ETV Bharat / state

ಜಿಲ್ಲೆಯಲ್ಲಿ ಮುಚ್ಚಿದ ಜನ ಸ್ಪಂದನೆಯ ಬಾಗಿಲು: ಜನರ ಗೋಳು ಕೇಳೋರು ಯಾರು

ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನ ಸ್ಪಂದನ ಸಭೆಯಿಂದಾಗಿ ಜನರ ಕಷ್ಟಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ನಿವಾರಣೆಗೊಳ್ಳುತ್ತಿತ್ತು. ಇದರಿಂದ ಅಧಿಕಾರಿಗಳ ವಿಳಂಬ ನೀತಿ ಸೇರಿದಂತೆ ಅನೇಕ ಸಮಸ್ಯಗಳಿಗೆ ಪರಿಹಾರ ವೇದಿಕೆಯಾಗಿತ್ತು. ಸದ್ಯ ನೂತನ ಜಿಲ್ಲಾಧಿಕಾರಿ ಆಗಮನದಿಂದ ಜನರ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.

author img

By

Published : Sep 27, 2019, 9:29 PM IST

ಜನ ಸ್ಪಂದನ ಸಭೆ ಸ್ಥಗಿತ

ರಾಯಚೂರು : ಜಿಲ್ಲೆಯ ಜನರ ಕುಂದು ಕೊರತೆಗಳ ನಿವಾರಣೆಗೆ ಜಿಲ್ಲಾಡಳಿತ ದಿಂದ ನಡೆಸಲಾಗುತ್ತಿದ್ದ ಜಿಲ್ಲಾ ಮಟ್ಟದ ಜನ ಸ್ಪಂದನ ಸಭೆ ಕಳೆದ ಕೆಲ ತಿಂಗಳಿನಿಂದ ನಡೆಯದ ಕಾರಣ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗದಂತಾಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನ ಸ್ಪಂದನ ಸಭೆ ಜನರ ಕಷ್ಟಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ನಿವಾರಣೆಗೊಳ್ಳುತ್ತಿತ್ತು. ಇದರಿಂದ ಅಧಿಕಾರಿಗಳ ವಿಳಂಬ ನೀತಿ ಸೇರಿದಂತೆ ಅನೇಕ ಸಮಸ್ಯಗಳಿಗೆ ಪರಿಹಾರ ವೇದಿಕೆಯಾಗಿತ್ತು. ಸದ್ಯ ನೂತನ ಜಿಲ್ಲಾಧಿಕಾರಿಯ ಆಗಮನದಿಂದ ಜನರ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.

ಪ್ರತಿ ಮಂಗಳವಾರ ನಡೆಯುತಿದ್ದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ದೂರುದಾರರ ಸಮಸ್ಯೆಗೆ ಸ್ಪಂದಿಸಿ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತಿತ್ತು. ಜಿಲ್ಲಾಧಿಕಾರಿ ಡಾ. ಗೌತಮ್​ ಬಗಾದಿ ಇದ್ದ ಸಮಯದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಜನಸ್ಪಂದನ ಸಭೆಯಲ್ಲಿ ಜಿಲ್ಲೆಯ ಹಲವಾರು ಜನರು ದೂರು ಸಲ್ಲಿಸುತಿದ್ದರು.

ಜನ ಸ್ಪಂದನ ಸಭೆ ಸ್ಥಗಿತ

ಈ ಸಭೆಯಲ್ಲಿ ಕಂದಾಯ ಇಲಾಖೆಯ ಭೂ ವಿವಾಧ, ಹಣ‌ಪತ್ರ, ಖಾತಾ ನಕಲು‌ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ‌ ಸಮಸ್ಯೆ, ರಸ್ತೆ, ಚರಂಡಿ, ಆಸ್ತಿ, ಉದ್ಯೋಗ, ಸರಕಾರದಿಂದ ಸಾಲ‌ ಸೌಲಭ್ಯ, ವಿದ್ಯುತ್, ನೀರು ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಮೊರೆಯಿಡುತ್ತಿದ್ದರು. ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ತರಾಟೆಗೆ ತೆಗೆದುಕೊಂಡು ಪರಿಹಾರ ನೀಡುತ್ತಿದ್ದರು.

