ETV Bharat / state

ಉಚಿತವಾಗಿ 100 ಪರಿಸರ ಸ್ನೇಹಿ ಗಣಪ ನೀಡಲು ಮುಂದಾದ್ರು ರಾಯಚೂರು ಎಸ್​ಪಿ - kannadanews

ರಾಯಚೂರು ಎಸ್​ಪಿ ಡಾ. ಸಿ.ಬಿ. ವೇದಮೂರ್ತಿ ಅವರು ಗಣೇಶ ಹಬ್ಬಕ್ಕೆ ಸುಮಾರು 100 ಪರಿಸರ ಸ್ನೇಹಿ ಮೂರ್ತಿಗಳನ್ನ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ.

ಪರಿಸರ ಸ್ನೇಹಿ ಗಣಪ ನೀಡಲು ಮುಂದಾದ ಎಸ್ಪಿ
author img

By

Published : Aug 23, 2019, 7:56 PM IST

ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಗಣೇಶ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರೀಸ್ ದಿಂದ ತಯಾರಾದ ಗಣೇಶನ ಬದಲು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಮಣ್ಣಿನಿಂದ ತಯಾರಿಸಿದ 100 ಗಣೇಶ ಮೂರ್ತಿಗಳನ್ನ ಸಾರ್ವಜನಿಕರಿಗೆ ನೀಡಲು ಎಸ್​ಪಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿದ ಗಣೇಶ ಮೂರ್ತಿಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ ನೀರಿನಲ್ಲಿ ಮೂರ್ತಿಗಳ ನಿಮಜ್ಜನ ಮಾಡುವುದರಿಂದ ನೀರು ಕಲುಷಿತವಾಗುತ್ತಿದೆ. ಇದನ್ನು ಅರಿತು ಮಣ್ಣಿನಿಂದ ತಯಾರಿಸಲಾದ ನೀರಿನಲ್ಲಿ ಕರಗುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈಗಗಾಲೇ ನಗರದ ಪಟೇಲ್ ರಸ್ತೆಯಲ್ಲಿರುವ ರಾಮಸಿಂಗ್ ಎಂಬ ಕಲಾವಿದರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ನೀಡಿದ್ದು, ಅವುಗಳನ್ನು ಡಾ. ಸಿ.ಬಿ. ವೇದಮೂರ್ತಿ ಉಚಿತವಾಗಿ ವಿತರಿಸುತ್ತಿದ್ದಾರೆ.

ಪರಿಸರ ಸ್ನೇಹಿ ಗಣೇಶ್​ ನೀಡಲು ಮುಂದಾದ ಎಸ್ಪಿ

ಇದೀಗ ವಿತರಣೆ ಮಾಡಲಾಗುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಲ್ಲಿ ಹಿರೇಕಾಯಿ, ಬೆಂಡೆಕಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳ ಬೀಜಗಳನ್ನು ಹಾಕಲಾಗಿದ್ದು, ಅಲಂಕಾರಿಕ ಸಸಿ ಬೆಳೆಸುವ ಪಾಟ್​ನಲ್ಲಿ ಗಣೇಶ ಮೂರ್ತಿಯನ್ನಿಟ್ಟು ನೀರು ಹಾಕಿ ನಿಮಜ್ಜನ ಮಾಡಿದರೆ, ಪರಿಸರ ಹಾನಿ ತಪ್ಪುವುದರ ಜತೆಗೆ ತರಕಾರಿ ಸಸಿಗಳು ಬೆಳೆದು ಮುಂದಿನ ದಿನಗಳಲ್ಲಿ ಮನೆಗೆ ಸಹಾಯಕವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸದ್ಯ ಎಸ್ಪಿಯವರ ಈ ಹೊಸ ಐಡಿಯಾಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಗಣೇಶ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರೀಸ್ ದಿಂದ ತಯಾರಾದ ಗಣೇಶನ ಬದಲು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಮಣ್ಣಿನಿಂದ ತಯಾರಿಸಿದ 100 ಗಣೇಶ ಮೂರ್ತಿಗಳನ್ನ ಸಾರ್ವಜನಿಕರಿಗೆ ನೀಡಲು ಎಸ್​ಪಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿದ ಗಣೇಶ ಮೂರ್ತಿಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ ನೀರಿನಲ್ಲಿ ಮೂರ್ತಿಗಳ ನಿಮಜ್ಜನ ಮಾಡುವುದರಿಂದ ನೀರು ಕಲುಷಿತವಾಗುತ್ತಿದೆ. ಇದನ್ನು ಅರಿತು ಮಣ್ಣಿನಿಂದ ತಯಾರಿಸಲಾದ ನೀರಿನಲ್ಲಿ ಕರಗುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈಗಗಾಲೇ ನಗರದ ಪಟೇಲ್ ರಸ್ತೆಯಲ್ಲಿರುವ ರಾಮಸಿಂಗ್ ಎಂಬ ಕಲಾವಿದರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ನೀಡಿದ್ದು, ಅವುಗಳನ್ನು ಡಾ. ಸಿ.ಬಿ. ವೇದಮೂರ್ತಿ ಉಚಿತವಾಗಿ ವಿತರಿಸುತ್ತಿದ್ದಾರೆ.

