ರಾಯಚೂರು: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ಗಳನ್ನು ತೆಗೆಯುವ ಕಾರ್ಯ ಮುಂದುವರೆದಿದೆ. ಕೇರಳದ ಸ್ವಿಮ್ಮಿಂಗ್ ಪರಿಣಿತರಿಂದ ಈ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಾಲೂಕಿನ ಗುರ್ಜಾಪುರ ಸೇತುವೆ ಮೇಲೆ ಆರ್ಟಿಸಿಪಿಎಸ್ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ.
ಸ್ಟ್ರಕ್ ಆಗಿರುವ ಗೇಟ್ ತೆಗೆಯಲು ಪರಿಣಿತರು ಜೆಸಿಬಿ ಸಹಾಯದೊಂದಿಗೆ ಹರಸಹಾಸ ಪಡುತ್ತಿದ್ದಾರೆ. ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟ ಪರಿಣಾಮ, ಕಾರ್ಯಾಚರಣೆ ಪ್ರವಾಹ, ಮೊಸಳೆಗಳ ಭೀತಿಯ ನಡುವೆ ನಡೆಯುತ್ತಿದೆ. 194 ಗೇಟುಗಳ ಪೈಕಿ ಈಗ ಕೇವಲ 98 ಗೇಟ್ಗಳು ಮಾತ್ರ ಓಪನ್ ಆಗಿವೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಅಧಿಕಾರಿಗಳ ಎಡವಟ್ಟಿನಿಂದ ಯಾದಗಿರಿ, ರಾಯಚೂರಿನ ರೈತರ ಜಮೀನುಗಳು ಜಲಾವೃತವಾಗಿವೆ.
ಇದನ್ನೂ ಓದಿ: ರಾಯಚೂರು: ಜೆಸಿಬಿಯ ಬಕೆಟ್ನಲ್ಲಿ ಕುಳಿತು ಬ್ಯಾರೇಜ್ ಗೇಟ್ ತೆರೆಯಲು ಹರಸಾಹಸ... VIDEO
ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ ಮುನ್ನವೇ ತೆರೆಯಬೇಕಿದ್ದ ಗೇಟ್ಗಳನ್ನು, ಈಗ 1 ಲಕ್ಷ 73 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟ ವೇಳೆ ತೆಗೆಯಲು ಮುಂದಾಗಿದ್ದಾರೆ. ಗೇಟ್ಗಳ ಭಾರ ಹತ್ತು ಟನ್ಗೂ ಅಧಿಕ ಎನ್ನಲಾಗುತ್ತಿದೆ. ಆದ್ರೆ ಕ್ರೇನ್ನ ಹೈಡ್ರೋ ಕೇವಲ ಎರಡು ಟನ್ ಒತ್ತಡ ಸಾಮರ್ಥ್ಯ ಹಿನ್ನೆಲೆ ಸ್ವಿಮ್ಮಿಂಗ್ ಎಕ್ಸ್ ಪರ್ಟ್ಸ್ ಕೂಡ ಗೇಟ್ ಓಪನ್ ಮಾಡಲು ಪರದಾಡುತ್ತಿದ್ದಾರೆ. ಅಲ್ಲದೇ ನೀರಿನ ರಭಸದಿಂದ ಕಾರ್ಯಾಚರಣೆ ಪದೇ ಪದೇ ಸ್ಥಗಿತವಾಗುತ್ತಿದೆ ಎನ್ನಲಾಗುತ್ತಿದೆ.