ರಾಯಚೂರು: ಜಿಲ್ಲೆಯಲ್ಲಿ 2019ರ ಜುಲೈ1ರಿಂದ ಅಕ್ಟೋಬರ್ 31ರವರೆಗೆ ನಡೆದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು 73 ಪ್ರಕರಣಗಳ ಪೈಕಿ 48 ಕೇಸ್ ಬೇಧಿಸಿ ವಾರಸುದಾರರ ಸ್ವತ್ತನ್ನು ಹಿಂದಿರುಗಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸುಲಿಗೆ, ಮನೆಗೆ ಕನ್ನ, ಸಾದಾ ಕಳವು ಸೇರಿ ವಿವಿಧ ಕಳ್ಳತನ ಪ್ರಕರಣಗಳ ಜಾಡುಹಿಡಿದು 73 ಪ್ರಕರಣಗಳ ಪೈಕಿ 48 ಕೇಸ್ ಬೇಧಿಸಿ, 62,64,070 ರೂ. ಕಳುವಾದ ಸ್ವತ್ತಿನ ಪೈಕಿ 36,97,119 ರೂ. ವಶಪಡಿಸಿಕೊಂಡು ವಾರಸುದಾರರಿಗೆ ಹಿಂದುರಿಗಿಸಿದ್ದಾರೆ. ಇನ್ನು, ಈ ಪ್ರಕರಣಗಳ ಸಂಬಂಧ 38 ಆರೋಪಿಗಳನ್ನು ಬಂಧಿಸಿದ್ದಾರೆ. ಸಿಲಿಂಡರ್, ಆಟೋ, ಚಿನ್ನ,ಬೆಳ್ಳಿ ಆಭರಣಗಳು, ನಗದು, ದ್ವಿಚಕ್ರವಾಹನ, ಮೊಬೈಲ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇನ್ನು, ಮೂರು ತಿಂಗಳಲ್ಲಿ ನಡೆದ ಪ್ರಕರಣಗಳಲ್ಲಿ ಅಂಗಡಿಗೆ ಕನ್ನ, ಲಿಂಗಸುಗೂರಿನ ಕಿಡ್ನಾಪಿಂಗ್ ಪ್ರಕರಣಗಳನ್ನು ಕೇವಲ 24 ಗಂಟೆಯೊಳಗೆ ಬೇಧಿಸಿದ್ದು, ಬಾಕಿ ಪ್ರಕರಣಗಳನ್ನು ಪತ್ತೆಹಚ್ಚಿ ಸ್ವತ್ತನ್ನು ಹಿಂದಿರುಗಿಸಲಾವುದು ಎಂದು ಎಸ್ಪಿ ಸಿ ಬಿ ವೇದಮೂರ್ತಿ ತಿಳಿಸಿದರು.