ಪರಿಸರ ಸ್ನೇಹಿ ಗಣೇಶ್​ ನೀಡಲು ಮುಂದಾದ ಎಸ್ಪಿ

ಇದೀಗ ವಿತರಣೆ ಮಾಡಲಾಗುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಲ್ಲಿ ಹಿರೇಕಾಯಿ, ಬೆಂಡೆಕಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳ ಬೀಜಗಳನ್ನು ಹಾಕಲಾಗಿದ್ದು, ಅಲಂಕಾರಿಕ ಸಸಿ ಬೆಳೆಸುವ ಪಾಟ್​ನಲ್ಲಿ ಗಣೇಶ ಮೂರ್ತಿಯನ್ನಿಟ್ಟು ನೀರು ಹಾಕಿ ನಿಮಜ್ಜನ ಮಾಡಿದರೆ, ಪರಿಸರ ಹಾನಿ ತಪ್ಪುವುದರ ಜತೆಗೆ ತರಕಾರಿ ಸಸಿಗಳು ಬೆಳೆದು ಮುಂದಿನ ದಿನಗಳಲ್ಲಿ ಮನೆಗೆ ಸಹಾಯಕವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸದ್ಯ ಎಸ್ಪಿಯವರ ಈ ಹೊಸ ಐಡಿಯಾಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Intro:ಸ್ಲಗ್: ಸಾರ್ವಜನಿಕರಿಗೆ ಉಚಿತವಾಗಿ ನೀಡಲು 100 ಪರಿಸರ ಸ್ನೇಹಿ ಗಣಪ ನೀಡಲು ಮುಂದಾದ ಎಸ್ಪಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 23-೦8-2019
ಸ್ಥಳ: ರಾಯಚೂರು
ಆಂಕರ್: ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಅ ನಿಟ್ಟಿನಲ್ಲಿ ಪರಿಸರ ಮೇಲೆ ದುಷ್ಪಪರಿಣಾಮ ಬಿರುವಂತಹ ವಸ್ತುಗಳ ಬಳಕೆ ಸಹ ಮಾಡಬಾರದು. ಇದೀಗ ಗಣೇಶ ಚತುರ್ಥಿ ಹಬ್ಬ ಹತ್ತಿರವಾಗುತ್ತಿದ್ದು, ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವ ಜತೆಗೆ ಪರಿಸರ ಸ್ನೇಹಿ ಗಣಪಗಳನ್ನ ಪ್ರತಿಷ್ಠಾಪನೆ ಉತ್ತೇಜಿಸಲು ಹಿರಿಯ ಅಧಿಕಾರಿಯೊಬ್ಬರು ಮುಂದಾಗಿದ್ದಾರೆ. ಯಾರು ಹಿರಿಯ ಅಧಿಕಾರಿ, ಏನು ಸ್ಪೇಷಲ್ ಇದೆ ಪರಿಸರ ಸ್ನೇಹಿ ಗಣಪ ಅಂತಿರಾ..ಹಾಗಿದ್ರೆ ಈ ಸ್ಟೋರಿ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾಯಚೂರಿಗೆ ಬಂದ ಡಾ.ಸಿ.ಬಿ.ವೇದಮೂರ್ತಿ ಒಂದಲ್ಲ ಒಂದು ರೀತಿಯಲ್ಲಿ ನಾಗರಿಕರಿಗೆ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಗಣೇಶ ಚತುರ್ಥಿ ಹಬ್ಬ ಬರುತ್ತಿರುವ ಹಿನ್ನಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ದಿಂದ ತಯಾರು ಮಾಡಿದ ಗಣೇಶವನ್ನ ಪ್ರತಿಷ್ಠಾಪಿಸದೆ, ಪರಿಸರ ಮೇಲೆ ಹಾನಿಯಾಗದ ಪರಿಸರ ಸ್ನೇಹಿ ಗಣಪ ಮೂರ್ತಿಗಳನ್ನ ಪ್ರತಿಷ್ಠಾಪಿಸುವಂತೆ ಜನರಿಗೆ ಮನವಿ ಮಾಡಿ, ತಾವೇ 100 ಮಣ್ಣಿನಿಂದ ತಯಾರು ಮಾಡಿದ ಗಣೇಶ ಮೂರ್ತಿಗಳನ್ನ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ವಾಯ್ಸ್ ಓವರ್.2: ಇನ್ನೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಮಾಡಿದ ಗಣೇಶ ಮೂರ್ತಿಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ ನೀರಿನಲ್ಲಿ ಮೂರ್ತಿಗಳ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತವಾಗುತ್ತಿದೆ. ಇದನ್ನು ಅರಿತುಕೊಂಡು ಮಣ್ಣಿನಿಂದ ತಯಾರಿಸಲಾದ ನೀರಿನಲ್ಲಿ ಕರಗುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈಗಗಾಲೇ ನಗರದ ಪಟೇಲ್ ರಸ್ತೆಯಲ್ಲಿರುವ ರಾಮಸಿಂಗ್ ಎಂಬ ಕಲಾವಿದರು ಪರಿಸರ ಸ್ನೇಹಿ 100 ಗಣೇಶ ಮೂರ್ತಿಗಳನ್ನು ತಯಾರಿಸಿ ನೀಡಿದ್ದು, ಬೇರೆಯವರಿಗೆ 100 ರೂ.ಗೆ ಮಾರಾಟ ಮಾಡುವ ಮೂರ್ತಿಗಳನ್ನು ಎಸ್ಪಿಗೆ ತಲಾ 60 ರೂ.ಗಳಿಗೆ ನೀಡಿದ್ದಾರೆ. ಅವುಗಳನ್ನು ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ವಾಯ್ಸ್ ಓವರ್.3: ಜಿಲ್ಲೆಗೆ ನೂತನವಾಗಿ ಎಸ್ಪಿಯಾಗಿ ಬಂದ್ಮೇಲೆ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೆ ಒಂದೊಂದು ಸಸಿ ನೆಟ್ಟು, ಪ್ರತಿ ಭಾನುವಾರ ಸಂಘ-ಸಂಸ್ಥೆಗಳ ಸಹಕಾರದಿಂದ ನಾನಾ ಸ್ಥಳಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಮೇಲೆ ಇರುವ ತಮ್ಮ ಮುತುವರ್ಜಿಯನ್ನ ತೋರಿಸಿದ್ರು. ಇದೀಗ ವಿತರಣೆ ಮಾಡಲಾಗುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯಲ್ಲಿಯೂ ಸಹ ಈರೇಕಾಯಿ, ಬೆಂಡೆಕಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳ ಬೀಜಗಳನ್ನು ಹಾಕಲಾಗಿದ್ದು, ಅಲಂಕಾರಿಕ ಸಸಿ ಬೆಳೆಸುವ ಪಾಟ್ನಲ್ಲಿ ಗಣೇಶ ಮೂರ್ತಿಯನ್ನಿಟ್ಟು ನೀರು ಹಾಕಿ ವಿಸರ್ಜನೆ ಮಾಡಿದರೆ, ಪರಿಸರ ಹಾನಿ ತಪ್ಪುವುದರ ಜತೆಗೆ ತರಕಾರಿ ಸಸಿಗಳು ಬೆಳೆದು ಮುಂದಿನ ದಿನಗಳಲ್ಲಿ ಮನೆಗೆ ಸಹಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸದ್ಯ ಎಸ್ಪಿಯವರ ಈ ಹೊಸ ಐಡಿಯಾಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲಾರೂ ಸಹ ಪರಿಸರ ಸ್ನೇಹಿ ಗಣಪ ಮೂರ್ತಿಗಳನ್ನ ಪ್ರತಿಷ್ಠಾಪಿಸುವ ಮೂಲಕ ಪರಿಸರಕ್ಕೆ ಧಕ್ಕೆಯಾಗದಂತೆ ಹಬ್ಬವನ್ನ ಆಚರಿಸಬೇಕಾಗಿದೆ.
Conclusion:ಬೈಟ್.1: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.