ಡಿಸಿ ಗೌತಮ್ ಅವರ ವರ್ಗಾವಣೆಯ ನಂತರ ಬಂದ ಶರತ್ .ಬಿ ಅವರು ತಿಂಗಳ ಪ್ರತಿ ಮಂಗಳವಾರ ನಡೆಯುತಿದ್ದ ಜನ ಸ್ಪಂದನ ಸಭೆಯನ್ನು ತಿಂಗಳ ಮೂರನೇ ಮಂಗಳವಾರ ನಡೆಸಲು‌‌ ಶುರುಮಾಡಿದರು. ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ನೀತಿ ಸಂಹಿತೆ, ಚುನಾವಣೆಯ ತಯಾರಿಯಲ್ಲಿ ‌ಬ್ಯುಸಿಯಾಗಿ ಜನಸ್ಪಂದನೆ ಸಭೆ ನಡೆಸಲು ನಿರ್ಲಕ್ಷ್ಯವಹಿಸಿದರು. ಇತ್ತೀಚಿಗೆ ಅವರ ವರ್ಗಾವಣೆಯಾಯಿತು.

ಇತ್ತೀಚಿಗೆ ಡಿಸಿಯಾಗಿ‌ ಬಂದ ಆರ್. ವೆಂಕಟೇಶ ಕುಮಾರ ಅವರು ಈವರೆಗೆ ಒಂದು ಸಭೆ ಮಾಡಿಲ್ಲ. ಇದರಿಂದ ಜನಸ್ಪಂದನ ಸಭೆಯ ಕಟಕಟೆ ಮುಚ್ಚಿಹೋದಂತಾಗಿದೆ. ರಾಜ್ಯಮಟ್ಟದ ದೂರುಗಳಿದ್ದರೆ ರಾಜ್ಯ ಸರಕಾರದ ಗಮನಕ್ಕೆ ತರುವ ಕೆಲಸವೂ ನಡೆಯುತಿತ್ತು . ಇದರಿಂದ ಸಿಎಂ‌‌ ಅವರ ಗೃಹ ಕಚೇರಿ ಕೃಷ್ಣಾಕ್ಕೆ ಬರುತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗಿತ್ತು.

ಜನಸ್ಪಂದನ ಸಭೆ ಕುರಿತು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರನ್ನು ಈಟಿವಿ ಭಾರತ ದೂರವಾಣಿ ಸಂಪರ್ಕ ಮಾಡಿ ಕೇಳಿದರೆ. ಜನ ಸಂಪರ್ಕ ಸಭೆಯ ಬಗ್ಗೆ ಮಾಹಿತಿಯಿಲ್ಲ. ಜನರ ದೂರುಗಳನ್ನು ಆಲಿಸಲು ಸಮಯ ನಿಗದಿ ಮಾಡಿ ಸ್ಪಂದಿಸುತಿದ್ದೇನೆ. ಸರಕಾರ ಬದಲಾದ್ರೂ ಅಧಿಕಾರಿಗಳ‌ ಕೆಲಸ ಬದಲಾಗಲ್ಲ. ಈ ಬಗ್ಗೆ ಗಮನಿಸಿ ಮುಂದೆ ನೋಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ರಾಯಚೂರು : ಜಿಲ್ಲೆಯ ಜನರ ಕುಂದು ಕೊರತೆಗಳ ನಿವಾರಣೆಗೆ ಜಿಲ್ಲಾಡಳಿತ ದಿಂದ ನಡೆಸಲಾಗುತ್ತಿದ್ದ ಜಿಲ್ಲಾ ಮಟ್ಟದ ಜನ ಸ್ಪಂದನ ಸಭೆ ಕಳೆದ ಕೆಲ ತಿಂಗಳಿನಿಂದ ನಡೆಯದ ಕಾರಣ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗದಂತಾಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನ ಸ್ಪಂದನ ಸಭೆ ಜನರ ಕಷ್ಟಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ನಿವಾರಣೆಗೊಳ್ಳುತ್ತಿತ್ತು. ಇದರಿಂದ ಅಧಿಕಾರಿಗಳ ವಿಳಂಬ ನೀತಿ ಸೇರಿದಂತೆ ಅನೇಕ ಸಮಸ್ಯಗಳಿಗೆ ಪರಿಹಾರ ವೇದಿಕೆಯಾಗಿತ್ತು. ಸದ್ಯ ನೂತನ ಜಿಲ್ಲಾಧಿಕಾರಿಯ ಆಗಮನದಿಂದ ಜನರ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.

