ETV Bharat / state

ಸಾವಿನ ಜೊತೆ ಸರಸ.. ಉಕ್ಕಿ ಹರಿಯುವ ಕೃಷ್ಣೆಯಲ್ಲಿ ತೆಪ್ಪ ಬಳಕೆ..! - ರಾಯಚೂರು ಪ್ರವಾಹದಲ್ಲಿ ತೆಪ್ಪ ಬಳಕೆ ಸುದ್ದಿ

ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ತೆಪ್ಪ ಬಳಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಕೂಡಾ ಆತ್ಕೂರು ಜನರು ತೆಪ್ಪೆ ಬಳಸುವುದನ್ನು ಬಿಟ್ಟಿಲ್ಲ. ಇವರಿಗೆ ಇದು ಅನಿವಾರ್ಯವೂ ಕೂಡ. ಶಾಲಾ ಮಕ್ಕಳು, ಕಾರ್ಮಿಕರು, ರಾಯಚೂರಿಗೆ ಹೋಗಬೇಕಾದರೆ ಆತ್ಕೂರು ಗ್ರಾಮಕ್ಕೆ ಬಂದು ಇಲ್ಲಿಂದ ಬಸ್ ಮೂಲಕ ರಾಯಚೂರಿಗೆ ಹೋಗಬೇಕಾಗಿದೆ.

ಆತ್ಕೂರು ಗ್ರಾಮ
author img

By

Published : Oct 24, 2019, 10:37 PM IST

ರಾಯಚೂರು : ಜಿಲ್ಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ತೆಪ್ಪ ಬಳಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಆತ್ಕೂರು ಗ್ರಾಮದಲ್ಲಿ ತೆಪ್ಪ ಬಳಕೆ ಮಾಡುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಉಕ್ಕಿ ಹರಿಯುವ ಕೃಷ್ಣೆಯಲ್ಲಿ ತೆಪ್ಪ ಬಳಕೆ

ಜನರ ಸುರಕ್ಷತೆಗಾಗಿ ತೆಪ್ಪೆ ಬಳಸದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಆದ್ರೆ ಆತ್ಕೂರು ಗ್ರಾಮದಿಂದ ಕುರ್ವಕಲಾ ಗ್ರಾಮಗಳಿಗೆ ಹೋಗುವ ಜನರು ತೆಪ್ಪವನ್ನು ಬಳಸುವುದು‌ ಬಿಟ್ಟಿಲ್ಲ ಇವರಿಗೆ ಇದು ಅನಿವಾರ್ಯವೂ ಕೂಡ. ಶಾಲಾ ಮಕ್ಕಳು, ಕಾರ್ಮಿಕರು, ಯಾಪಲದಿನ್ನಿ, ರಾಯಚೂರಿಗೆ ಹೋಗಬೇಕಾದರೆ ಆತ್ಕೂರು ಗ್ರಾಮಕ್ಕೆ ಬಂದು ಇಲ್ಲಿಂದ ಬಸ್ ಮೂಲಕ ರಾಯಚೂರಿಗೆ ಹೋಗಬೇಕಾಗಿದೆ.

ಅಲ್ಲದೇ ಯಾಪಲದಿನ್ನಿಯಲ್ಲಿ ಸಂತೆ ಇರುವ ಕಾರಣ ಮತ್ತು ಕುರ್ವಕಲಾ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ದ ದತ್ತಾತ್ರೇಯ ದೇವಸ್ಥಾನವಿರುವ ಕಾರಣ ಜಿಲ್ಲೆ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ‌ದರ್ಶನ ಪಡೆಯುತ್ತಾರೆ. ಸದ್ಯ ಕೃಷ್ಣಾ ನದಿ ಮೈದುಂಬಿ‌ಹರಿಯುತಿದ್ದು ಅಪಾಯಕ್ಕೆ ಗುರಿಯಾಗುವಂತಾಗಿದೆ. ಇದನ್ನು ಲೆಕ್ಕಿಸದೇ ಭಕ್ತರು ತೆಪ್ಪದ ಮೂಲಕ ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದರು.

