ETV Bharat / state

ಕಾನೂನು ಕ್ರಮವನ್ನು ಗಾಳಿಗೆ ತೂರಿದ ಡ್ರಗ್​ ಕಂಪನಿ ವಿರುದ್ಧ ದೂರು

author img

By

Published : May 14, 2019, 6:06 AM IST

ಕಾರ್ಖಾನೆಗಳಿಂದ ಮಾನವನ ಮೇಲೆ ಹಾಗೂ ಸುತ್ತಮುತ್ತಲಿನ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮ ಹಾಗು ಜಾಗೃತಿ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕಂಪನಿ ಅವೆಲ್ಲವನ್ನೂ ಗಾಳಿಗೆ ತೂರಿ ಕಾನೂನು ಉಲ್ಲಂಘನೆ ಮಾಡಿದೆ.

ಡಾ.ರಜಾಕ್ ಉಸ್ತಾದ್

ರಾಯಚೂರು: ಕಾರ್ಖಾನೆಗಳಿಂದ ಮಾನವನ ಮೇಲೆ ಹಾಗೂ ಸುತ್ತಮುತ್ತಲಿನ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮ ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ರೆ ರಾಯಚೂರು ತಾಲೂಕಿನ ದೇವಸುಗೂರಿನ ಮೆ. ಶಿಲ್ಪ ಮೆಡಿಕೇರ್ ಲಿಮಿಟೆಡ್ ಯುನಿಟ್ -1 ಇದಾವುದನ್ನು ಲೆಕ್ಕಿಸದೇ ಕಾನೂನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲೂಕಿನ ದೇವಸುಗೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ಡ್ರಗ್ಸ್ ತಯಾರಿಸುತ್ತಿರುವ ಮೆ.ಶಿಲ್ಪಾ ಮೆಡಿಕೇರ್ ಲಿಮಿಟೆಡ್‌ ಯುನಿಟ್- 1 ಕಳೆದ ಹಲವಾರು ವರ್ಷಗಳಿಂದ ಔಷಧಿ ತಯಾರಿಸಲು ಉಪಯೋಗವಾಗುವ ಡ್ರಗ್ ಉತ್ಪಾದನೆ ಮಾಡಿ ಪ್ರತಿಷ್ಟಿತವಾದ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಆದ್ರೆ ಈ ಕಂಪನಿ ಈಗ ಕಾನೂನಿನ ಅನುಗುಣವಾಗಿ ನಡೆದುಕೊಳ್ಳದ ಕಾರಣ ಎನ್ವಿರಾನ್​ಮೆಂಟ್​​​ ಪ್ರೊಟೆಕ್ಷನ್​ ಆಕ್ಟ್​ 1986 ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲದೇ 30-6-2016 ಕ್ಕೆ ಡ್ರಗ್ ಉತ್ಪಾದನೆ ಮಾಡಲು ನೀಡಲಾದ ಅನುಮತಿ ಅವಧಿ ಮುಗಿದರೂ ಇಲ್ಲಿಯವರೆಗೆ ಅಕ್ರಮವಾಗಿ ನಿರಂತರ ಡ್ರಗ್ ಉತ್ಪಾದನೆ ಮಾಡುತ್ತಿದೆ.

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಜಾಕ್ ಉಸ್ತಾದ್ ಆರೋಪ
ಈ ಕಂಪನಿಯ ಆಡಳಿತದ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಕ್ಷನ್​ 33(A) ,1974 ಸೇರಿದಂತೆ ವಿವಿಧ ಕಾಯ್ದೆ ಅಡಿಯಲ್ಲಿ 21-08-2018 ರಂದು ಪತ್ರದ ಮೂಲಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಆದೇಶ ದವರೆಗೆ ಉತ್ಪಾದನೆ ಸ್ಥಗಿತಗೊಳಿಸುವಂತೆ ಮತ್ತು ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸದರಿ ಯುನಿಟ್ ಸೀಜ್ ಮಾಡಲು ಆದೇಶಿಸಿತ್ತು.