ಪ್ರತಿ ಮಂಗಳವಾರ ನಡೆಯುತಿದ್ದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ದೂರುದಾರರ ಸಮಸ್ಯೆಗೆ ಸ್ಪಂದಿಸಿ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತಿತ್ತು. ಜಿಲ್ಲಾಧಿಕಾರಿ ಡಾ. ಗೌತಮ್​ ಬಗಾದಿ ಇದ್ದ ಸಮಯದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಜನಸ್ಪಂದನ ಸಭೆಯಲ್ಲಿ ಜಿಲ್ಲೆಯ ಹಲವಾರು ಜನರು ದೂರು ಸಲ್ಲಿಸುತಿದ್ದರು.

ಜನ ಸ್ಪಂದನ ಸಭೆ ಸ್ಥಗಿತ

ಈ ಸಭೆಯಲ್ಲಿ ಕಂದಾಯ ಇಲಾಖೆಯ ಭೂ ವಿವಾಧ, ಹಣ‌ಪತ್ರ, ಖಾತಾ ನಕಲು‌ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ‌ ಸಮಸ್ಯೆ, ರಸ್ತೆ, ಚರಂಡಿ, ಆಸ್ತಿ, ಉದ್ಯೋಗ, ಸರಕಾರದಿಂದ ಸಾಲ‌ ಸೌಲಭ್ಯ, ವಿದ್ಯುತ್, ನೀರು ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಮೊರೆಯಿಡುತ್ತಿದ್ದರು. ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ತರಾಟೆಗೆ ತೆಗೆದುಕೊಂಡು ಪರಿಹಾರ ನೀಡುತ್ತಿದ್ದರು.

ಡಿಸಿ ಗೌತಮ್ ಅವರ ವರ್ಗಾವಣೆಯ ನಂತರ ಬಂದ ಶರತ್ .ಬಿ ಅವರು ತಿಂಗಳ ಪ್ರತಿ ಮಂಗಳವಾರ ನಡೆಯುತಿದ್ದ ಜನ ಸ್ಪಂದನ ಸಭೆಯನ್ನು ತಿಂಗಳ ಮೂರನೇ ಮಂಗಳವಾರ ನಡೆಸಲು‌‌ ಶುರುಮಾಡಿದರು. ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ನೀತಿ ಸಂಹಿತೆ, ಚುನಾವಣೆಯ ತಯಾರಿಯಲ್ಲಿ ‌ಬ್ಯುಸಿಯಾಗಿ ಜನಸ್ಪಂದನೆ ಸಭೆ ನಡೆಸಲು ನಿರ್ಲಕ್ಷ್ಯವಹಿಸಿದರು. ಇತ್ತೀಚಿಗೆ ಅವರ ವರ್ಗಾವಣೆಯಾಯಿತು.

ಇತ್ತೀಚಿಗೆ ಡಿಸಿಯಾಗಿ‌ ಬಂದ ಆರ್. ವೆಂಕಟೇಶ ಕುಮಾರ ಅವರು ಈವರೆಗೆ ಒಂದು ಸಭೆ ಮಾಡಿಲ್ಲ. ಇದರಿಂದ ಜನಸ್ಪಂದನ ಸಭೆಯ ಕಟಕಟೆ ಮುಚ್ಚಿಹೋದಂತಾಗಿದೆ. ರಾಜ್ಯಮಟ್ಟದ ದೂರುಗಳಿದ್ದರೆ ರಾಜ್ಯ ಸರಕಾರದ ಗಮನಕ್ಕೆ ತರುವ ಕೆಲಸವೂ ನಡೆಯುತಿತ್ತು . ಇದರಿಂದ ಸಿಎಂ‌‌ ಅವರ ಗೃಹ ಕಚೇರಿ ಕೃಷ್ಣಾಕ್ಕೆ ಬರುತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗಿತ್ತು.

