ETV Bharat / state

ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದ್ರೆ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ: ಟಿಡಿಪಿ ಮುಖಂಡ - tdp head thikkareddi

ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮೂರು ರಾಜಧಾನಿಗಳನ್ನು ಮಾಡುವ ಉದ್ದೇಶಕ್ಕೆ ಸಮಿತಿ ರಚನೆ ಮಾಡಲಾಗಿದೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ವಿಶಾಖಪಟ್ಟಣಂ ಅನ್ನು ರಾಜಧಾನಿ ಮಾಡುವುದಾದರೆ, ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ಬಿಡಿ ಎಂದು ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಡಿಪಿ ಮುಖಂಡ ತಿಕ್ಕಾರೆಡ್ಡಿ
ಟಿಡಿಪಿ ಮುಖಂಡ ತಿಕ್ಕಾರೆಡ್ಡಿ
author img

By

Published : Jan 2, 2020, 12:02 PM IST

ರಾಯಚೂರು: ಆಂಧ್ರ ಪ್ರದೇಶದ ಭಾಗವಾಗಿರುವ ಮಂತ್ರಾಲಯವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮೂರು ರಾಜಧಾನಿಗಳನ್ನು ಮಾಡುವ ಉದ್ದೇಶಕ್ಕೆ ಸಮಿತಿ ರಚನೆ ಮಾಡಲಾಗಿದೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ಒಂದು ರಾಜಧಾನಿಗೆ ಗತಿಯಿಲ್ಲ, ಹಾಗಿದ್ದ ಮೇಲೆ ಮೂರು ರಾಜಧಾನಿ ಮಾಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.

ಮಂತ್ರಾಲಯವನ್ನ ಕರ್ನಾಟಕಕ್ಕೆ ಸೇರಿಸಲು ಆಗ್ರಹ

ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಒತ್ತಾಯಿಸಿದ್ದಾರೆ. ಯಾಕಂದ್ರೆ ಮಂತ್ರಾಲಯದಿಂದ ವಿಶಾಖಪಟ್ಟಣಂಗೆ ತೆರಳಲು 2 ದಿನ ಬೇಕು. ಅದರ ಬದಲಿಗೆ ಬೆಂಗಳೂರೇ ಹತ್ತಿರವಾಗುತ್ತದೆ, ಅಲ್ಲದೇ ರಾಯಚೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರರು ಸಹ ನೆಲೆಸಿದ್ದಾರೆ ಎಂದರು.

ಮಂತ್ರಾಲಯ
ಮಂತ್ರಾಲಯ (ಸಂಗ್ರಹ ಚಿತ್ರ)

ನಾವು ಆಂಧ್ರದಲ್ಲಿ ಇದ್ದರೂ ನಮ್ಮ ಭಾಷೆ ಇಂದಿಗೂ ಕನ್ನಡವಾಗಿದೆ. ಜನ ಕೇಳುತ್ತಿರುವುದು ರಾಜಧಾನಿಯಲ್ಲ, ಬದಲಿಗೆ ಅಭಿವೃದ್ಧಿ. ಜೊತೆಗೆ ರೈತರಿಗೆ ನೀರು ಕೊಡಿ ಸಾಕು. ಈಗಾಗಲೇ ಮೂರು ರಾಜಧಾನಿಗಳು ಬದಲಾಗಿವೆ, ಕರ್ನೂಲ್, ಹೈದ್ರಾಬಾದ್, ಅಮರಾವತಿ. ಇದೀಗ ವಿಶಾಖಪಟ್ಟಣಂ ಎಂದು ಹೇಳುತ್ತಿದ್ದೀರಿ. ಹೀಗಾಗಿ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ನೆಮ್ಮದಿಯಾಗಿ ಇರುತ್ತೇವೆ ಎಂದು ಒತ್ತಾಯಿಸುವ ಮೂಲಕ ಜಗನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂತ್ರಾಲಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ವಿಶಾಖಪಟ್ಟಣಂ ರಾಜಧಾನಿಗೆ ವಿರೋಧ ವ್ಯಕ್ತಪಡಿಸಿದ್ರು.

ರಾಯಚೂರು: ಆಂಧ್ರ ಪ್ರದೇಶದ ಭಾಗವಾಗಿರುವ ಮಂತ್ರಾಲಯವನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮೂರು ರಾಜಧಾನಿಗಳನ್ನು ಮಾಡುವ ಉದ್ದೇಶಕ್ಕೆ ಸಮಿತಿ ರಚನೆ ಮಾಡಲಾಗಿದೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ಒಂದು ರಾಜಧಾನಿಗೆ ಗತಿಯಿಲ್ಲ, ಹಾಗಿದ್ದ ಮೇಲೆ ಮೂರು ರಾಜಧಾನಿ ಮಾಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.

ಮಂತ್ರಾಲಯವನ್ನ ಕರ್ನಾಟಕಕ್ಕೆ ಸೇರಿಸಲು ಆಗ್ರಹ

ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಒತ್ತಾಯಿಸಿದ್ದಾರೆ. ಯಾಕಂದ್ರೆ ಮಂತ್ರಾಲಯದಿಂದ ವಿಶಾಖಪಟ್ಟಣಂಗೆ ತೆರಳಲು 2 ದಿನ ಬೇಕು. ಅದರ ಬದಲಿಗೆ ಬೆಂಗಳೂರೇ ಹತ್ತಿರವಾಗುತ್ತದೆ, ಅಲ್ಲದೇ ರಾಯಚೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರರು ಸಹ ನೆಲೆಸಿದ್ದಾರೆ ಎಂದರು.