ಅಲ್ಲದೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸದರಿ ಕಂಪನಿಗೆ ನೀಡಲಾದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಇದ್ಯಾವುದೇ ಕ್ರಮ ಜರುಗಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ವಿಚಿತ್ರವೆಂದರೆ ಸದರಿ ಕಂಪನಿಗೆ ನೀಡಿದ ಆದೇಶದ ಪತ್ರ ಜಿಲ್ಲಾಡಳಿತದ ಇನ್ ವಾರ್ಡ್​ಗೆ ಬಂದಿಲ್ಲ. ಇದು ಬಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ 25 ವರ್ಷಗಳಿಂದ ರಾಸಾಯನಿಕ ಉತ್ಪನ್ನ ಉತ್ಪಾದನೆ ಮಾಡುತ್ತಿರುವ ಶಿಲ್ಪ ಮೆಡಿಕೇರ್ ಕಂಪನಿ 30 ಕೆಮಿಕಲ್ ಉತ್ಪಾದನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಪಡೆದ ಅನುಮತಿ 2016 ಜೂನ್​ಗೆ ಮುಗಿದರೂ ಕಾಲಾವಧಿ ವಿಸ್ತರಣೆಗೆ ಮರು ಅನುಮತಿಗೆ ಪರವಾನಗಿ ಪಡೆಯದೇ ನಿರ್ವಹಣೆ ಮಾಡುತ್ತಿದೆ. ಈ ಬಗ್ಗೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರಾದ ಡಾ.ರಜಾಕ್ ಉಸ್ತಾದ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯಲ್ಲಿ ಬಹಿರಂಗವಾಗಿದ್ದು, ಈ ಕೂಡಲೇ ಕಾನೂನು ಉಲ್ಲಂಘನೆ ಮಾಡಿ ಪರಿಸರದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಸೀಜ್ ಮಾಡಿ ಕಂಪನಿಯ ಆಡಳಿತದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ 2016ರಿಂದ ಇಲ್ಲಿಯವರೆಗೆ ಕಂಪನಿಗಳಿಸಿದ ಲಾಭವನ್ನು ವಸೂಲಿ ಮಾಡಿ ಈ ಭಾಗದ ಪರಿಸರ ಸುಧಾರಣೆಗೆ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ರಾಸಾಯನಿಕ ಉತ್ಪಾದನೆಯಿಂದ ಹೊರಸೂಸುವ ಕೆಮಿಕಲ್ ನೀರು ಸಂಸ್ಕರಣೆ ಗೆ ವ್ಯವಸ್ಥೆ ಮಾಡಿಲ್ಲ. 19 ಕಿ.ಮೀ ಉತ್ಪಾದನೆಗೆ ಪರವಾನಗಿ ಪಡೆದು 26 ಕಿ.ಮೀ.ಉತ್ಪಾದಿಸುತ್ತಿದೆ‌ ಎಂದು ರಜಾಕ್ ಉಸ್ತಾದ್ ಅವರು ದೂರಿದರು.

ಒಂದು ಕಡೆ ಜಲ ಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗಿದ್ದಲ್ಲದೇ ಸುತ್ತಲಿನ ಗ್ರಾಮಗಳ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲು ಕಾರಣವಾಗಿದೆ. ಮತ್ತೊಂದು ಕಡೆ ಅವಧಿ ಮುಗಿದರೂ ನಿರ್ವಹಣೆ ಮಾಡುತ್ತಿರುವ ಕಂಪನಿ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಕ್ರಮವಾಗುತ್ತಿಲ್ಲ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು: ಕಾರ್ಖಾನೆಗಳಿಂದ ಮಾನವನ ಮೇಲೆ ಹಾಗೂ ಸುತ್ತಮುತ್ತಲಿನ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮ ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ರೆ ರಾಯಚೂರು ತಾಲೂಕಿನ ದೇವಸುಗೂರಿನ ಮೆ. ಶಿಲ್ಪ ಮೆಡಿಕೇರ್ ಲಿಮಿಟೆಡ್ ಯುನಿಟ್ -1 ಇದಾವುದನ್ನು ಲೆಕ್ಕಿಸದೇ ಕಾನೂನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲೂಕಿನ ದೇವಸುಗೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ಡ್ರಗ್ಸ್ ತಯಾರಿಸುತ್ತಿರುವ ಮೆ.ಶಿಲ್ಪಾ ಮೆಡಿಕೇರ್ ಲಿಮಿಟೆಡ್‌ ಯುನಿಟ್- 1 ಕಳೆದ ಹಲವಾರು ವರ್ಷಗಳಿಂದ ಔಷಧಿ ತಯಾರಿಸಲು ಉಪಯೋಗವಾಗುವ ಡ್ರಗ್ ಉತ್ಪಾದನೆ ಮಾಡಿ ಪ್ರತಿಷ್ಟಿತವಾದ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಆದ್ರೆ ಈ ಕಂಪನಿ ಈಗ ಕಾನೂನಿನ ಅನುಗುಣವಾಗಿ ನಡೆದುಕೊಳ್ಳದ ಕಾರಣ ಎನ್ವಿರಾನ್​ಮೆಂಟ್​​​ ಪ್ರೊಟೆಕ್ಷನ್​ ಆಕ್ಟ್​ 1986 ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲದೇ 30-6-2016 ಕ್ಕೆ ಡ್ರಗ್ ಉತ್ಪಾದನೆ ಮಾಡಲು ನೀಡಲಾದ ಅನುಮತಿ ಅವಧಿ ಮುಗಿದರೂ ಇಲ್ಲಿಯವರೆಗೆ ಅಕ್ರಮವಾಗಿ ನಿರಂತರ ಡ್ರಗ್ ಉತ್ಪಾದನೆ ಮಾಡುತ್ತಿದೆ.