ಜನಸ್ಪಂದನ ಸಭೆ ಕುರಿತು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರನ್ನು ಈಟಿವಿ ಭಾರತ ದೂರವಾಣಿ ಸಂಪರ್ಕ ಮಾಡಿ ಕೇಳಿದರೆ. ಜನ ಸಂಪರ್ಕ ಸಭೆಯ ಬಗ್ಗೆ ಮಾಹಿತಿಯಿಲ್ಲ. ಜನರ ದೂರುಗಳನ್ನು ಆಲಿಸಲು ಸಮಯ ನಿಗದಿ ಮಾಡಿ ಸ್ಪಂದಿಸುತಿದ್ದೇನೆ. ಸರಕಾರ ಬದಲಾದ್ರೂ ಅಧಿಕಾರಿಗಳ‌ ಕೆಲಸ ಬದಲಾಗಲ್ಲ. ಈ ಬಗ್ಗೆ ಗಮನಿಸಿ ಮುಂದೆ ನೋಡಲಾಗುವುದು ಎಂದು ಪ್ರತಿಕ್ರಿಯಿಸಿದರು.

Intro:ಜಿಲ್ಲೆಯ ಕುಂದು ಕೊರತೆಗಳ ನಿವಾರಣೆಗೆ ಜಿಲ್ಲಾಡಳಿತ ದಿಂದ ನಡೆಯುತಿದ್ದ ಜಿಲ್ಲಾ ಮಟ್ಟದ ಜನ ಸ್ಪಂದನ ಸಭೆ ಕಳೆದ ಕೆಲ ತಿಂಗಳಿನಿಂದ ನಡೆಯದ ಕಾರಣ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಗದಂತಾಗಿದೆ.




Body:ಸರಕಾರದ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲರಾದ್ರೆ ಸಮಸ್ಯೆ ಗಳನ್ನು ಹೊತ್ತುಕೊಂಡು ಜನಸ್ಪಂದನ ಸಭೆಯಲ್ಲಿ ಡಿಸಿ ಹತ್ರ ಬರುತ್ತಿದ್ದರೂ‌ ಜನರು ಇದಕ್ಕೆ ಅಯಾ ಇಲಾಕೆಯ ಸಮಸ್ಯೆಗಳು ಅಧಿಕಾರಿಗಳ ದೂರುದಾರರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ತಿಳಿಸಿ‌ ವಿಳಂಬದ ಕಾರಣ‌ ಕೇಳಿ‌ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗುತಿತ್ತು.
ಹರಿದು ಬರುತಿದ್ದ ಜನರು: ಮೊದಲೇ ರಾಯಚೂರು ಜಿಲ್ಲೆ ಸಾಮಾಜಿಕ,ಆರ್ಥಿಕ,ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಯಾಗಿದ್ದು ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದು ಒಂದೆಡೆಯಾದ್ರೆ ಸರಕಾರದ ಯೋಜನೆಗಳನ್ನು ತಲುಪಿಸಬೇಕಾಗಿರುವ ಅಧಿಕಾರಿಗಳ ಅಸೆಡ್ಡೆಯಿಂದ ಸಮರ್ಪಕವಾಗಿ ಸಿಗುತ್ತಿಲ್ಲ ಈ ನಿಟ್ಟಿನಲ್ಲಿ ಜಿಲ್ಲೆಗೆ ಜಿಲ್ಲಾಧಿಕಾರಿ ಯೇ ಹೈಕಮಾಂಡ್ ಆಗಿರುವ ಕಾರಣ ಪ್ರತಿ ಮಂಗಳವಾರ ನಡೆಯುತಿದ್ದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ದೂರುದಾರರ ಸಮಸ್ಯೆಗೆ ಸ್ಪಂದಿಸಿ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತಿತ್ತು.
ಜಿಲ್ಲೆ ಯಲ್ಲಿ ಡಾ.ಗೌತಮ್ ಬಗಾದಿ ಅವರು ಇದ್ದ ಸಮಯದಲ್ಲಿ ಪ್ರತಿ ಮಂಗಳವಾರ ನಡೆಯುತಿದ್ದ ಜನಸ್ಪಂದನ ಸಭೆಯಲ್ಲಿ ರಾಯಚೂರು ನಗರ,ತಾಲೂಕು ಮಾತ್ರವಲ್ಲದೇ ಮಾನ್ವಿ,ಸಿಂಧನೂರು, ಲಿಂಗಸುಗೂರು,ದೇವದುರ್ಗ‌ ತಾಲೂಕಿನ ಹಲವಾರು ಜನರು ದೂರು ಸಲ್ಲಿಸುತಿದ್ದರು ಇದಕ್ಕೆ ಜಿಲ್ಲಾಧಿಕಾರಿ ಗಳ ಕಚೇರಿ ಸಭಾಂಗಣ ಮಂಗಳವಾರ ಜನರಿಂದ ತುಂಬಿ ತುಳುಕುತಿತ್ತು.
ಈ ಸಭೆ ಯಲ್ಲಿ ಕಂದಾಯ ಇಲಾಖೆಯ ಭೂ ವಿವಾಧ,ಹಣ‌ಪತ್ರ,ಖಾತಾ ನಕಲು‌ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ‌ ಸಮಸ್ಯೆ,ರಸ್ತೆ,ಚರಂಡಿ,ಆಸ್ತಿ,ಉದ್ಯೋಗ,ಸರಕಾರದಿಂದ ಸಾಲ‌ ಸೌಲಭ್ಯ,ವಿದ್ಯುತ್,ನೀರು ಸೇರಿದಂತೆ ಎಲ್ಲಾ ಬಗೆಯ ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಮೋರೆಯಿಡುತಿದ್ದರು ಇದಕ್ಕೆ ಅಯಾ ಇಲಾಖೆಯ ಅಧಿಕಾರಿಗಳಿಗೆ ಕೆಲಸ ಕಾರ್ಯಗಳ‌ವಿಳಂಬದ ಕುರಿತು ಕಾರಣ ಕೇಳಿ ಡಿಸಿ ಅವರು ಅಧಿಕಾರಿಗಳಿಗೆ ಚಾಟಿ ಏಟು‌ಬೀಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತಿದ್ದರು.