ಮಂತ್ರಾಲಯ
ಮಂತ್ರಾಲಯ (ಸಂಗ್ರಹ ಚಿತ್ರ)

ನಾವು ಆಂಧ್ರದಲ್ಲಿ ಇದ್ದರೂ ನಮ್ಮ ಭಾಷೆ ಇಂದಿಗೂ ಕನ್ನಡವಾಗಿದೆ. ಜನ ಕೇಳುತ್ತಿರುವುದು ರಾಜಧಾನಿಯಲ್ಲ, ಬದಲಿಗೆ ಅಭಿವೃದ್ಧಿ. ಜೊತೆಗೆ ರೈತರಿಗೆ ನೀರು ಕೊಡಿ ಸಾಕು. ಈಗಾಗಲೇ ಮೂರು ರಾಜಧಾನಿಗಳು ಬದಲಾಗಿವೆ, ಕರ್ನೂಲ್, ಹೈದ್ರಾಬಾದ್, ಅಮರಾವತಿ. ಇದೀಗ ವಿಶಾಖಪಟ್ಟಣಂ ಎಂದು ಹೇಳುತ್ತಿದ್ದೀರಿ. ಹೀಗಾಗಿ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ನೆಮ್ಮದಿಯಾಗಿ ಇರುತ್ತೇವೆ ಎಂದು ಒತ್ತಾಯಿಸುವ ಮೂಲಕ ಜಗನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂತ್ರಾಲಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ವಿಶಾಖಪಟ್ಟಣಂ ರಾಜಧಾನಿಗೆ ವಿರೋಧ ವ್ಯಕ್ತಪಡಿಸಿದ್ರು.

Intro:ಸ್ಲಗ್: ಮಂತ್ರಾಲಯವನ್ನ ಕರ್ನಾಟಕಕ್ಕೆ ಸೇರಿಸಲು ಟಿಡಿಪಿ ಮುಖಂಡ ಆಗ್ರಹ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 02-01-2020
ಸ್ಥಳ: ರಾಯಚೂರು
ಆಂಕರ್: ಆಂಧ್ರದ ಮಂತ್ರಾಲಯವನ್ನ ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ.Body: ರಾಯಚೂರು ಮಂತ್ರಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮೂರು ರಾಜಧಾನಿಗಳು ಮಾಡುವ ಉದ್ದೇಶಕ್ಕೆ ಸಮಿತಿ ರಚನೆ ಮಾಡಲಾಗಿದೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ಒಂದು ರಾಜಧಾನಿಗೆ ಗತಿಯಿಲ್ಲ ಇನ್ನೂ ಮೂರು ರಾಜಧಾನಿ ಮಾಡುವ ಅವಶ್ಯಕತೆ ಏನೀದೆ. ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಒತ್ತಾಯಿಸಿದ್ದಾರೆ. ಯಾಕೆಂದ್ರೆ ಮಂತ್ರಾಲಯದಿಂದ ವಿಶಾಖಪಟ್ಟಣಂಗೆ ತೆರಳಲು ೨ ದಿನ ಬೇಕು. ಅದರ ಬದಲಿಗೆ ಕರ್ನಾಟಕಕ್ಕೆ ಬೆಂಗಳೂರೇ ಹತ್ತಿರವಾಗುತ್ತದೆ, ಅಲ್ಲದೇ ಕನ್ನಡಿಗಾರರು ಸಹ ನೆಲೆಸಿದ್ದಾರೆ. ನಾವು ಆಂಧ್ರ ದಲ್ಲಿ ಇದ್ದರೂ ನಮ್ಮ ಭಾಷೆ ಇಂದಿಗೂ ಕನ್ನಡವಾಗಿದೆ. ಜನ ಕೇಳುತ್ತಿರುವುದು ರಾಜಧಾನಿಯಲ್ಲ ಬದಲಿಗೆ ಅಭಿವೃದ್ಧಿ ಮತ್ತು ರೈತರಿಗೆ ನೀರು ಕೊಡಿ ಸಾಕು. ಈಗಾಗಲೇ ಮೂರು ರಾಜಧಾನಿಗಳು ಬದಲಾಗಿವೆ, ಕರ್ನೂಲ್, ಹೈದ್ರಾಬಾದ್, ಅಮರಾವತಿ ಇದೀಗ ವಿಶಾಖಪಟ್ಟಣಂ ಎಂದು ಹೇಳುತ್ತೀದಿರಿ. ಹೀಗಾಗಿ ಮಂತ್ರಾಲಯವನ್ನ ಕರ್ನಾಟಕ್ಕೆ ಸೇರಿಸಿ ನೆಮ್ಮದಿಯಾಗಿ ಇರುತ್ತೇವೆ ಎಂದು ಒತ್ತಾಯಿಸುವ ಮೂಲಕ ಜಗನ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂತ್ರಾಲಯದಲ್ಲಿ ಪ್ರತಿಭಟನೆ ನಡೆಸುವ ಮೂಲಕ ವಿಶಾಖಪಟ್ಟಣಂ ರಾಜಧಾನಿಗೆ ವಿರೋಧ ವ್ಯಕ್ತಪಡಿಸಿದ್ರು. Conclusion:
ಬೈಟ್.1: ತಿಕ್ಕಾರೆಡ್ಡಿ, ಟಿಡಿಪಿ ಮುಖಂಡ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.