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಜಾಕ್ ಉಸ್ತಾದ್ ಆರೋಪ
ಈ ಕಂಪನಿಯ ಆಡಳಿತದ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಕ್ಷನ್​ 33(A) ,1974 ಸೇರಿದಂತೆ ವಿವಿಧ ಕಾಯ್ದೆ ಅಡಿಯಲ್ಲಿ 21-08-2018 ರಂದು ಪತ್ರದ ಮೂಲಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಆದೇಶ ದವರೆಗೆ ಉತ್ಪಾದನೆ ಸ್ಥಗಿತಗೊಳಿಸುವಂತೆ ಮತ್ತು ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸದರಿ ಯುನಿಟ್ ಸೀಜ್ ಮಾಡಲು ಆದೇಶಿಸಿತ್ತು.

ಅಲ್ಲದೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸದರಿ ಕಂಪನಿಗೆ ನೀಡಲಾದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಇದ್ಯಾವುದೇ ಕ್ರಮ ಜರುಗಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ವಿಚಿತ್ರವೆಂದರೆ ಸದರಿ ಕಂಪನಿಗೆ ನೀಡಿದ ಆದೇಶದ ಪತ್ರ ಜಿಲ್ಲಾಡಳಿತದ ಇನ್ ವಾರ್ಡ್​ಗೆ ಬಂದಿಲ್ಲ. ಇದು ಬಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ 25 ವರ್ಷಗಳಿಂದ ರಾಸಾಯನಿಕ ಉತ್ಪನ್ನ ಉತ್ಪಾದನೆ ಮಾಡುತ್ತಿರುವ ಶಿಲ್ಪ ಮೆಡಿಕೇರ್ ಕಂಪನಿ 30 ಕೆಮಿಕಲ್ ಉತ್ಪಾದನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಪಡೆದ ಅನುಮತಿ 2016 ಜೂನ್​ಗೆ ಮುಗಿದರೂ ಕಾಲಾವಧಿ ವಿಸ್ತರಣೆಗೆ ಮರು ಅನುಮತಿಗೆ ಪರವಾನಗಿ ಪಡೆಯದೇ ನಿರ್ವಹಣೆ ಮಾಡುತ್ತಿದೆ. ಈ ಬಗ್ಗೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರಾದ ಡಾ.ರಜಾಕ್ ಉಸ್ತಾದ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯಲ್ಲಿ ಬಹಿರಂಗವಾಗಿದ್ದು, ಈ ಕೂಡಲೇ ಕಾನೂನು ಉಲ್ಲಂಘನೆ ಮಾಡಿ ಪರಿಸರದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಸೀಜ್ ಮಾಡಿ ಕಂಪನಿಯ ಆಡಳಿತದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ 2016ರಿಂದ ಇಲ್ಲಿಯವರೆಗೆ ಕಂಪನಿಗಳಿಸಿದ ಲಾಭವನ್ನು ವಸೂಲಿ ಮಾಡಿ ಈ ಭಾಗದ ಪರಿಸರ ಸುಧಾರಣೆಗೆ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ರಾಸಾಯನಿಕ ಉತ್ಪಾದನೆಯಿಂದ ಹೊರಸೂಸುವ ಕೆಮಿಕಲ್ ನೀರು ಸಂಸ್ಕರಣೆ ಗೆ ವ್ಯವಸ್ಥೆ ಮಾಡಿಲ್ಲ. 19 ಕಿ.ಮೀ ಉತ್ಪಾದನೆಗೆ ಪರವಾನಗಿ ಪಡೆದು 26 ಕಿ.ಮೀ.ಉತ್ಪಾದಿಸುತ್ತಿದೆ‌ ಎಂದು ರಜಾಕ್ ಉಸ್ತಾದ್ ಅವರು ದೂರಿದರು.