ಮೇಲ್ಸೇತುವೆ ಇದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ

ಕುರ್ವಕುಲಾ ಗ್ರಾಮಕ್ಕೆ ಹೋಗಲು ಮೇಲ್ಸೇತುವೆ ಕಾಮಗಾರಿ ಚಾಲನೆ ನೀಡಿ ಪಿಲ್ಲರ್ ಗಳೂ ಕಟ್ಟಿದರೂ ಕಾರಣಾಂತರಗಳಿಂದ ಅದು ಪೂರ್ಣವಾಗಿಲ್ಲ. ಇದರಿಂದ ಗ್ರಾಮಸ್ಥರು ತೆಪ್ಪದ ಮೂಲಕವೇ ಪ್ರಯಾಣಿಸುತಿದ್ದಾರೆ.

ಪ್ರವಾಹ ಬಂದಾಗ ಮಾತ್ರ ಕಣ್ಣು ಹಾಯಿಸಿ ನೋಡುವ ಜಿಲ್ಲಾಡಳಿತ ಸೇತುವೆ ನಿರ್ಮಾಣಕ್ಕೆ ಮುಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಸದ್ಯ ಜೀವದ ಹಂಗು ತೊರೆದು ಉಕ್ಕಿ ಹರಿಯುವ ನೀರಿನಲ್ಲಿ ಪ್ರಯಾಣಿಸುತ್ತಿರುವ ಜನರಿಗೆ ಸರ್ಕಾರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟು ಅಪಾಯ ತಡೆಯಬೇಕಿದೆ.

ರಾಯಚೂರು : ಜಿಲ್ಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ತೆಪ್ಪ ಬಳಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಆತ್ಕೂರು ಗ್ರಾಮದಲ್ಲಿ ತೆಪ್ಪ ಬಳಕೆ ಮಾಡುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಉಕ್ಕಿ ಹರಿಯುವ ಕೃಷ್ಣೆಯಲ್ಲಿ ತೆಪ್ಪ ಬಳಕೆ

ಜನರ ಸುರಕ್ಷತೆಗಾಗಿ ತೆಪ್ಪೆ ಬಳಸದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಆದ್ರೆ ಆತ್ಕೂರು ಗ್ರಾಮದಿಂದ ಕುರ್ವಕಲಾ ಗ್ರಾಮಗಳಿಗೆ ಹೋಗುವ ಜನರು ತೆಪ್ಪವನ್ನು ಬಳಸುವುದು‌ ಬಿಟ್ಟಿಲ್ಲ ಇವರಿಗೆ ಇದು ಅನಿವಾರ್ಯವೂ ಕೂಡ. ಶಾಲಾ ಮಕ್ಕಳು, ಕಾರ್ಮಿಕರು, ಯಾಪಲದಿನ್ನಿ, ರಾಯಚೂರಿಗೆ ಹೋಗಬೇಕಾದರೆ ಆತ್ಕೂರು ಗ್ರಾಮಕ್ಕೆ ಬಂದು ಇಲ್ಲಿಂದ ಬಸ್ ಮೂಲಕ ರಾಯಚೂರಿಗೆ ಹೋಗಬೇಕಾಗಿದೆ.

ಅಲ್ಲದೇ ಯಾಪಲದಿನ್ನಿಯಲ್ಲಿ ಸಂತೆ ಇರುವ ಕಾರಣ ಮತ್ತು ಕುರ್ವಕಲಾ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ದ ದತ್ತಾತ್ರೇಯ ದೇವಸ್ಥಾನವಿರುವ ಕಾರಣ ಜಿಲ್ಲೆ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ‌ದರ್ಶನ ಪಡೆಯುತ್ತಾರೆ. ಸದ್ಯ ಕೃಷ್ಣಾ ನದಿ ಮೈದುಂಬಿ‌ಹರಿಯುತಿದ್ದು ಅಪಾಯಕ್ಕೆ ಗುರಿಯಾಗುವಂತಾಗಿದೆ. ಇದನ್ನು ಲೆಕ್ಕಿಸದೇ ಭಕ್ತರು ತೆಪ್ಪದ ಮೂಲಕ ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದರು.

