ETV Bharat / state

ರಾಯಚೂರು: ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ 16 ಚಿನ್ನದ ಪದಕ ಪಡೆದ ಬುಶ್ರಾ ಮತೀನ್‌

author img

By

Published : Mar 7, 2022, 4:03 PM IST

ರಾಯಚೂರು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಬುಶ್ರಾ ಮತೀನ್, ಸಿವಿಲ್ ಇಂಜಿನಿಯರಿಂಗ್ ಅನ್ನು ಯರಮರಸ್ ಕ್ಯಾಂಪ್​ನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿದ್ದಾರೆ.

Bushra Mateen
ಬುಶ್ರಾ ಮತೀನ್

ರಾಯಚೂರು: ಇಲ್ಲಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ 16 ಚಿನ್ನದ ಪದಕ​​ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ನಗರದ ಯರಮರಸ್ ಕ್ಯಾಂಪ್​ನಲ್ಲಿ ಎಸ್​ಎಲ್​ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬುಶ್ರಾ ಮತೀನ್ ಈ ವಿಶೇಷ ಸಾಧಕಿ.


ನಗರದ ಜಹೀರುದ್ದೀನ್ ಎನ್ನುವವರ ಪುತ್ರಿಯಾಗಿರುವ ಇವರು ಸಿವಿಲ್ ಇಂಜಿನಿಯರಿಂಗ್‌ನ ಎಲ್ಲಾ 8 ಸೆಮಿಸ್ಟರ್​ಗಳಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಸಿವಿಲ್‌ ಇಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕ​ಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಬುಶ್ರಾ ಮತೀನ್‌ ಅವರು ತನ್ನ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ, ಪೋಷಕರು ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದು, ಮುಂದೆ ತಾನು ಯುಪಿಎಸ್​ಸಿ ಎಕ್ಸಾಂ ಪಾಸ್​ ಮಾಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಇಂದಿನಿಂದ 3 ದಿನಗಳ ಕಾಲ 'ಬೆಂಗಳೂರು - ಇಂಡಿಯಾ ನ್ಯಾನೋ' ಸಮಾವೇಶ: ಸಿಎಂ ಬೊಮ್ಮಾಯಿ ಚಾಲನೆ

ರಾಯಚೂರು: ಇಲ್ಲಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ 16 ಚಿನ್ನದ ಪದಕ​​ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ನಗರದ ಯರಮರಸ್ ಕ್ಯಾಂಪ್​ನಲ್ಲಿ ಎಸ್​ಎಲ್​ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬುಶ್ರಾ ಮತೀನ್ ಈ ವಿಶೇಷ ಸಾಧಕಿ.


ನಗರದ ಜಹೀರುದ್ದೀನ್ ಎನ್ನುವವರ ಪುತ್ರಿಯಾಗಿರುವ ಇವರು ಸಿವಿಲ್ ಇಂಜಿನಿಯರಿಂಗ್‌ನ ಎಲ್ಲಾ 8 ಸೆಮಿಸ್ಟರ್​ಗಳಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಸಿವಿಲ್‌ ಇಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕ​ಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಬುಶ್ರಾ ಮತೀನ್‌ ಅವರು ತನ್ನ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ, ಪೋಷಕರು ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದು, ಮುಂದೆ ತಾನು ಯುಪಿಎಸ್​ಸಿ ಎಕ್ಸಾಂ ಪಾಸ್​ ಮಾಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಇಂದಿನಿಂದ 3 ದಿನಗಳ ಕಾಲ 'ಬೆಂಗಳೂರು - ಇಂಡಿಯಾ ನ್ಯಾನೋ' ಸಮಾವೇಶ: ಸಿಎಂ ಬೊಮ್ಮಾಯಿ ಚಾಲನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.