ಒಂದು ಕಡೆ ಜಲ ಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗಿದ್ದಲ್ಲದೇ ಸುತ್ತಲಿನ ಗ್ರಾಮಗಳ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲು ಕಾರಣವಾಗಿದೆ. ಮತ್ತೊಂದು ಕಡೆ ಅವಧಿ ಮುಗಿದರೂ ನಿರ್ವಹಣೆ ಮಾಡುತ್ತಿರುವ ಕಂಪನಿ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಕ್ರಮವಾಗುತ್ತಿಲ್ಲ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Intro: ಕಾರ್ಖಾನೆಗಳಿಂದ ಮಾನವನ ಮೇಲೆ ಹಾಗೂ ಸುತ್ತಮುತ್ತಲಿನ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮುನ್ನಚ್ಚರಿಕಾ ಕ್ರಮ ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆದ್ರೆ ರಾಯಚೂರು ತಾಲೂಕಿನ ದೇವಸುಗೂರಿನ ಮೆ. ಶಿಲ್ಪ ಮೆಡಿಕೇರ್ ಲಿಮೆಟೆಡ್ ಯುನಿಟ್ -1 ಇದಾವುದನ್ನು ಲೆಕ್ಕಿಸದೇ ಕಾನೂನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.



Body:ರಾಯಚೂರು ತಾಲೂಕಿನ ದೇವಸುಗೂರು ಇಂಡಸ್ಟ್ರಿಯಲ್ ಏರಿಯಾದ ಡ್ರಗ್ಸ್ ತಯಾರಿಸುತ್ತಿರುವ ಮೆ.ಶಿಲ್ಪಾ ಮೆಡಿಕೇರ್ ಲಿಮಿಟೆಡ್‌ ಯುನಿಟ್- 1 ಕಳೆದ ಹಲವಾರು ವರ್ಷಗಳಿಂದ ಔಷಧಿ ತಯಾರಿಸಲು ಉಪಯೋಗವಾಗುವ ಡ್ರಗ್ ಉತ್ಪಾದನೆ ಮಾಡಿ ಪ್ರತಿಷ್ಟಿತವಾಗಿ ಗುರುತಿಸಿಕೊಂಡಿದೆ.
ಆದ್ರೆ ಈ ಕಂಪನಿ ಈಗ ಕಾನೂನಿನ ಅನುಗುಣವಾಗಿ ನಡೆದುಕೊಳ್ಳದ ಕಾರಣ Environment (protection ) act, 1986 ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲದೇ 30-6-2016 ಕ್ಕೆ ಡ್ರಗ್ ಉತ್ಪಾದನೆ ಮಾಡಲು ನೀಡಲಾದ ಅನುಮತಿ ಅವಧಿ ಮುಗಿದರೂ ಇಲ್ಲಿಯವರೆಗೆ ಅಕ್ರಮವಾಗಿ ನಿರಂತರ ಡ್ರಗ್ ಉತ್ಪಾದನೆ ಮಾಡುತ್ತಿದೆ.
ಈ ಕಂಪನಿಯ ಆಡಳಿತದ ವಿರುದ್ಧ ಆರೋಪಕ್ಕೆ ಸಂಬಂದಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ Diretion under section 33(A) ,1974 and read with rule 34 of karnataka state board for prevention and control of water pollutions ಸೇರಿ ದಂತೆ ವಿವಿಧ ಕಾಯ್ದೆ, 1983ರ ಅಡಿಯಲ್ಲಿ 21-08-2018 ರಂದು ಪತ್ರದ ಮೂಲಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಆದೇಶ ದವರೆಗೆ ಉತ್ಪಾದನೆ ಸ್ಥಗಿತಗೊಳಿಸುವಂತೆ ಮತ್ತು ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸದರಿ ಯುನಿಟ್ ಸೀಜ್ ಮಾಡಲು ಅದೇಶಿಸಿದೆ.