ಮೇಲ್ಸೇತುವೆ ಇದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ

ಕುರ್ವಕುಲಾ ಗ್ರಾಮಕ್ಕೆ ಹೋಗಲು ಮೇಲ್ಸೇತುವೆ ಕಾಮಗಾರಿ ಚಾಲನೆ ನೀಡಿ ಪಿಲ್ಲರ್ ಗಳೂ ಕಟ್ಟಿದರೂ ಕಾರಣಾಂತರಗಳಿಂದ ಅದು ಪೂರ್ಣವಾಗಿಲ್ಲ. ಇದರಿಂದ ಗ್ರಾಮಸ್ಥರು ತೆಪ್ಪದ ಮೂಲಕವೇ ಪ್ರಯಾಣಿಸುತಿದ್ದಾರೆ.

ಪ್ರವಾಹ ಬಂದಾಗ ಮಾತ್ರ ಕಣ್ಣು ಹಾಯಿಸಿ ನೋಡುವ ಜಿಲ್ಲಾಡಳಿತ ಸೇತುವೆ ನಿರ್ಮಾಣಕ್ಕೆ ಮುಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಸದ್ಯ ಜೀವದ ಹಂಗು ತೊರೆದು ಉಕ್ಕಿ ಹರಿಯುವ ನೀರಿನಲ್ಲಿ ಪ್ರಯಾಣಿಸುತ್ತಿರುವ ಜನರಿಗೆ ಸರ್ಕಾರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟು ಅಪಾಯ ತಡೆಯಬೇಕಿದೆ.

Intro:ನಾರಾಯಣಪುರ ಜಲಾಶಯದ ಮೂಲಕ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು 3.60ಲಕ್ಷ‌ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ರಾಯಚೂರು ತಾಲೂಕಿನ ನಡು ಗಡ್ಡೆ ಗಳಲ್ಲಿ ಪ್ರವಾಹ ಬೀತಿ ಎದುರಾಗಿದೆ. ತಾಲೂಕಿನ ಆತ್ಕೂರು ಗ್ರಾಮದಿಂದ ಕುರ್ವಕಲಾ ಗ್ರಾಮಗಳಿಗೆ ಹೋಗಬೇಕಾದ್ರೆ ತೆಪ್ಪೆಯ ಮೂಲಕವೇ ಹೋಗಬೇಕು. ಒಂದೆಡೆ ನಾರಾಯಣ ಪುರ ಜಲಾಶಯದಿಂದ ಅಪಾರ ಪ್ರಮಾಣ ನೀರು ಬಿಡುವ ಕಾರಣ ಅಪಾಯವನ್ನು ಅರಿತು ಜನರ ಸುರಕ್ಷತೆಗಾಗಿ ತೆಪ್ಪೆಯ ಮೂಲಕ ಹೋಗಬೇಡಿ ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರೂ ಸಹ ಆತ್ಕೂರು ಗ್ರಾಮದಿಂದ ಕುರ್ವಕಲಾ ಗ್ರಾಮಗಳಿಗೆ ಹೋಗುವ ಜನರು ತೆಪ್ಪೆಯನ್ನು ಬಳಸುವುದು‌ಬಿಟ್ಟಿಲ್ಲ ಇವರಿಗೇ ಅನಿವಾರ್ಯವೂ ಕೂಡ.


