ರಾಯಚೂರು: ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ಸರಬರಾಜು ಆಗಬೇಕಿದ್ದ ಕಲ್ಲಿದ್ದಲಿನ ಬದಲಾಗಿ ಕಲ್ಲು ಪೂರೈಕೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿದೆ.
ವಿದ್ಯುತ್ ಉತ್ಪಾದನೆಗಾಗಿ ಆರ್ಟಿಪಿಎಸ್ಗೆ ರೈಲಿನ ಮೂಲಕ ಅಪಾರ ಪ್ರಮಾಣದಲ್ಲಿ ಕಲ್ಲಿದ್ದಲು ಸಪ್ಲೈ ಆಗುತ್ತದೆ. ಅದನ್ನು ಆರ್ಟಿಪಿಎಸ್ ವ್ಯಾಗನ್ನಲ್ಲಿ ಹಾಕುವ ಮೂಲಕ ಶುದ್ಧೀಕರಿಸಿ, ವಿದ್ಯುತ್ ಪೂರೈಕೆ ಘಟಕಕ್ಕೆ ರವಾನಿಸಲಾಗುತ್ತದೆ. ಆದ್ರೆ, ವ್ಯಾಗನ್ಗೆ ಹಾಕಲಾದ ಕಲ್ಲಿದ್ದಲು ಬಿಳಿಯ ಬಣ್ಣಕ್ಕೆ ತಿರುಗಿದೆ. ಹಾಗಾಗಿ ಕಲ್ಲು ಪೂರೈಕೆಯಾಗಿದೆಯಾ? ಎನ್ನುವ ಪ್ರಶ್ನೆ ಉಂಟು ಮಾಡಿದೆ.
ಕಲ್ಲಿದ್ದಲು ಬದಲಾಗಿ ಕಲ್ಲುಗಳನ್ನು ಪೂರೈಕೆ ಮಾಡುವ ಮೂಲಕ ಕೆಪಿಸಿ ಹಣ ವಸೂಲಿ ಮಾಡುತ್ತಿದೆಯಾ ಎನ್ನುವ ಸಂಶಯಕ್ಕೂ ಕಾರಣವಾಗಿದೆ. ಈ ಬಗ್ಗೆ ಆರ್ಟಿಪಿಎಸ್ ಇ.ಡಿ. ವೇಣುಗೋಪಾಲ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.