ಮಾತ್ರವಲ್ಲದೇ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸದರಿ ಕಂಪನಿಗೆ ನೀಡಲಾದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ ಆದರೆ ಇದ್ಯಾವುದೇ ಕ್ರಮ ಜರುಗಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ವಿಚಿತ್ರವೆಂದರೆ ಸದರಿ ಕಂಪನಿಗೆ ನೀಡಿದ ಆದೇಶದ ಪತ್ರ ಜಿಲ್ಲಾಡಳಿತದ ಇನ್ ವಾರ್ಡ್ ಗೆ ಬಂದಿಲ್ಲ ಇದು ಬಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ 25 ವರ್ಷಗಳಿಂದ ರಾಸಾಯನಿಕ ಉತ್ಪನ್ನ ಉತ್ಪಾದನೆ ಮಾಡುತ್ತಿರುವ ಶಿಲ್ಪ ಮೆಡಿಕೇರ್ ಕಂಪನಿ 30 ಕೆಮಿಕಲ್ ಉತ್ಪಾದನೆ ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಪಡೆದ ಅನುಮತಿ 2016 ಜೂನ್ಗೆ ಮುಗಿದರೂ ಕಾಲಾವಧಿ ವಿಸ್ತರಣೆಗೆ ಮರು ಅನುಮತಿಗೆ ಪರವಾನಗಿ ಪಡೆಯದೇ ನಿರ್ವಹಣೆ ಮಾಡುತ್ತಿದೆ ಈ ಬಗ್ಗೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರಾದ ಡಾ.ರಜಾಕ್ ಉಸ್ತಾದ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೆಳಲಾದ ಮಾಹಿತಿಯಲ್ಲಿ ಬಹಿರಂಗವಾಗಿದ್ದು ಈ ಕೂಡಲೇ ಕಾನೂನು ಉಲ್ಲಂಘನೆ ಮಾಡಿ ಪರಿಸರದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಸೀಜ್ ಮಾಡಿ ಕಂಪನಿಯ ಆಡಳಿತದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ 2016ರಿಂದ ಇಲ್ಲಿಯವರೆಗೆ ಕಂಪನಿ ಗಳಿಸಿದ ಲಾಭವನ್ನು ವಸೂಲಿ ಮಾಡಿ ಈ ಭಾಗದ ಪರಿಸರ ಸುಧಾರಣೆಗೆ ಬಳಸಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೇ ರಾಸಾಯನಿಕ ಉತ್ಪಾದನೆಯಿಂದ ಹೊರಸೂಸುವ ಕೆಮಿಕಲ್ ನೀರು ಸಂಸ್ಕರಣೆ ಗೆ ವ್ಯವಸ್ಥೆ ಮಾಡಿಲ್ಲ. 19 km ಉತ್ಪಾದನೆಗೆ ಪರವಾನಗಿ ಪಡೆದು 26 ಕಿ.ಮೀ.ಉತ್ಪಾದಿಸುತ್ತಿದೆ‌ ಎಂದು ರಜಾಕ್ ಉಸ್ತಾದ್ ಅವರು ದೂರಿದರು.
ಒಂದು ಕಡೆ ಜಲ ಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗಿದ್ದಲ್ಲದೇ ಸುತ್ತಲಿನ ಗ್ರಾಮಗಳ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲು ಕಾರಣವಾಗಿದ್ದು ಮತ್ತೊಂದು ಕಡೆ ಅವಧಿ ಮುಗಿದರೂ ನಿರ್ವಹಣೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತ ದಿಂದ ಯಾವುದೇ ಕ್ರಮವಾಗುತ್ತಿಲ್ಲ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.