ಡಿಸಿ ಬಗಾದಿ ಗೌತಮ್ ಅವರ ವರ್ಗಾವಣೆಯ ನಂತರ ಬಂದ ಶರತ್ ಬಿ ಅವರು ತಿಂಗಳ ಪ್ರತಿ ಮಂಗಳವಾರ ( ತಿಂಗಳ ಲ್ಲಿ ನಾಲ್ಕು ಬಾರಿ) ನಡೆಯುತಿದ್ದ ಜನ ಸ್ಪಂದನ ಸಭೆಯನ್ನು ತಿಂಗಳ ಮೂರನೇ ಮಂಗಳವಾರ ನಡೆಸಲು‌‌ ಶುರುಮಾಡಿದರು,‌ಇಷ್ಟರಲ್ಲಿಯೇ ತದ ನಂತರ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ನೀತಿ ಸಂಹಿತೆ,ಚುನಾವಣೆಯ ತಯಾರಿಯಲ್ಲಿ‌ಬ್ಯುಸಿಯಾಗಿ ಜನಸ್ಪಂದನೆಯ ಸಭೆ ನಡೆಸಲು ನಿರ್ಲಕ್ಷ್ಯ ವಹಿಸಿದರು ಇಷ್ಟರಲ್ಲಿಯೇ ಅವರು ಇತ್ತೀಚಿಗೆ ವರ್ಗಾವಣೆವೂ‌ ಆಗಿದ್ದಾರೆ.
ಈಗ ನೂತನವಾಗಿ ಇತ್ತೀಚಿಗೆ ಡಿಸಿಯಾಗಿ‌ಬಂದ ಆರ್.ವೆಂಕಟೇಶ ಕುಮಾರ ಅವರು ಈವರೆಗೆ ಒಂದು ಸಭೆ ಮಾಡಿಲ್ಲ ಇದರಿಂದ ಜನಸ್ಪಂದನ ಸಭೆಯ ಕಟಕಟೆ ಮುಚ್ಚಿಹೋದಂತಾಗಿದೆ.
ಜಿಲ್ಲಾ ಮಟ್ಟದ ಸಮಸ್ಯೆ ಗಳಿಗೆ ದೂರಿದಾರರಿಂದ ಅರ್ಜಿ ಸ್ವೀಕರಿಸಿದ ನಂತರ ಅದು ಮತ್ತೊಂದು ಸಭೆಯಲ್ಲಿ ಪುನರಾವರ್ತನೆಯಾಗಿ ದೂರು ಸ್ವೀಕರವಾದ ಕುರಿತು ಗಮನಿಸುತಿದ್ದ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸುವ ಮೂಲಕ ರಾಜ್ಯಮಟ್ಟದ ದೂರುಗಳಿದ್ದರೆ ರಾಜ್ಯ ಸರಕಾರದ ಗಮನಕ್ಕೆ ತರುವ ಕೆಲಸವೂ ನಡೆಯುತಿತ್ತು ಇದರಿಂದ ಸಿ.ಎಂ‌‌ ಅವರಿಗೆ ಅವರ ಗೃಹ ಕಚೇರಿ ಕೃಷ್ಣಾ ದಲ್ಲಿ ಬರುತಿದ್ದ ದೂರುಗಳ ಸಂಖ್ಯೆ ಕಡಿಮರಯಾಗುವ ವ್ಯವಸ್ಥೆ ಯೂ ಆಗಿತ್ತು ಇದರ ಉದ್ದೇಶವೂ ಇದೇ ಅಲ್ಲವೇ ಜಿಲ್ಲಾ‌ ಮಟ್ಟದ ಸಮಸ್ಯೆ ಜಿಲ್ಲೆಯಲ್ಲಿಯೇ ಬಗೆಹರಿಸಲು ಡಿಸಿ ಅವರ ಮೂಲಕ ಸ್ಪಂದನೆ ನೀಡುವುದು.
ಸರಕಾರ ಪತನವಾಗಿದ ನಂತರ ಬಿಜೆಪಿ ಸರಕಾರ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಹಿಂದಿನಂತೆ ಜನಸಂಪರ್ಕ ಸಭೆ ಮಾಡಲು ರಾಜ್ಯ ಸರಕಾರ ಸೂಚನೆ ನೀಡಬೇಕೆಂದು ಜನರು ಒತ್ತಾಯಿಸಿದ್ದಾರೆ.
ಈ ಕುರಿತು ನೂತನ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರನ್ನು ಈ ಟಿವಿ ಭಾರತ ದೂರವಾಣಿ ಸಂಪರ್ಕ ಮಾಡಿ ಕೇಳಿದರೆ ರಾಯಚೂರಿನಲ್ಲಿ ನಡೆಯುತಿದ್ದ ಜನ ಸಂಪರ್ಕ ಸಭೆಯ ಮಾಹಿತಿಯಿಲ್ಲ ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಜನರ ದೂರುಗಳನ್ನು ಆಲಿಸಲು ಸಮಯ ನಿಗದಿ ಮಾಡಿ ಸ್ಪಂದಿಸುತಿದ್ದೇನೆ ಸರಕಾರ ಬದಲಾದ್ರೂ ಅಧಿಕಾರಿಗಳ‌ಕೆಲಸ ಬದಲಾಗಲ್ಲ ಈ ಬಗ್ಗೆ ಗಮನಿಸಿ ಮುಂದೆ ನೋಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಬೈಟ್ : ಶಿವಕುಮಾರ ಮ್ಯಾಗಳಮನಿ ,ವಿದ್ಯಾರ್ಥಿ ಸಂಘಟನೆಯ ಮುಖಂಡ.ಕನ್ನಡಕ ಹಾಕಿಕೊಂಡವರು.
2) ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ. ಹಸಿರು ಶಾಲು ಧರಿಸಿದವರು.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.