Body:ಏಕೆಂದರೆ ತಪ್ಪೆಯ ಮೂಲಕವೇ ಹೋಗಬೇಕಾಗಿದೆ.ಪ್ರತಿನಿತ್ಯ ಕುರ್ವಕಲಾ ಗ್ರಾಮದಿಂದ ಶಾಲಾ‌ಮಕ್ಕಳು,ಕಾರ್ಮಿಕರು ಯಾಪಲದಿನ್ನಿ,ರಾಯಚೂರಿಗೆ ಬರಬೇಕಾದರೆ ತೆಪ್ಪೆಯೇ ಆಸರೆ.ತೆಪ್ಪೆಯ ಮೂಲಕ ಆತ್ಕೂರು ಗ್ರಾಮಕ್ಕೆ ಬಂದು ಇಲ್ಲಿಂದ ಬಸ್ ಮೂಲಕ ರಾಯಚೂರಿಗೆ ಹೋಗಬೇಕಾಗಿದೆ. ಇಂದು ಯಾಪಲದಿನ್ನಿ‌ ಸಂತೆ ಇರುವ ಕಾರಣ ಅಪಾಯವನ್ನು ಲೆಕ್ಕಿಸದೇ ಕುರ್ವಕುಲಾ ಗ್ರಾಮಸ್ಥರು ತೆಪ್ಪೆಯಿಂದ ಹೋಗಿ‌ವಾಪಸ್ಸಾದರೂ. ಅಲ್ಲದೇ ಕುರ್ವಕಲಾ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ದಿ ದತ್ತಾತ್ರೇಯ ದೇವಸ್ಥಾನವಿದ್ದು ಜಿಲ್ಲೆ ಮಾತ್ರವಲ್ಲದೇ ಆಂದ್ರಪ್ರದೇಶ,ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ‌ದರ್ಶನ ಪಡೆಯುತ್ತಾರೆ.ಆದ್ರೆ ಈಗ ನಾರಾಯಣಪುರ ಜಲಾಶಯದಿಂದ ಕೃಷ್ಣಗೆ ಅಪಾರ ಪ್ರಮಾಣದ ನೀರು ಬಿಟ್ಟ ಪರಿಣಾಮ ಕೃಷ್ಣೆ ಮೈದುಂಬಿ‌ಹರಿಯುತಿದ್ದು ಅಪಾಯಕ್ಕೆ ಗುರಿಯಾಗುವಂತಾಗಿದೆ ಇದನ್ನು ಲೆಕ್ಕಿಸದೇ ಇಂದು ಹೈದ್ರಾಬಾದ್,ಮಹಾರಾಷ್ಟ್ರ ದಿಂದ ಭಕ್ತರು ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದರು. ಕುರ್ವಕುಲಾ ಗ್ರಾಮಕ್ಕೆ ಹೋಗಲು ಮೇಲ್ಸೇತುವೆ ಕಾಮಗಾರಿ ಚಾಲನೆ ನೀಡಿ ಪಿಲ್ಲರ್ ಗಳೂ ಕಟ್ಟಿದರೂ ಕಾರಣಾಂತರಗಳಿಂದ ಅದು ಪೂರ್ಣವಾಗಿಲ್ಲ‌ ಇದ್ರಿಂದ ಕುರ್ವಕುಲಾ ಗ್ರಾಮಸ್ಥರು ತೆಪ್ಪೆಯ ಮೂಲಕವೇಎ ಅಪಾಯದ ನಡುವೆ ಪ್ರಯಾಣಿಸುತಿದ್ದಾರೆ ಇವರ ಸಮಸ್ಯೆಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸದೇ ಮುಗ್ದ ಜನರ ಪ್ರಾಣಾಪಾಯದೊಂದಿಗೆ ಚೆಲ್ಲಾಟ ವಾಡುತ್ತಿದೆ ಎಂದು ಹೇಳಬಹುದು.ಇನ್ನಾದರೂ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಈ ಭಾಗದಲ್ಲಿನ‌ನೆನೆಗುದಿಗೆ ಬಿದ್ದ ಮೇಲ್ಸೇತುವೆ ಪೂರ್ಣಗೊಳಿಸಿ‌ ಸುಗಮ‌ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಪ್ರವಾಹ ಬಂದಾಗ ಮಾತ್ರ ಇತ್ತ ಕಣ್ಣು ಹಾಯಿಸಿ ನೋಡುವ ಜಿಲ್ಲಾಡಳಿತ ಇವರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ.ಕಳೆದ ಆಗಸ್ಟ್ ತಿಂಗಳಲ್ಲಿಯೂ ಪ್ರವಾಹ ಬಂದಾಗ ಇಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು‌ ಈಗ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಒಳಗಾಗಬೇಕಿದ್ದು ದುರ್ದೈವದ ಸಂಗತಿ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.