನಡೆಸಿದ ಪರಿಣಾಮ ಓರ್ವ ಬಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Wolf Attack In Raichur
ತೋಳ ದಾಳಿಗೆ ಸಿಲುಕಿದ ಗಾಯಾಳು

ರೆಡ್ಡಪ್ಪ ಬಸನಗೌಡ, ಶಿವಪ್ಪ ಬಸಪ್ಪ, ಮೀನಾಕ್ಷಿ ಮಲ್ಲಪ್ಪ, ಬಾಲಕ ಅಭಿಷೇಕ್ ಸಿದ್ದಪ್ಪ ಗಾಯಗೊಂಡಿದ್ದು ಚಿಕಿತ್ಸೆಗೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೋಳ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ತೋಳವನ್ನ ಹುಡುಕಿ ಕೊಂದುಹಾಕಿದ್ದಾರೆ.

Wolf Attack In Raichur
ತೋಳ ದಾಳಿಗೆ ಸಿಲುಕಿದ ಗಾಯಾಳು

ಇಲಾಲಪುರ ಗ್ರಾಮದ ದಾಳಿಗೂ ಮುನ್ನ, ಚಿಲ್ಕರಾಗಿ ಗ್ರಾಮದಲ್ಲಿ ತೋಳ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ತೋಳವನ್ನ ಸೆರೆ ಹಿಡಿಯುವುದಕ್ಕೆ ಕೊಡಲಿ, ಕಟ್ಟಿಗೆ ಹಿಡಿದುಕೊಂಡು ಶೋಧ ನಡೆಸಿದ್ದರು. ಈ ನಡುವೆ ಚಿಲ್ಕರಾಗಿ ಗ್ರಾಮದ ಪಕ್ಕದಲ್ಲಿರುವ ಇಲಾಲಪುರ ಗ್ರಾಮಕ್ಕೆ ನುಗ್ಗಿ ನಾಲ್ವರ ಮೇಲೆ ತೋಳ ದಾಳಿ ನಡೆಸಿದೆ. ತೋಳಕ್ಕೆ ಹುಚ್ಚು ಹಿಡಿದಿತ್ತು ಎನ್ನಲಾಗಿದ್ದು ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Wolf Attack In Raichur
ಆತಂಕಗೊಂಡ ಗ್ರಾಮಸ್ಥರಿಂದ ತೋಳ ಶೋಧನೆ

ಕಳೆದ ವರ್ಷ ಇದೇ ಗ್ರಾಮದಲ್ಲಿ ತೋಳದ ದಾಳಿಯಿಂದ ಓರ್ವ ಮೃತಪಟ್ಟು 11 ಜನ ಗಾಯಗೊಂಡಿದ್ದರು. ಆಗಲೂ ಸಹ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಹೊಡೆದು ಸಾಯಿಸಿದ್ದರು.

Wolf Attack In Raichur
ಸತ್ತುಬಿದ್ದ ತೋಳ

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಇಲಾಲಪುರ ಗ್ರಾಮದಲ್ಲಿ ತೋಳ ದಾಳಿ ನಡೆಸಿದ ಪರಿಣಾಮ ಓರ್ವ ಬಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Wolf Attack In Raichur
ತೋಳ ದಾಳಿಗೆ ಸಿಲುಕಿದ ಗಾಯಾಳು

ರೆಡ್ಡಪ್ಪ ಬಸನಗೌಡ, ಶಿವಪ್ಪ ಬಸಪ್ಪ, ಮೀನಾಕ್ಷಿ ಮಲ್ಲಪ್ಪ, ಬಾಲಕ ಅಭಿಷೇಕ್ ಸಿದ್ದಪ್ಪ ಗಾಯಗೊಂಡಿದ್ದು ಚಿಕಿತ್ಸೆಗೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೋಳ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ತೋಳವನ್ನ ಹುಡುಕಿ ಕೊಂದುಹಾಕಿದ್ದಾರೆ.

Wolf Attack In Raichur
ತೋಳ ದಾಳಿಗೆ ಸಿಲುಕಿದ ಗಾಯಾಳು

ಇಲಾಲಪುರ ಗ್ರಾಮದ ದಾಳಿಗೂ ಮುನ್ನ, ಚಿಲ್ಕರಾಗಿ ಗ್ರಾಮದಲ್ಲಿ ತೋಳ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ತೋಳವನ್ನ ಸೆರೆ ಹಿಡಿಯುವುದಕ್ಕೆ ಕೊಡಲಿ, ಕಟ್ಟಿಗೆ ಹಿಡಿದುಕೊಂಡು ಶೋಧ ನಡೆಸಿದ್ದರು. ಈ ನಡುವೆ ಚಿಲ್ಕರಾಗಿ ಗ್ರಾಮದ ಪಕ್ಕದಲ್ಲಿರುವ ಇಲಾಲಪುರ ಗ್ರಾಮಕ್ಕೆ ನುಗ್ಗಿ ನಾಲ್ವರ ಮೇಲೆ ತೋಳ ದಾಳಿ ನಡೆಸಿದೆ. ತೋಳಕ್ಕೆ ಹುಚ್ಚು ಹಿಡಿದಿತ್ತು ಎನ್ನಲಾಗಿದ್ದು ಕವಿತಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Wolf Attack In Raichur
ಆತಂಕಗೊಂಡ ಗ್ರಾಮಸ್ಥರಿಂದ ತೋಳ ಶೋಧನೆ

ಕಳೆದ ವರ್ಷ ಇದೇ ಗ್ರಾಮದಲ್ಲಿ ತೋಳದ ದಾಳಿಯಿಂದ ಓರ್ವ ಮೃತಪಟ್ಟು 11 ಜನ ಗಾಯಗೊಂಡಿದ್ದರು. ಆಗಲೂ ಸಹ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಹೊಡೆದು ಸಾಯಿಸಿದ್ದರು.

Wolf Attack In Raichur
ಸತ್ತುಬಿದ್ದ ತೋಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.